ಅಲ್ಲದೆ, ಈ ಕುರಿತು ಆಯೋಗಕ್ಕೆ ಪತ್ರ ಬರೆದಿರುವ ಶಿವಸೇನಾ (ಉದ್ಧವ್ ಠಾಕ್ರೆ ಬಣ), ಕಾನೂನು ಬದಲಿಸಲಾಗಿದೆಯೇ ಎಂದು ಪ್ರಶ್ನಿಸಿದೆ. ‘ನಮ್ಮ ಈ ಜ್ಞಾಪನಾಪತ್ರಕ್ಕೆ ಆಯೋಗ ಉತ್ತರಿಸಿಲ್ಲ. ಒಂದು ವೇಳೆ ಕಾನೂನುಗಳು ಬದಲಾಗಿದ್ದರೆ, ಚುನಾವಣಾ ರ್ಯಾಲಿಗಳಲ್ಲಿ ಹರಹರ ಮಹದೇವ್ ಎಂಬ ಘೋಷಣೆಗಳನ್ನು ಮೊಳಗಿಸುವೆವು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೇವೆ’ ಎಂದಿದ್ದಾರೆ.