‘ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ನೀಡಿದ ನಂತರ ನಾಯಕತ್ವ ಬದಲಾವಣೆ ವಿಷಯ ರಾಜಕೀಯ ವಲಯದ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದು ನಿಂತಿದೆ. ಈ ಕುರಿತ ಸಚಿವರು, ಶಾಸಕರ ಹೇಳಿಕೆಗಳ ಸರಣಿ ಶನಿವಾರವೂ ಮುಂದುವರಿದಿದ್ದು, ಕಾಂಗ್ರೆಸ್ ಹೈಕಮಾಂಡ್ನತ್ತ ಎಲ್ಲರೂ ಕೈ ತೋರಿದ್ದಾರೆ.