ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್‌ ನಿವೃತ್ತಿ

ಶೈಲೇಶ್‌ ನಾಯಕ್‌ಗೆ ಪ್ರಭಾರಿ ಹೊಣೆ
Last Updated 31 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಕೆ.ರಾಧಾಕೃಷ್ಣನ್‌ ಅವರು ಬುಧವಾರ (ಡಿ.31) ಸೇವೆಯಿಂದ ನಿವೃತ್ತರಾದರು. ಭೂವಿಜ್ಞಾನ ಸಚಿವಾಲಯದ ಕಾರ್ಯ­ದರ್ಶಿ­ಯಾದ ವಿಜ್ಞಾನಿ ಶೈಲೇಶ್‌ ನಾಯಕ್‌ ಅವರಿಗೆ ಒಂದು ತಿಂಗಳ ಮಟ್ಟಿಗೆ ಇಸ್ರೊ  ಮುಖ್ಯಸ್ಥರ ಹೊಣೆ ವಹಿಸಲಾಗಿದೆ.

2009ರ ಅಕ್ಟೋಬರ್‌ 31ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ವಹಿಸಿ­ಕೊಂಡ ರಾಧಾಕೃಷ್ಣನ್‌, ‘ಮಂಗಳ­ಯಾನ’ ಮತ್ತು ಮಾನವ ಸಹಿತ ಗಗನ­ನೌಕೆಯ ಸ್ವಯಂಪೂರ್ಣ ಘಟಕದ ಮಾದರಿ ‘ಜಿಎಸ್‌ಎಲ್‌ವಿಎಂಕೆ–3’ ಯೋಜ­ನೆ­ಗಳ ಯಶಸ್ವಿಯ ಶ್ರೇಯಕ್ಕೆ ಪಾತ್ರರು.

ಇಸ್ರೊದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವ ರಾಧಾಕೃಷ್ಣನ್‌, ಕೇರಳ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಖರಗ್‌ಪುರದ ಐಐಟಿಯಲ್ಲಿ ಪಿಎಚ್‌.ಡಿ ಪೂರೈಸಿದವರು. ವಿಜ್ಞಾನ ವಿಷಯದ ನಿಯತಕಾಲಿಕೆ ‘ನೇಚರ್‌’ 2014ರಲ್ಲಿ ರಾಧಾಕೃಷ್ಣನ್‌ ಅವ­ರನ್ನು ವಿಶ್ವದ 10 ಹೆಸರಾಂತ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿದೆ.

ಬಾಹ್ಯಾಕಾಶ ವಿಜ್ಞಾನಿಯೂ ಆದ ರಾಧಾಕೃಷ್ಣನ್‌ ಅವರದ್ದು ಬಹುಮುಖ ಪ್ರತಿಭೆ. ಕಥಕಳಿ ನೃತ್ಯಪಟುವಾದ ಅವರು, ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ರಾಧಾಕೃಷ್ಣನ್‌ ಅಧ್ಯಕ್ಷರಾಗಿದ್ದ ಅವಧಿ­ಯಲ್ಲೇ (2010ರ ಡಿಸೆಂಬರ್‌) ಉಡಾವಣೆಯಾದ ಸಂವ­ಹನ ಉದ್ದೇ­ಶದ ಭೂಸ್ಥಾಯೀ ಉಪಗ್ರಹ­ (ಜಿಎಸ್ಎಟಿ5ಪಿ) ಹೊತ್ತ ಉಡಾ­ವಣಾ ವಾಹನ ‘ಜಿಎಸ್‌ಎಲ್‌ವಿಎಫ್‌06’ ಆಗಸ­ದಲ್ಲೇ ಸ್ಫೋಟಗೊಂಡಿತು. ಇದು ದೇಶದ ಬಾಹ್ಯಾ­ಕಾಶ ಸಂಶೋಧನೆಯ ದೊಡ್ಡ ವೈಫಲ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT