ಕನಕಪುರ ಮುಖ್ಯರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೆಲವೊಮ್ಮೆ ಇಲ್ಲಿ ಚರಂಡಿ ನೀರು ನದಿಯ ರೀತಿ ಹರಿಯುತ್ತಿರುತ್ತದೆ. ನಾಲ್ಕು ಚಕ್ರದ ವಾಹನ ಕೆಟ್ಟು ನಿಂತರೆ ಒಂದು ಗಂಟೆಯ ಜಾಮ್ ಆಗುತ್ತದೆ. ದ್ವಿಚಕ್ರ ವಾಹನ ಸವಾರರಿಗಂತೂ ನರಕ ಯಾತನೆ. ಇದಲ್ಲದೇ ಸಾರಕ್ಕಿಯಲ್ಲಿ ಮುಂಜಾನೆ ನಡೆಯುವ ತರಕಾರಿ ವ್ಯಾಪಾರದ ತ್ಯಾಜ್ಯವನ್ನು ರಸ್ತೆ ಮಧ್ಯದಲ್ಲೇ ಎಸೆದು ಹೋಗಿರುತ್ತಾರೆ. ಇತ್ತೀಚೆಗೆ ಸ್ವಲ್ಪ ದೂರ ಮಾತ್ರ ಡಾಂಬರು ಹಾಕಿದ್ದರೂ ಆ ಕಾರ್ಯವನ್ನೂ ಸರಿಯಾಗಿ ಮಾಡಿಲ್ಲ. ಬೇಕಾಬಿಟ್ಟಿ ಎನ್ನುವಂತೆ ಮಾಡಲಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಯಾವ ಅಧಿಕಾರಿಯೂ ಇದರ ಬಗ್ಗೆ ಗಮನ ಹರಿಸದಿರುವುದು ಬೇಸರ ತಂದಿದೆ. ದಯವಿಟ್ಟು ಕನಕಪುರ ಮುಖ್ಯರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿದರೆ ವಾಹನ ಸಂಚಾರರಿಗೆ ಹಾಗೂ ಪಾದಚಾರಿಗಳಿಗೆ ನೆಮ್ಮದಿ.