ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಟ್ಟಿಗೆ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕನ್, ‘ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಎತ್ತಿಹಿಡಿಯಬೇಕು. ಭದ್ರತಾ ಮಂಡಳಿಯು ಎಲ್ಲರನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವುದರ ಜತೆಗೆ ಸಂಸ್ಥೆಯನ್ನು ಆಧುನೀಕರಿಸಬೇಕಾದ ಅವಶ್ಯಕತೆಯನ್ನು ಮನಗಂಡಿದ್ದೇವೆ’ ಎಂದು ತಿಳಿಸಿದರು.