ನಾಮಫಲಕ ಪ್ರಕರಣದಿಂದ ಬೆಳಗಾವಿ ಬೇಗುದಿಗೆ ಸಿಲುಕಿದ್ದರೂ ಯಾವೊಬ್ಬ ಜನಪ್ರತಿನಿಧಿಯಾಗಲಿ, ಸರ್ಕಾರದ ಪ್ರಮುಖ ಸ್ಥಳಗಳಲ್ಲಿ ಕುಳಿತಿರುವ ಜಿಲ್ಲೆಯ ಶಾಸಕರಾಗಲಿ ಬಾಯಿ ಬಿಡದೇ ಇರುವುದು ನಿಜಕ್ಕೂ ನಾಚಿಗೆಗೇಡಿನ ಸಂಗತಿ.
ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ ಜಿಲ್ಲಾ ಆಡಳಿತ ತೋರಿಕೆಯ ಕ್ರಮ ಕೈಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯರು ಸುಮ್ಮನೆ ಕುಳಿತಿರುವುದು ಸರಿಯಲ್ಲ. ಕೆಲವು ಮುಖ್ಯ ಸಾಹಿತಿಗಳ ನಡವಳಿಕೆ ನೋಡಿದರೆ ಇವರಿಗೂ ಕನ್ನಡತನ ಉಳಿಯುವುದು ಬೇಕಿಲ್ಲವೇನೊ ಎಂಬ ಅನುಮಾನ ಮೂಡುತ್ತದೆ. ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಯನ್ನು ನೆನಪಿಸಿಕೊಳ್ಳಬೇಕಿದೆ.