ಕಾರ್ಯಕರ್ತರ ಮನವಿ ಆಲಿಸಿದ ನಿಖಿಲ್, ‘ಎಚ್ಡಿಕೆ ಅವರೇ ಮಂಡ್ಯ ಅಭ್ಯರ್ಥಿಯಾಗಲಿದ್ದಾರೆ ಎಂದಿರುವ ಪುಟ್ಟರಾಜು ಅವರು, ಅಲ್ಲಿನ ಜನರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಪರ್ಧೆ ಕುರಿತು ತಂದೆ, ತಾತ ಎಚ್.ಡಿ. ದೇವೇಗೌಡರು ಹಾಗೂ ಪಕ್ಷದ ಹಿರಿಯರು ತೀರ್ಮಾನಿಸಿಲ್ಲ. ಹಾಗೇನಾದರೂ ಇದ್ದರೆ, ಚನ್ನಪಟ್ಟಣ ಮತ್ತು ರಾಮನಗರ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು’ ಎಂದು ಸಮಾಧಾನಪಡಿಸಿದರು.