ರಸ್ತೆ ಅಗೆದು ರಿಪೇರಿ ಮಾಡದೇ ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಇದರಿಂದಾಗಿ ಅನೇಕ ಪ್ರಯಾಣಿಕರು ಬದಲಿ ಮಾರ್ಗವನ್ನು ನೋಡಿಕೊಳ್ಳಬೇಕಾಗಿದೆ. ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಈ ಭಾಗದಲ್ಲಿ ಅವ್ಯವಸ್ಥೆ ಎದುರಾಗಿದೆ. ಎರಡು ತಿಂಗಳಾದರೂ ಸಮಸ್ಯೆ ಪರಿಹರಿಸಲು ಯಾರೂ ಗಮನಹರಿಸಿಲ್ಲ. ಈಗಲಾದರೂ ಅಧಿಕಾರಿಗಳು ಇತ್ತ ಗಮನಹರಿಸಲಿ.