ನವದೆಹಲಿ (ಪಿಟಿಐ): ಉಗ್ರರ ದಾಳಿಯಂತಹ ತುರ್ತು ಸನ್ನಿವೇಶವನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎನ್ನುವ ಬಗ್ಗೆ ದೇಶದಾದ್ಯಂತ ಶಾಲೆಗಳಿಗೆ ಸಮಗ್ರ ಮಾರ್ಗಸೂಚಿ ಕಳುಹಿಸಲಾಗಿದೆ.
ಪಾಕಿಸ್ತಾನದ ಪೆಶಾವರದ ಸೇನಾ ಶಾಲೆಯಲ್ಲಿ ತಾಲಿಬಾನ್ ಬಂಡುಕೋರರು ಮಕ್ಕಳ ಹತ್ಯಾಕಾಂಡ ನಡೆಸಿದ ಕಾರಣ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಗೃಹ ಸಚಿವಾಲಯ ಈ ಮಾರ್ಗಸೂಚಿ ಹೊರಡಿಸಿದೆ.
ಅಪಹರಣ ಯತ್ನ, ಮನಬಂದಂತೆ ಗುಂಡಿನ ದಾಳಿಯಂತಹ ಸನ್ನಿವೇಶವನ್ನು ಎದುರಿಸಲು ಮಕ್ಕಳು, ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಬೇಕು ಎಂದೂ ಹೇಳಲಾಗಿದೆ.
ಈ ಮಾರ್ಗಸೂಚಿಯನ್ನು ಓದಿ ಶಾಲಾ ಸಿಬ್ಬಂದಿ ಹಾಗೂ ಶಿಕ್ಷರ ಗಮನಕ್ಕೆ ತರಬೇಕು. ಇದನ್ನು ಕಾರ್ಯಗತಗೊಳಿಸುವುದಕ್ಕೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಶಾಲಾ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
*ಪ್ರತಿ ಶಾಲೆಯಲ್ಲೂ ಮೂರರಿಂದ ನಾಲ್ಕು ಗೇಟುಗಳನ್ನು ಒಳಗೊಂಡ ಕಾಂಕ್ರೀಟ್ ಕಾಂಪೌಂಡ್ ಇರಬೇಕು ಪ್ರತಿ ಗೇಟಿನಲ್ಲಿಯೂ ಮೂವರು ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯಬೇಕು