ಬೆಂಗಳೂರು: ಎತ್ತಿನಹೊಳೆ ಯೋಜನೆ ಜಾರಿ ಪ್ರಶ್ನಿಸಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆಯನ್ನು ಚೆನ್ನೈನ ಹಸಿರು ನ್ಯಾಯ ಮಂಡಳಿಯು ಇದೇ 28ಕ್ಕೆ ಮುಂದೂಡಿದೆ. ಯೋಜನೆಗೆ ಸಂಬಂಧಿ ಸಿದ ಯಾವುದೇ ಕಾಮಗಾರಿಗಳನ್ನು ಅರಣ್ಯ ಪ್ರದೇಶದಲ್ಲಿ ನಡೆಸುತ್ತಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯ ಮಂಡಳಿಗೆ ತಿಳಿಸಿದ್ದಾರೆ.