-
ಕೊನೆಗಳಿಗೆಯಲ್ಲಿ ರೋಚಕತೆ ಹೆಚ್ಚಿಸಿದ ‘ಸ್ನಾಕ್ ಡೌನ್ ಚಾಂಪಿಯನ್’
10 ಸಂಕೀರ್ಣ ಅಲ್ಗೋರಿತ್ಮಿಕ್ ಸಮಸ್ಯೆಗಳಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಉಕ್ರೇನ್ ನಿಂದ ಬೊರಿಸ್ ಮಿನೈವ್ ಮತ್ತು ಬೆಲಾರೂಸ್ನಿಂದ ಜೆನ್ನಡಿ ಕೊರೊಟ್ಕೆವಿಚ್ ‘ಸ್ನಾಕ್ ಡೌನ್ ಚಾಂಪಿಯನ್’ ಪಟ್ಟ ಮತ್ತು...1 ಗಂಟೆ ಹಿಂದೆ -
ಇಂದಿರಮ್ಮ, ದತ್ತರಾಜ್ಗೆ ಎಸ್.ಪಿ.ವರದರಾಜು ಪ್ರಶಸ್ತಿ
ಡಾ .ರಾಜಕುಮಾರ್ ಅವರ ಸೋದರ ಎಸ್.ಪಿ. ವರದರಾಜು ಹೆಸರಿನಲ್ಲಿ ನೀಡಲಾಗುತ್ತಿರುವ ಎಸ್.ಪಿ. ವರದರಾಜು ಪ್ರಶಸ್ತಿಗೆ ಈ ಬಾರಿ ರಂಗಭೂಮಿ ಕ್ಷೇತ್ರದ ಇಂದಿರಮ್ಮ ಮತ್ತು ಚಲನಚಿತ್ರ ಕ್ಷೇತ್ರದ ಹಿರಿಯ...1 ಗಂಟೆ ಹಿಂದೆ -
ಸಿನಿಮೋತ್ಸವದಲ್ಲಿ ಇರಲಿ ಈ ಚಿತ್ರಗಳ ಮೇಲೊಂದು ಕಣ್ಣು
ಕಥಾವಸ್ತು, ಕಟ್ಟಿಕೊಂಡ ಬಗೆ, ನಿರ್ಮಾಣ ಶಿಸ್ತು, ತಂತ್ರಜ್ಞಾನ, ಕಲಾಪ್ರಜ್ಞೆ, ಆಧುನಿಕ ಸಂವೇದನೆ, ಹೊಸ ದೃಷ್ಟಿಕೋನ... ಹೀಗೆ ಸಿನಿಮಾ ವೀಕ್ಷಕರದು ವಿಭಿನ್ನ ಹುಡುಕಾಟ. ಜಾಗತಿಕ ಸಿನಿಮಾ ಎಂದಾಗ ಕುತೂಹಲ,...1 ಗಂಟೆ ಹಿಂದೆ -
ಎಲ್ಲಾ ಬಣ್ಣಕ್ಕೆ ಪುರುಷರೂ ಜೈ ಎನ್ನಿ
‘ಪಿಂಕ್ ಅಂದ್ರೆ ಹುಡುಗೀರ್ ಕಲರ್. ಬ್ಲೂ ಅಂದ್ರೆ ಬಾಯ್ಸ್ ಕಲರ್’. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳೂ ಅಪ್ಪ ಅಮ್ಮನೊಂದಿಗೆ ಶಾಪಿಂಗ್ ವೇಳೆ ಹೀಗೆ ತಗಾದೆ ತೆಗೆಯುತ್ತಾರೆ. ಗುಲಾಬಿ...1 ಗಂಟೆ ಹಿಂದೆ
-
ಐಷಾರಾಮ ಬಾಡಿಗೆಗೆ
ವಿವಿಧ ಬ್ರ್ಯಾಂಡ್ಗಳ ಐಷಾರಾಮಿ ಕಾರುಗಳ ಬೆಲೆ ಕೇಳಿಯೇ ಕೆಲವರಿಗೆ ಬೆವರು... ಅಂಥ ಕಾರುಗಳನ್ನು ಕಣ್ತುಂಬಿಕೊಂಡರೆ ಸಾಕು ಎನ್ನುವವರೂ ಇದ್ದಾರೆ. ಈ ಕಾರುಗಳನ್ನು ಓಡಿಸಲು ಅವಕಾಶ ಸಿಕ್ಕರೆ ಹೇಗೆ? ...19 ಫೆಬ್ರವರಿ 2019 -
‘ಮಿಸೆಸ್ ಇಂಡಿಯಾ’ಗೆ ಮಗ ಡಯಟಿಷಿಯನ್!
20 ವರ್ಷದ ಮಗ ಇದ್ದರೂ, 42ರ ವಯಸ್ಸಿನಲ್ಲಿ ’ಮಿಸೆಸ್ ಇಂಡಿಯಾ‘ ಗೆದ್ದು ಏಷ್ಯಾ ಮಟ್ಟದಲ್ಲೂ ಹೆಸರು ಮಾಡಿರುವ ಕಾಜಲ್ ಭಾಟಿಯಾ ಅವರು ತಮ್ಮ ಫ್ಯಾಷನ್ ಜರ್ನಿಯನ್ನು ಮೆಟ್ರೊದೊಂದಿಗೆ...19 ಫೆಬ್ರವರಿ 2019 -
ವಿಶಿಷ್ಟ ಅನುಭವದ ಈಟ್ ಔಟ್
ಈಟ್ ಔಟ್. ವಿದ್ಯಾರಣ್ಯಪುರದ ಜನರಿಗೆ ಚಿರಪರಿಚಿತ ಮೊಬೈಲ್ ಕ್ಯಾಂಟಿನ್. ಸಂಜೆಯಾಗುತ್ತಿದ್ದಂತೆ ವಿದ್ಯಾರಣ್ಯಪುರದ ಬಸ್ ನಿಲ್ದಾಣದ ಎದುರಿಗೆ ಹಾಜರ್.19 ಫೆಬ್ರವರಿ 2019 -
‘ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ
ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸುವ ಉದ್ದೇಶದಿಂದ ‘ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ ಇದೇ 22ರ ಸಂಜೆ 6.45ಕ್ಕೆ ನಗರದ ಚೌಡಯ್ಯ ಸಭಾಂಗಣದಲ್ಲಿ ನಡೆಯಲಿದೆ.19 ಫೆಬ್ರವರಿ 2019
-
ಪರರಿಗೆ ನೆರವಾಗದಿರೆ ಬದುಕಿದ್ದು ಸತ್ತಂತೆ: ಶಿವರಾಜ್ ವಿ. ಪಾಟೀಲ್
‘ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದ್ದರೆ, ಬಡವರು ಹಾಗೂ ದಮನಿತರಿಗೆ ಕೈಲಾದಷ್ಟು ನೆರವಾಗಬೇಕು. ಇಲ್ಲದಿದ್ದರೇ ಸಮಾಜದಲ್ಲಿ ನಾವೂ ಬದುಕಿದ್ದು ಸತ್ತಂತೆ’ ಎನ್ನುವುದು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್...19 ಫೆಬ್ರವರಿ 2019 -
‘ಯಕ್ಷದೇಗುಲ ಸನ್ಮಾನ್’ ಪ್ರಶಸ್ತಿ ಪ್ರದಾನ
ಯಕ್ಷದೇಗುಲ ಸಂಸ್ಥೆಯು ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರಸಾದನ ಕಲಾವಿದ ಶಾಂತರಾಮ ಆಚಾರ್ಯ (ಮರಿ ಆಚಾರ್) ಅವರಿಗೆ ‘ಯಕ್ಷದೇಗುಲ ಸನ್ಮಾನ- 2019’ ಪ್ರಶಸ್ತಿ ನೀಡಿ...19 ಫೆಬ್ರವರಿ 2019 -
5 ಸಾವಿರದಿಂದ 25 ಕೋಟಿಗೆ ಏರಿದ ಬಚ್ಚನ್ ಸಂಭಾವನೆ!
ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿವೆ. ಈಗ ಬಾಲಿವುಡ್ನ ಸೂರ್ಯನಂತೆ ಬೆಳಗುತ್ತಿರುವ ಈ ಮಹಾನ್ ನಟನ ಆರಂಭಿಕ ದಿನಗಳು ಹಾಗಿರಲಿಲ್ಲ....19 ಫೆಬ್ರವರಿ 2019 -
ಗರ್ಭಿಣಿಯರ ರ್ಯಾಂಪ್ ವಾಕ್ಮೆ
ಮಾರತ್ತಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇತ್ತೀಚೆಗೆ ಇಲ್ಲಿ ಗರ್ಭಿಣಿಯರ ರ್ಯಾಂಪ್ ವಾಕ್ ಆಯೋಜಿಸಲಾಗಿತ್ತು.18 ಫೆಬ್ರವರಿ 2019
-
ನಿಜ ಹೂವಿಗೆ ಸಮ ಘಮವಿಲ್ಲದ ಕುಸುಮ
ಮದುವೆ ಮನೆಗಳಲ್ಲಿ ಈಗ ಬಗೆ ಬಗೆಯ ಹೂವಿನದೇ ಘಮಲು ಇರುವುದಿಲ್ಲ. ಮದುಮಗಳಿಗೆಂದೇ ತಾಜಾ ಮೊಗ್ಗಿನ ದಂಡೆಗಳನ್ನು ಎತ್ತಿಟ್ಟು ಜೋಪಾನ ಮಾಡಬೇಕಿಲ್ಲ. ಅವಳ ಸೀರೆಗೆ, ಒಡವೆಗೆ ಒಪ್ಪುವ ಹೂವುಗಳು...18 ಫೆಬ್ರವರಿ 2019 -
ಸಿನಿಮಾ ಸಾಹಸ ಪರಿಕರಗಳ ಮಳಿಗೆ
ಹೊಡೆದಾಟದ ದೃಶ್ಯಗಳು ನೈಜವಾಗಿ ಮೂಡಿಬರಲು ಸಾಹಸ ದೃಶ್ಯಗಳಿಗೆ ಬೇಕಾದ ಡಮ್ಮಿ ಪರಿಕರಗಳನ್ನು ಮಾಡುವ ಕಲಾವಿದರ ಗುಂಪೇ ಸಿನಿಮಾದ ನೇಪಥ್ಯದಲ್ಲಿರುತ್ತದೆ. ಅಂಥ ಡಮ್ಮಿ ಪರಿಕರಗಳನ್ನು ಮಾಡಿಕೊಡುವಲ್ಲಿ ನೈಪುಣ್ಯ ಸಾಧಿಸಿರುವ...18 ಫೆಬ್ರವರಿ 2019 -
ತನಿಷ್ಕ್ನಿಂದ ಆಕರ್ಷಕ ಆಭರಣ
ತನಿಷ್ಕ್ ಮಿಯಾ ಸಂಸ್ಥೆ ಇತ್ತೀಚೆಗೆ ವಿನೂತನ ಆಭರಣಗಳ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಆಕರ್ಷಕ ಆಭರಣಗಳು ಫ್ಯಾಷನ್ ವಲಯವನ್ನು ಆಕರ್ಷಿಸುವಂತಿವೆ.18 ಫೆಬ್ರವರಿ 2019 -
ರಂಗನಿರಂತರದ ಹೊಸ ನಾಟಕ ಕಾರ್ಯಾಗಾರ
ನಾಟಕಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವ ಯುವಕ-ಯುವತಿಯರನ್ನು ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳನ್ನು ರಂಗಭೂಮಿಗೆ ಪರಿಚಯಿಸಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಉದ್ದೇಶದಿಂದ ಹೊಸಬರನ್ನು ಆಯ್ಕೆ ಮಾಡಲಾಗುತ್ತಿದೆ.18 ಫೆಬ್ರವರಿ 2019
-
ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಮಂಗಳವಾರ ಮುಂಜಾನೆ ಅಭಿಷೇಕ, ಹೋಮ, ಹವನಗಳು, ನಡೆಯಲಿದ್ದು, 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಾದ್ಯಗೋಷ್ಠಿ, ಮೊಬೈಲ್ ಆರ್ಕೆಸ್ಟ್ರಾ ನಡೆಯಲಿದ್ದು ಜನರನ್ನು ರಂಜಿಸಲಿವೆ.18 ಫೆಬ್ರವರಿ 2019 -
ಸಿಟಿಜನರ ಶ್ರದ್ಧಾಂಜಲಿ, ಪ್ರಗತಿಪರರ ಶಾಂತಿ ಅಂಬಲಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಕಂಬನಿ ಮಿಡಿಯದ ಜನರಿಲ್ಲ. ರಾಜರಾಜೇಶ್ವರಿ, ಹೆಗಡೆ ನಗರ, ಕೆ.ಆರ್. ಪುರ ಸೇರಿದಂತೆ ಇಡೀ ನಗರದ ಜನತೆ ವಿವಿಧ ಪ್ರದೇಶಗಳಲ್ಲಿ...18 ಫೆಬ್ರವರಿ 2019 -
ಮಜಲಿಸ್: ಕುಳಿತು ಊಟದ ಸುಖ
‘ಕರಾಮಾ’ ಈ ರೆಸ್ಟೊರೆಂಟ್ನ ವಿಶೇಷವೆಂದರೆ ಇಲ್ಲಿ ಕುಳಿತು ಊಟ ಮಾಡಲು ವಿಶೇಷ ವ್ಯವಸ್ಥೆ ಇದೆ. ಅದಕ್ಕೆ ಮಜಲಿಸ್ (ಆನಂದ ಮತ್ತು ಉತ್ಸಾಹದ ಕೂಟ ಎಂದರ್ಥ) ಎಂಬ ಹೆಸರು....16 ಫೆಬ್ರವರಿ 2019 -
‘ಸೇವ್ ಕ್ಯಾನ್ಸರ್ ಕಿಡ್ಸ್’
ಗಾಯಕಿ ಶಮಿತಾ ಮಲ್ನಾಡ್, ತಮ್ಮ ‘ಸ್ವರಸನ್ನಿಧಿ ಟ್ರಸ್ಟ್’ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುವ ಶಾಶ್ವತ ಯೋಜನೆಯೊಂದನ್ನು ‘ಸೇವ್ ಕ್ಯಾನ್ಸರ್ ಕಿಡ್ಸ್’ ಅಭಿಯಾನದ ಮೂಲಕ ಸಾಕಾರಗೊಳಿಸಲು ಹೊರಟಿದ್ದಾರೆ....16 ಫೆಬ್ರವರಿ 2019

ಕ್ರಿಕೆಟರ್ ‘ಜಿಮ್ಮಿ’ ವರಸೆಯಲ್ಲಿ ಸಾಖಿಬ್
6 ಗಂಟೆಗಳ ಹಿಂದೆ

11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಬಾಲಿವುಡ್ ತಾರೆಯರು ದುಬಾರಿ!
24 ಗಂಟೆಗಳ ಹಿಂದೆ

‘ಹಳೆ ಪುರಾಣದ ಕಾಲ ಇದಲ್ಲ’
18 ಫೆಬ್ರವರಿ 2019

ಬೆಳದಿಂಗಳ ಬಾಲೆ @ 2019
18 ಫೆಬ್ರವರಿ 2019
ಮೇಷ
ನಿಮ್ಮ ಅನೇಕ ರೀತಿಯ ರಾಜತಾಂತ್ರಿಕ ಪರಿಜ್ಞಾನ ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಬೇಕಾದ ಧನ ಸಹಾಯ ಹರಿದು ಬರುತ್ತದೆ. ಆದರೆ ನೀವು ನಂಬಿದ್ದ ಗೆಳೆಯರೇ ಸಹಾಯ ಮಾಡಲು ಹಿಂದೆಗೆಯುವರು. ಕ್ಷಣಿಕ ಆಸೆಗೆ ಮಹತ್ತರವಾದ ಯೋಜನೆಗಳನ್ನು ಮರೆಯಬೇಡಿರಿ, ಆದ್ಯತೆಯ ಮೇಲೆ ಕೆಲಸ ಮಾಡಿದಲ್ಲಿ ಉತ್ತಮ ಫಲದ ಸೂಚನೆ. ನೀವು ಕೂಡಿಟ್ಟ ಹಣ ಈಗ ಇಡು ಗಂಟಾಗಿ ಬರುತ್ತದೆ. ನಿಮ್ಮ ಕೆಲಸಗಾರರನ್ನು ವಿಶ್ವಾಸವಿಟ್ಟು ಮಾತಾಡಿಸಿದಲ್ಲಿ ಕೆಲಸ ಹಗುರಾಗುವುದು ಮತ್ತು ನಿಮ್ಮನ್ನು ಹೆಚ್ಚು ಗೌರವದಿಂದ ಕಾಣುವರು.
ವೃಷಭ
ನೀವು ಬೇರೆಯವರಿಗೆ ಗುತ್ತಿಗೆ ಕೊಟ್ಟಿದ್ದ ಕೆಲಸಗಳ ಮೇಲೆ ನಿಗಾ ಇಡುವುದು ಒಳ್ಳೆಯದು. ಅಪರಿಚಿತ ಊರು ಅಥವಾ ಸ್ಥಳಗಳಿಗೆ ಉದ್ಯೋಗದ ಮೇಲೆ ಹೋಗಬಹುದು. ಹೊಸ ಊರುಗಳಲ್ಲಿ ನಿಮಗೆ ಬೇಕಾದ ಸೌಕರ್ಯಗಳು ದೊರೆತು ಸುಖವೆನಿಸುತ್ತದೆ. ಸಾಗರೋತ್ತರ ಕೆಲಸಕ್ಕೆ ಹೋಗುವವರಿಗೆ ಉತ್ತಮ ಅವಕಾಶವಿದೆ. ಧನಾದಾಯ ಉತ್ತಮವಾಗಿರುತ್ತದೆ. ಹೊಸಬರೊಂದಿಗೆ ಪರಿಚಯ ಬೆಳೆದು ಅವರೊಡನೆ ವಿಶ್ವಾಸ ವೃದ್ಧಿಸುತ್ತದೆ. ಕುಟುಂಬದವರು ಯಾತ್ರೆಯನ್ನು ಕೈಗೊಳ್ಳಬಹುದು.
ಮಿಥುನ
ರಾಜಕಾರಣಿಗಳು ಸಾಕಷ್ಟು ಉದ್ರೇಕವಾಗಿ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಮುಂದೊಂದು ದಿನ ಅದು ನಿಮಗೆ ವಾಪಸ್ಸು ಬರಬಹುದು. ಇದು ಅಧಿಕಾರಕ್ಕೂ ಮಾರಕವಾಗಬಹುದು. ವಿದೇಶಿ ಪ್ರವಾಸದ ಅವಕಾಶಗಳು ಒದಗಿಬರುತ್ತವೆ. ಈ ಬಗ್ಗೆ ಮನೆಯೊಡತಿಯೊಡನೆ ಚರ್ಚಿಸಿ ತೀರ್ಮಾನಿಸಿರಿ. ಸಾರ್ವಜನಿಕ ಸಹಾಯ ಸಂಸ್ಥೆಗಳನ್ನು ನಡೆಸುವವರಿಗೆ ಉತ್ತಮ ಸಹಕಾರ ದೊರೆತು ಅವರ ಸಹಾಯ ಸಾಕಷ್ಟು ಜನರಿಗೆ ತಲುಪುತ್ತವೆ. ಯುವಕರಿಗೆ ನಿಮ್ಮ ವಿಚಾರ ಧಾರೆಗಳನ್ನು ತುಂಬಿ ಅವರು ದೇಶ ಸೇವೆಗಾಗಿ ಪ್ರೇರೇಪಿಸುವರು.
ಕಟಕ
ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಸೌಲಭ್ಯಗಳು ದೊರೆತು ಸಾಕಷ್ಟು ಪ್ರಗತಿಯುಂಟಾಗುವುದು. ಕವಿಗಳಿಗೆ ಮತ್ತು ಬರಹಗಾರರಿಗೆ ಉತ್ತಮ ಪ್ರಕಾಶಕರು ದೊರೆತು ಅವರ ಪುಸ್ತಕಗಳು ಹೊರ ಬರುತ್ತವೆ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ನಿಮಗಾಗುವ ಸೋಲನ್ನು ಕೆಲವರು ಸಂತೋಷಿಸುವರು. ನಿಮ್ಮ ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ನಂತರ ಹಿರಿಯರ ಬುದ್ಧಿ ಮಾತಿನಿಂದ ಸರಿಯಾಗುವರು. ಹಿರಿಯರಿಗೆ ಅವರಿಗೆ ಬೇಕಾದ ಸರ್ಕಾರಿ ದಾಖಲೆಗಳು ದೊರೆತು ಅನುಕೂಲವಾಗುತ್ತದೆ
ಸಿಂಹ
ನಿಮ್ಮ ಸುತ್ತಲಿನ ಜನರು ನೀವು ಒಳ್ಳೆಯ ಕಾರ್ಯಗಳನ್ನು ಪ್ರೇರೇಪಿಸುವರು ಮತ್ತು ನಿಮ್ಮ ಒಳ್ಳೆಯ ತನವನ್ನು ಗೌರವಿಸುವರು. ನಿಮ್ಮ ಹಿಂದಿನ ಕಾರ್ಯದ ಸಾಧನೆ ನಿಮ್ಮ ಮುಂದಿನ ಸಾಧನೆಯ ಮೆಟ್ಟಿಲುಗಳಾಗುತ್ತವೆ. ಮಾಡಿದ ತಪ್ಪುಗಳನ್ನು ಮರೆತು ಎಲ್ಲರಲ್ಲಿ ಬೆರೆಯಿರಿ. ಕೆಲವು ಕಾರ್ಯಗಳ ಹಿನ್ನಡೆ ನಿಮ್ಮನ್ನು ಧೃತಿಗೆಡಿಸಬಹುದು. ಸಂಗಾತಿಯ ವಿದ್ಯಾಭ್ಯಾಸ ನಿಧಾನವಾಗಿ ಮುಂದುವರೆಯಬಹುದು. ಸಂಗಾತಿಗೆ ಅವರ ತವರಿನಿಂದ ಪಾಲು ದೊರೆತು ಅದರೊಡನೆ ಧನ ಸಹ ದೊರೆಯುವುದು.
ಕನ್ಯಾ
ಜನರನ್ನು ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕಾರ್ಯದಿಂದ ಕಚೇರಿಯಲ್ಲಿ ಹೆಸರನ್ನು ಗಳಿಸುವಿರಿ. ಹೊಸ ಹೊಸ ಆಲೋಚನೆ ಮಾಡುವಿರಿ ಮತ್ತು ಕೆಲವು ಸಂದಿಗ್ಧತೆಯನ್ನು ನಿವಾರಿಸುವಿರಿ. ಎಲ್ಲಾ ಕಾಲದಲ್ಲೂ ಮೌನ ಸರಿಯಲ್ಲ. ಸತ್ಯ ಗೊತ್ತಿದ್ದರೂ ಸುಮ್ಮನಿರುವುದು ತಪ್ಪಾಗಬಹುದು. ಬಂಧುಗಳಿಂದ ಹೆಚ್ಚಿನ ಸಹಕಾರವೇ ಸಿಗುತ್ತದೆ. ಕದ್ದು ಮುಚ್ಚಿ ಮಾಡುತ್ತಿದ್ದ ಪ್ರೇಮವು ಹಿರಿಯರಿಗೆ ತಿಳಿದು ಸ್ವಲ್ಪ ಮುಜುಗರವಾಗುತ್ತದೆ. ಆಹಾರವನ್ನು ತಯಾರಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ ಮತ್ತು ಅದರ ಪೂರೈಕೆ ವ್ಯವಸ್ಥೆಯು ವಿಸ್ತಾರವಾಗುತ್ತದೆ.
ತುಲಾ
ಧನಾದಾಯವು ಉತ್ತಮವಾಗಿರುತ್ತದೆ. ಪ್ರತಿಯೊಬ್ಬರಿಗೂ ಆತ್ಮಗೌರವ ಇರುತ್ತದೆ. ಆದ್ದರಿಂದ ಯಾರನ್ನೂ ಅಲಕ್ಷಿಸಬೇಡಿರಿ. ಮುಂದೊಂದು ದಿನ ಉಪಯೋಗಕ್ಕೆ ಬರುವರು. ಪಾಲುದಾರಿಕೆಯಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಸ್ಥಾನಮಾನ ಸಿಗುವುದು. ಈಗಿನ ನಿಮ್ಮ ಹೂಡಿಕೆ ಮುಂದಿನ ಜೀವನಕ್ಕೆ ಭದ್ರ ಬುನಾದಿಯಾಗುವುದು. ಪಿತ್ರಾರ್ಜಿತ ಆಸ್ತಿಗಳ ಮೇಲೆ ಸಾಲ ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸುವಿರಿ. ಕುಲದ ವ್ಯವಹಾರಗಳನ್ನು ನಡೆಸುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಗಣಿತ ಉಪನ್ಯಾಸಕರಿಗೆ ಉತ್ತಮ ಗೌರವ ಸಿಗುತ್ತದೆ.
ವೃಶ್ಚಿಕ
ಹೊಸ ಜವಾಬ್ದಾರಿಯನ್ನು ನಿಮ್ಮ ಸಂಸ್ಥೆಯವರು ನಿಮಗೆ ಕೊಡುವರು. ಕೈ ತಪ್ಪಿದ ಜವಾಬ್ದಾರಿಗಳು ನಿಮಗೆ ವಾಪಸ್ಸಾಗುತ್ತದೆ. ಕೆಲವು ಸಮಸ್ಯೆಗಳನ್ನು ಪರಿಹರಿಸಿ ದಿಢೀರನೆ ಮುನ್ನೆಲೆಗೆ ಬರುವಿರಿ. ರಾಜಕಾರಣಿಗಳಿಗೆ ಮಿಶ್ರ ಫಲವಿದೆ. ಕೆಲವರಿಗೆ ದಿಢೀರನೆ ಸ್ಥಾನಮಾನ ದೊರೆತರೆ ಕೆಲವರಿಗೆ ಹಿನ್ನಡೆಯಾಗಬಹುದು. ನಿಮ್ಮ ದೂರದೃಷ್ಟಿಯಿಂದ ನಿಮ್ಮ ವ್ಯವಹಾರಗಳು ನಿಮ್ಮ ತಪ್ಪದಂತೆ ನೋಡಿಕೊಳ್ಳುವಿರಿ. ನಿಮ್ಮ ವ್ಯವಹಾರಗಳು ನೋಡಿ ಅದರ ಬಗ್ಗೆ ಅನುಭವ ಪಡೆದುಕೊಳ್ಳಲು ಯುವಕರು ಬರುವರು.
ಧನು
ಹೊಸ ಹೊಸ ಸ್ನೇಹಿತರು ಸಿಗುವರು. ಇದರಿಂದ ನಿಮ್ಮ ಸಂತೋಷ ಕೂಟಕ್ಕೆ ಅರ್ಥ ಬರುತ್ತದೆ. ಇದರಿಂದ ಧನ ಲಾಭದ ಜೊತೆಗೆ ವ್ಯವಹಾರಗಳ ಬಗ್ಗೆ ಪ್ರಸ್ತಾಪ ಬಂದೇ ಬರುತ್ತದೆ. ಹಣ ಕೊಡುವುದಿಲ್ಲ ಎಂದು ಜಗಳವಾಡಿ ಹೋಗಿದ್ದವರು ಈಗ ಹಂತ ಹಂತವಾಗಿ ತೀರಿಸಲು ಒಪ್ಪುವರು. ಕಗ್ಗಂಟಾಗಿದ್ದ ಮಗಳ ವಿವಾಹವು ಈಗ ನೆರವೇರುತ್ತದೆ. ಈ ಕಗ್ಗಂಟವನ್ನು ಹುಟ್ಟು ಹಾಕಿದವರು ನಿಮ್ಮ ಬಂಧುಗಳೇ ಅಗಿರುವರು. ಅನಿರೀಕ್ಷಿತ ತೊಂದರೆಗಳು ಬಂದರೂ ಅದನ್ನು ನಿವಾರಣೆ ಮಾಡಿಕೊಳ್ಳುವಿರಿ. ನಿಮ್ಮನ್ನು ಟೀಕಿಸುತ್ತಿದ್ದವರು ಈಗ ಸುಮ್ಮನಾಗುವರು.
ಮಕರ
ಸ್ವಲ್ಪ ಜನರನ್ನು ಆಳುವ ಶಕ್ತಿ ಇರುತ್ತವೆ. ಎದುರಾಳಿಯನ್ನು ಮಟ್ಟ ಹಾಕುವ ಶಕ್ತಿ ಇರುತ್ತದೆ. ಆದರೂ ಅನಗತ್ಯವಾಗಿ ಸಿಟ್ಟಿಗೆ ಅವಕಾಶ ಕೊಡಬೇಡಿರಿ. ಬರಲಾರದೆಂದು ಕೊಂಡಿದ್ದ ಹಣ ಹರಿದು ಬರುತ್ತದೆ. ನಿಮ್ಮ ಟೀಕಿಸುವವರಿಗೆ ಸರಿಯಾಗಿ ಉತ್ತರ ಕೊಟ್ಟು ಬಾಯಿ ಮುಚ್ಚಿಸುವಿರಿ. ವ್ಯವಹಾರದಲ್ಲಿ ನಿಮ್ಮದೇ ಆದ ಛಾಪನ್ನು ಮೂಡಿಸಿ ವ್ಯವಹಾರವನ್ನು ಹತೋಟಿಗೆ ತೆಗೆದುಕೊಳ್ಳುವಿರಿ. ಇದರಿಂದ ವ್ಯವಹಾರದ ಒಳಗುಟ್ಟುಗಳು ತಿಳಿಯುತ್ತದೆ. ಮಕ್ಕಳ ವಿದ್ಯಾ ಪ್ರಗತಿಯು ಉತ್ತಮವಾಗಿದ್ದು ಒಳ್ಳೆ ಫಲಿತಾಂಶವಿರುತ್ತದೆ.
ಕುಂಭ
ನಿಮ್ಮ ಹಳೆಯ ದಾಖಲೆಗಳನ್ನು ಜೋಪಾನವಾಗಿಡಿರಿ. ಇದಕ್ಕೆ ಮುಂದೆ ಬೆಲೆ ಬರುತ್ತದೆ. ಆತ್ಮವಿಶ್ವಾಸ ಹೆಚ್ಚಿಸಿದ್ದು ಹೃದಯ ಶ್ರೀಮಂತಿಕೆಯ ಜೊತೆ ಇತರಿಗೆ ಸಹಾಯ ಮಾಡುವಿರಿ. ನಿಮ್ಮ ವಿರೋಧಿಗಳು ನಿಮ್ಮ ಅಪವಾದ ಮಾಡುವರು. ಆದರೂ ದೈವಬಲದಿಂದ ಗೆದ್ದು ಬರುವಿರಿ. ಧನಾದಾಯವು ನಿಧಾನವಾಗಿ ವೃದ್ಧಿಸುತ್ತದೆ. ಶಾಲಾ ಕಾಲೇಜುಗಳನ್ನು ಸ್ಥಾಪಿಸಬೇಕೆಂದಿರುವವರಿಗೆ ಉತ್ತಮ ಅವಕಾಶಗಳಿವೆ. ಉತ್ತಮವಾಗಿ ನಡೆಯುತ್ತಿರುವ ಶಾಲೆಗಳನ್ನು ಖರೀದಿ ಮಾಡಬಹುದು. ವೃತ್ತಿಯಲ್ಲಿದ್ದ ಸಹಪಾಠಿಗಳ ತೊಂದರೆ ನಿವಾರಣೆಯಾಗುತ್ತದೆ.
ಮೀನ
ನಿಮ್ಮ ಮೇಲೆ ಪದೇ ಪದೇ ಕುಹುಕ ಮಾತುಗಳನ್ನು ಆಡುತ್ತಿದ್ದವರನ್ನು ಬಾಯಿ ಮುಚ್ಚಿಸುವಿರಿ. ಇಂತಹವರ ಬಗ್ಗೆ ಹೆಚ್ಚು ಗಮನಹರಿಸಬೇಡಿರಿ. ವಿದ್ಯಾರ್ಥಿಗಳಿಗೆ ಸಂತಸದ ಕಾಲ ಉತ್ತಮ ಫಲಿತಾಂಶ ಸಿಗುತ್ತದೆ. ನಿಮ್ಮ ಹಳೆಯ ಸ್ನೇಹಿತರೊಬ್ಬರೊಡನೆ ಕೂಡಿ ಮಾಡಿದ ವ್ಯವಹಾರ ಲಾಭವನ್ನು ತರುತ್ತದೆ. ಹಣದ ಹರಿವು ಸಾಮಾನ್ಯವಾಗಿದ್ದು ಖರ್ಚು ಕಡಿಮೆ ಇರುತ್ತದೆ. ನೃತ್ಯಪಟುಗಳಿಗೆ ಉತ್ತಮ ವೇದಿಕೆ ಬರುತ್ತದೆ ಹಾಗೂ ದೊಡ್ಡ ದೊಡ್ಡ ವೇದಿಕೆಗಳು ದೊರೆಯುತ್ತವೆ.
ಮೇಷ
ವರ್ಷಾರಂಭದಲ್ಲಿ ಕಳೆದ ಸಂವತ್ಸರದಂತೆ ಸಿಹಿ ಫಲಗಳನ್ನೇ ಕಾಣುವಿರಿ. ಅಭೀಷ್ಟಾರ್ಥಾಗಮನದಿಂದಲೂ ಸ್ನೇಹ, ಸಹಾಯ, ಸೌಭಾಗ್ಯ ವರ್ಧನೆಯಿಂದಲೂ ಜೀವನ ಆಶಾದಾಯಕವಾಗಲಿದೆ. ವರ್ಷದ ಉತ್ತರಾರ್ಧದಲ್ಲಿ ಅಷ್ಟಮಕ್ಕೆ ಹೋಗುವ ಗುರುವಿನ ಪ್ರಭಾವದಿಂದಾಗಿ ಖರ್ಚು, ದುಃಖ, ನೋವುಗಳನ್ನು ಎದುರಿಸ ಬೇಕಾದರೂ ಭಾಗ್ಯದ ಶನಿಯಿಂದ ಸುಖ-ದುಃಖಗಳ ಮಿಶ್ರಫಲವನ್ನು ಹೊಂದುವಿರಿ. ತಂದೆ-ತಾಯಿ ಅಥವಾ ಪೋಷಕರ ಶುಶ್ರೂಷೆ, ಚಿಕಿತ್ಸೆ ಸಂಭವದಿಂದ ಆರ್ಥಿಕ ಸ್ಥಿತಿಯಲ್ಲಿ ಏರು– ಪೇರು ಕಾಣುವಿರಿ. ರಾಜಕೀಯ ಧುರೀಣರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಅನಾರೋಗ್ಯಕ್ಕೆ ಕಾರಣವಾದೀತು. ಕಾರ್ಯಕ್ಷೇತ್ರದಲ್ಲಿ ಏನನ್ನೋ ಸಾಧಿಸಿದ ಹೆಮ್ಮೆ ನಿಮ್ಮದಾಗಲಿದೆ. ಮಹಾಗಣಪತಿಯನ್ನು ಅನನ್ಯ ಭಾವದಿಂದ ಆರಾಧಿಸಿ.
ವೃಷಭ
ಹಲವು ಬಗೆಯ ಆರ್ಥಿಕ ಒತ್ತಡಗಳಿಂದ, ಅನಾರೋಗ್ಯ ಮತ್ತು ಶತ್ರು ಪೀಡೆಗಳಿಂದ ಬೇಸತ್ತಿರುವ ನಿಮಗೆ ವರ್ಷದ ಉತ್ತರಾರ್ಧದಲ್ಲಿ ಸತ್ಫಲಗಳನ್ನು ಅನುಭವಿಸುವ ಯೋಗವಿದೆ. ಅಕ್ಟೋಬರ್ ನಂತರ ಅವಿವಾಹಿತರಿಗೆ ವಿವಾಹ ಭಾಗ್ಯ. ಪಿತ್ರಾರ್ಜಿತವಾಗಿ ಬಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ, ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ಶೀತ– ಕಫದಂತಹ ಬೇನೆಯನ್ನು ನಿರ್ಲಕ್ಷಿಸಬೇಡಿ. ಮಿತ್ರ-ಶತ್ರು, ಬಂಧು-ಬಾಂಧವರಲ್ಲಿ ಯಾವುದೇ ವಿಚಾರದಲ್ಲೂ ವಿರೋಧವನ್ನು ವ್ಯಕ್ತಪಡಿಸಬೇಡಿ. ಕಾರ್ಯ ಕ್ಷೇತ್ರದಲ್ಲಿ ಶಾಂತ ಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡಲು ತೀರ್ಮಾನಿಸುವಿರಿ. ತಾಯಿ ರಾಜರಾಜೇಶ್ವರಿಯ ದರ್ಶನ, ಸೇವೆಯನ್ನು ಮಾಡುವುದರಿಂದ ಯಶಸ್ಸಿದೆ.
ಮಿಥುನ
ಕಳೆದ ವರ್ಷವಿಡೀ ಸುಖದ ಸಾಗರದಲ್ಲಿ ಪ್ರಯಾಣಿಸಿದ ನೀವು ಈ ವರ್ಷವೂ ಪ್ರಯಾಣವನ್ನು ಮುಂದುವರಿಸುವಿರಿ. ಪಂಚಮದ ಗುರುವಿನ ಅನುಗ್ರಹದಿಂದಾಗಿ ಅಪೇಕ್ಷಿತ ದಂಪತಿಗಳಿಗೆ ಪುತ್ರಲಾಭ, ಇತರರಿಗೆ ಧಾರ್ವಿಕ ಕೃತ್ಯಗಳಿಂದ ಪುಣ್ಯ ಸಂಪಾದನೆ. ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ ವರ್ಷದ ಮೊದಲ ಮೂರು ತಿಂಗಳು ಬಹು ಸಂತೋಷದಿಂದ ಕಳೆಯಲಿದ್ದೀರಿ. ಧನಾಗಮನಕ್ಕೇನೂ ಕೊರತೆಯಿರದು. ಆದರೆ ಸಂಗ್ರಹ ಪೂರ್ತಿ ಸೋರಿ ಹೋಗಬಹುದು. ಎಚ್ಚರಿಕೆ ಹೆಜ್ಜೆ ಹೆಜ್ಜೆಗೂ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿಯಿದೆ. ಗಣಿತ ಶಿಕ್ಷಕರಿಗೆ, ಸಂಗೀತ ಸಾಧಕರಿಗೆ, ಕ್ರೀಡಾಪಟುಗಳಿಗೆ, ಚಿತ್ರಕಾರರಿಗೆ, ಪತ್ರಿಕೋದ್ಯಮಿಗಳಿಗೆ ಪುರಸ್ಕಾರಗಳನ್ನು ಪಡೆಯುವ ಕಾಲ ಒದಗಿ ಬರಲಿದೆ. ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಿ ಇಷ್ಟಾರ್ಥಗಳನ್ನು ಸಂಪಾದಿಸಿಕೊಳ್ಳಿರಿ.
ಕಟಕ
ತ್ತಲೆಯ ಪ್ರಪಂಚದಲ್ಲಿರುವ ನಿಮ್ಮ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಆಗಸ್ಟ್ ತಿಂಗಳಲ್ಲಿ ಪಿತ್ರಾರ್ಜಿತ ಆಸ್ತಿಗಳು ಅಥವಾ ಆರ್ಥಿಕ ಲಾಭಗಳು ದೊರಕಲಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ನೇತ್ರ ತಪಾಸಣೆ ಮಾಡಿಸಬೇಕಾದೀತು. ರೈತಾಪಿ ವರ್ಗದವರಿಗೆ, ಚಾಲಕ ವೃತ್ತಿಯವರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ದುಪ್ಪಟ್ಟು ಲಾಭ ಪಡೆಯುವ ಅವಕಾಶವಿದೆ. ತಂದೆ– ತಾಯಿಗೆ ತೀರ್ಥ ಯಾತ್ರೆ ಯೋಗವಿದೆ. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಊರಿನ ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲಗಳನ್ನು ಪಡೆಯುವಿರಿ.
ಸಿಂಹ
ಪಂಚಮದ ಶನಿಯಿಂದಾಗಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ನಿಮಗೆ ಈ ವರ್ಷವು ಮಿಶ್ರ ಫಲವನ್ನು ಕೊಡಲಿದೆ. ಆನುವಂಶಿಕವಾದ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರವಾಸ, ಪುಣ್ಯಕ್ಷೇತ್ರ ದರ್ಶನಗಳು ಜರುಗಲಿವೆ. ಪ್ರಯಾಣದಲ್ಲಿ ವಂಚನೆ, ಚೌರ್ಯ, ನಷ್ಟದ ಪ್ರಸಂಗಗಳಿದ್ದು ಎಚ್ಚರಿಕೆಯಿಂದಿರಿ. ಕಿರಾಣಿ ಅಂಗಡಿ, ಇಟ್ಟಿಗೆ, ಕಬ್ಬಿಣ, ಯಂತ್ರಸಾಮಗ್ರಿಗಳ ಮಾರಾಟ ಏರುಗತಿಯಲ್ಲಿ ನಡೆದೀತು. ವಾಹನ ಖರೀದಿಯ ನಿಮ್ಮ ಆಲೋಚನೆ ನೆರವೇರಲಿದೆ. ನೀವು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ವರ್ಷದ ಕೊನೆಯ ತನಕ ಭಾಗ್ಯ ವೃದ್ಧಿಯಿದ್ದರೂ ರಕ್ತಸಂಬಂಧಿ ಕಾಯಿಲೆಯ ಲಕ್ಷಣ ಕಾಣಿಸೀತು. ದಾಂಪತ್ಯದಲ್ಲಿ ನೆಮ್ಮದಿ ಕಾಪಾಡಿಕೊಳ್ಳಿ. ದೈವಚಿಂತನೆಯನ್ನು ಬಿಡದಿರಿ.
ಕನ್ಯಾ
ಈ ವರ್ಷದ ಮೊದಲಾರ್ಧದಲ್ಲಿ ನೀವು ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ. ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿದೆ. ಕೈತಪ್ಪಿ ಹೋದ ಹಣ ಕೈ ಸೇರುವುದು. ವಾತ-ಪಿತ್ಥಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು, ಜೊತೆಗೆ ಲಾಭವೂ ಇದೆ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯವಾಗುವುದು. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ. ಉನ್ನತ ವ್ಯಾಸಂಗಕ್ಕೆ ವಿದೇಶಯಾನದ ಅವಕಾಶವಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರ ವರ್ಗದವರ ಬೆಂಬಲ ಸಿಗಲಿದೆ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
ತುಲಾ
ಕಳೆದ ವರ್ಷದಲ್ಲಿ ನೀವು ಅನುಭವಿಸಿದ ಸಮಸ್ತ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಖರ್ಚು, ವೆಚ್ಚಗಳು ವರ್ಷದ ಮೊದಲಾರ್ಧದವರೆಗೆ ಹಿಂದಿನಂತೆಯೇ ನಡೆಯಲಿವೆ. ಅಪವಾದದ ಆರೋಪ ಹೊತ್ತಿರುವ ನಿಮಗೆ ನ್ಯಾಯ ಸಿಗಲಿದೆ. ಮನೆಯಲ್ಲಿ ಮಂಗಳ ಕಾರ್ಯ ಜರುಗುವುದು. ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಸೇವಕ ವರ್ಗದವರಿಗೆ, ಆರಕ್ಷಕರಿಗೆ, ತಾಂತ್ರಿಕರಿಗೆ ಉದ್ಯೋಗದಲ್ಲಿ ಸನ್ಮಾನ ಅಥವಾ ಮುಂಬಡ್ತಿ ದೊರಕಲಿದೆ. ಬಂಧು-ಬಾಂಧವರಲ್ಲಿ ತಾಳ್ಮೆಯಿಂದ ವರ್ತಿಸಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು. ಋಣ ಬಾಧೆಯು ಕಾಡಬಹುದು. ಗೃಹ ನಿರ್ಮಾಣ ಆಲೋಚನೆಯು ಕಾರ್ಯರೂಪಕ್ಕೆ ಬರುವುದು. ಮಹಾಗಣಪತಿಯನ್ನು ಭಾವ ಪೂರ್ವಕವಾಗಿ ಪೂಜಿಸಿ ಪುಣ್ಯ ಸಂಪಾದನೆ ಮಾಡಿ.
ವೃಶ್ಚಿಕ
ಶನಿಯ ಪ್ರಭಾವದಿಂದ ಜೀವನದಲ್ಲಿ ಬೇಸರಗೊಂಡಿರುವ ನಿಮಗೆ ಹಂತ ಹಂತವಾಗಿ ಜೀವನೋಲ್ಲಾಸ ಬರಲಿದೆ. ಮನದಾಳದಲ್ಲಿ ಅಡಗಿರುವ ನಿಮ್ಮ ಚಿಂತೆಯೊಂದಕ್ಕೆ ಉತ್ತರ ದೊರಕಲಿದೆ. ಅಧಿಕಾರ ವರ್ಗಕ್ಕೆ ಕೈ ಕೆಳಗಿನವರ ಸಹಕಾರವಿಲ್ಲದೆ ಕಾರ್ಯಸಾಧನೆಯಲ್ಲಿ ತಲೆತಗ್ಗಿಸುವಂತಾದೀತು. ವ್ಯಯದ ಗುರು ಶತ್ರುಗಳನ್ನು ಉಂಟು ಮಾಡಿಯಾನು. ಒಂದು ಹೆಜ್ಜೆ ಇಡಬೇಕಾದರೇ ಹತ್ತು ಬಾರಿ ಯೋಚನೆ ಮಾಡುವುದು ಒಳ್ಳೆಯದು. ಸಹೋದರರ ಅಥವಾ ದಾಯಾದಿಗಳ ಭಿನ್ನಾಭಿಪ್ರಾಯದಿಂದ ನ್ಯಾಯಾಲಯದ ಮೆಟ್ಟಿಲು ಹತ್ತ ಬೇಕಾಗುವುದು. ಮಡದಿ ಮಕ್ಕಳ ಆರೋಗ್ಯದಲ್ಲಿ ಗಮನ ಹರಿಸುವುದು ಅಗತ್ಯ. ಚಿನ್ನಾಭರಣ, ಮುತ್ತು-ರತ್ನಗಳ ಮಾರಾಟ ಮಾಡುವವರಿಗೆ ಬಿಡುವಿಲ್ಲದ ವ್ಯಾಪಾರವಾಗಲಿದೆ. ಆಂಜನೇಯನನ್ನು ಧ್ಯಾನಿಸಿ. ಮಾನಸಿಕ ಧೈರ್ಯ ಮೂಡುವುದು.
