ಗಾಜಿಯಾಬಾದ್: ತೀವ್ರ ಕುತೂಹಲ ಮೂಡಿಸಿದ್ದ ಆರುಷಿ-ಹೇಮರಾಜ್ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯವು ತಲ್ವಾರ್ ದಂಪತಿ ರಾಜೇಶ್-ನೂಪುರ್ ಅವರು ತಪ್ಪಿತಸ್ಥರೆಂದು ಹೇಳಿದೆ.
2008ರಲ್ಲಿ ನಡೆದ ಈ ಕೊಲೆ ಪ್ರಕರಣದ ವಿಚಾರಣೆಯು ಕಳೆದ 15 ತಿಂಗಳಿನಿಂದ ನಡೆದಿತ್ತು. ಇದೀಗ ಸಿಬಿಐ ವಿಶೇಷ ನ್ಯಾಯಾಲಯವು ಕೊಲೆಯಾದ ಆರುಷಿಯ ಪೋಷಕರಾದ ತಲ್ವಾರ್ ದಂಪತಿಯೇ ಕೊಲೆ ಮಾಡಿದ ಅಪರಾಧಿಗಳು ಎಂದು ತೀರ್ಪು ನೀಡಿದೆ.