ಉಡುಪಿ: ಎಂಡೊ ಪೀಡಿತರ ಸಮೀಕ್ಷೆ ವೇಳೆ ಹಾಜರಾಗಲು ಸಾಧ್ಯವಾಗದೆ ಪಟ್ಟಿಯಲ್ಲಿ ಹೆಸರು ತಪ್ಪಿ ಹೋಗಿರುವ ಈ ಕೆಳಕಂಡ ಗ್ರಾಮಗಳ ಅರ್ಹರು ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಟೋಬರ್ 21ರಂದು ಬೆಳಿಗ್ಗೆ 10ಗಂಟೆಯಿಂದ 1 ರವರೆಗೆ ನಡೆಯುವ ತಪಾಸಣಾ ಶಿಬಿರಕ್ಕೆ ಹಾಜರಾಗಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ತಾಲ್ಲೂಕಿನ ಮಿಯಾರು, ಸಾಣೂರು, ಇರ್ವತ್ತೂರು, ಕೌಡೂರು, ಶಿರ್ಲಾಲು, ಕೆರ್ವಾಶೆ, ಕಾಂತಾವರ, ಕಡ್ತಲ, ಎಳ್ಳಾರೆ, ಈದು, ಕೆರೆಬೆಟ್ಟು, ಶಿವಪುರ ಹಾಗೂ ಅಂಡಾರು ಗ್ರಾಮಗಳ ವ್ಯಾಪ್ತಿಯ ಜನರು ಶಿಬಿರದಲ್ಲಿ ಭಾಗವಹಿಸಬಹುದು.