ಧನು
ಸಾಡೇಸಾತಿನ ಬೇನೆಯಿಂದ ಬಳಲಿರುವ ನಿಮಗೆ ವರ್ಷದ ಮೊದಲಾರ್ಧದಲ್ಲಿ ಗುರುವಿನ ಅನುಗ್ರಹ ಸಿಗಲಿದೆ. ಲಾಭದ ಗುರು ಸರ್ವ ಕ್ಷೇತ್ರದಲ್ಲಿಯೂ ನಿಮ್ಮನ್ನು ವಿಜಯರನ್ನಾಗಿ ಮಾಡುತ್ತಾನೆ. ಮೀನುಗಾರರು, ಹೈನುಗಾರಿಕೆಯವರು, ಪಶು ಸಂಗೋಪನೆಯವರು ವೃತ್ತಿಯಲ್ಲಿ ಕಾಳಜಿ ವಹಿಸುವುದು ಒಳಿತು. ಧಾರ್ಮಿಕ ಕಾರ್ಯಗಳಲ್ಲಿ ಹಣ ವ್ಯಯವಾಗುವುದು. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರಿಗೆ ಆಯ-ವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು. ಆನುವಂಶಿಕ ಆಸ್ತಿಯನ್ನು ಅನುಭವಿಸುವ ಯೋಗ ಬರಲಿದೆ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ. ಲಾಟರಿಯಂತಹ ಯೋಜನೆಗಳು ಕಣ್ಣಾ-ಮುಚ್ಚಾಲೆಯಾಟ ನಡೆಸಿದರೂ ನಿಮಗೆ ಜಯವಿದೆ. ‘ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು
ಮಕರ
ಕಳೆದ ಸಂವತ್ಸರದಂತೆಯೇ ಈ ಸಂವತ್ಸರದಲ್ಲೂ ಕೂಡ ಸುಖ-ದುಃಖದ ಸಮ ಫಲವನ್ನು ಹೊಂದುವಿರಿ. ಉದ್ಯೋಗಾನ್ವೇಷಿಗಳಿಗೆ ವಿದ್ಯೆಗೆ ತಕ್ಕಂತೆ ಉದ್ಯೋಗಗಳು ದೊರಕಲಿವೆ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಯೋಗವಿದೆ. ಉಪಾಹಾರ ಮಂದಿರ, ತಂಪುಪಾನೀಯದ ಅಂಗಡಿಯವರಿಗೆ ಈ ಸಂವತ್ಸರವು ಸುಗ್ಗಿ ಹಬ್ಬದಂತಾಗುವುದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ಜೂನ್– ಜುಲೈನಲ್ಲಿ ಕನ್ಯಾನ್ವೇಷಿಗಳಿಗೆ ಸುಸಮಯವಿದ್ದು ವಿವಾಹ ನಿಶ್ಚಿತಾರ್ಥ ನಡೆಯುವುದು. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡುವುದು. ಶ್ರಮ ಜೀವಿಗಳಾದ ನಿಮಗೆ ಗುರು-ಹಿರಿಯರ ಆಶೀರ್ವಾದವಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ರಾಜಕೀಯ ವ್ಯಕ್ತಿಗಳಿಗೆ ಜನ ಬೆಂಬಲ ಸಿಗುವುದು. ದಾನ ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಗುರಿ ತಲುಪಬಹುದು.
ಕುಂಭ
ನಿಮಗೀವರ್ಷ ಸ್ವರ್ಗಕ್ಕೆ ಮೂರೇ ಗೇಣು ಎಂಬುವ ಅನುಭವ ಸಿಗಲಿದೆ. ಸಾಹಿತಿಗಳಿಗೆ, ಸಂಶೋಧಕರಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗೌರವ ಸಿಗಲಿದೆ. ಕಟ್ಟಡ ರಚನೆಯಂತಹ ಕಾರ್ಯಗಳು ಭರದಿಂದ ಸಾಗಲಿವೆ. ವ್ಯವಹಾರದಲ್ಲಿ ಲಾಭವಿದ್ದು ಶತ್ರುಗಳ ಕಾಟದಿಂದ ಬಂದ ಲಾಭ ಲಂಚಕೋರರ ಪಾಲಾಗಲಿದೆ. ಸಿನಿಮಾ ನಟರಿಗೆ ಈ ವರ್ಷವು ಹಲವು ಪಾಠವನ್ನು ಕಲಿಸಿ ಗೌರವಾನ್ವಿತ ವ್ಯಕ್ತಿಯನ್ನಾಗಿ, ಕೀರ್ತಿವಂತನನ್ನಾಗಿ, ಧನವಂತನನ್ನಾಗಿ ಮಾಡುವುದು. ಚಿನ್ನಾಭರಣ, ಭೂಮಿ, ವಾಹನ ಖರೀದಿಗೆ ಈ ವರ್ಷ ಸುಸಮಯ. ಹಿಂದಿನ ಕುಟುಂಬ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿವೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ– ಮಾನ ಲಭಿಸುವುದು. ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಕಾರ್ಯಗಳು ಜರುಗುವವು. ಸುಬ್ರಹ್ಮಣ್ಯನನ್ನು ಆರಾಧಿಸಿ ಇಷ್ಟಾರ್ಥಗಳನ್ನು ಪಡೆಯಿರಿ.
ಮೀನ
ಸುಖದ ಅಂಗಳದಲ್ಲಿರುವ ನೀವು ಈ ವರ್ಷದ ಅರ್ಧದವರೆಗೆ ರಾಜಪುತ್ರರಂತೆ ಇರುವಿರಿ. ಗೃಹೋಪಯೋಗಿ ವಸ್ತುಗಳ ಮಾರಾಟಗಾರರಿಗೆ, ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಲಾಭ. ಸಂಘ– ಸಂಸ್ಥೆಗಳ ಪದಾಧಿಕಾರ ದೊರಕುವುದು. ಸುಖ ಸಂಪತ್ತಿನ ಜೊತೆಯಲ್ಲಿ ಚಿಂತೆಯು ನಿದ್ದೆಗೆಡಿಸುತ್ತದೆ. ಪಿತೃವರ್ಗದಲ್ಲಿ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ. ಅವಿವಾಹಿತರಿಗೆ ಕಂಕಣ ಭಾಗ್ಯ. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ವಿಸ್ತೀರ್ಣವೂ ಹೆಚ್ಚುವುದು. ಪರ್ವತಾರೋಹಿಗಳಿಗೆ, ಕ್ರೀಡಾಪಟುಗಳಿಗೆ, ಸಾಧನೆಯ ಅವಕಾಶ ಸಿಕ್ಕಿದರೂ ಅನಾರೋಗ್ಯ ಎದುರಾಗಬಹುದು. ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಹರ್ಷ. ಮಲ್ಲಿಕಾರ್ಜುನನ ಸೇವೆಯಿಂದ ಆರೋಗ್ಯ ಭಾಗ್ಯ ಮತ್ತು ನೆಮ್ಮದಿ.