<p><strong>ಬೆಂಗಳೂರು: ‘</strong>ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಯನ್ನು ಏರಿದವರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತೂ ಉದ್ಧಾರ ಆಗದವರ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರ ಆಯೋಗವೊಂದನ್ನು ರಚಿಸಬೇಕು’ ಎಂದು ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅಭಿಪ್ರಾಯಪಟ್ಟರು.<br /> <br /> ಅರವಿಂದೋ ಸೊಸೈಟಿ ರಾಜ್ಯ ಸಮಿತಿಯು ಹೊರತಂದಿರುವ ಮಹರ್ಷಿ ಅರವಿಂದರ ‘ಯೋಗ ಸಮನ್ವಯ’ ಅನುವಾದಿತ ಕನ್ನಡ ಕೃತಿಯನ್ನು ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು. <br /> <br /> ‘ಇಂಗ್ಲಿಷ್ನಲ್ಲಿ ಕಲಿತರೆ ಮಾತ್ರ ಜೀವನದಲ್ಲಿ ಉದ್ಧಾರವಾಗಲು ಸಾಧ್ಯ ಎಂಬ ಹುಸಿ ನಂಬಿಕೆ ಬೆಳೆದಿದೆ. ವಿಶ್ವವೇ ಬೆರಗಿನಿಂದ ನೋಡುವಂತಹ ಕನ್ನಡ ಸೇರಿದಂತೆ ಮಾತೃಭಾಷೆಯಲ್ಲಿಯೇ ಕಲಿತ ಸಾಧಕರು ನಮ್ಮ ನಡುವೆ ಇದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸಿ, ಸತ್ಯವನ್ನು ಸುಪ್ರೀಂಕೋರ್ಟ್ನ ಮುಂದಿಡುವ ತುರ್ತು ಇದೆ’ ಎಂದು ಹೇಳಿದರು.<br /> <br /> ‘ಅರವಿಂದರ ಸಂದೇಶಗಳು ಕನ್ನಡ ಭಾಷೆಗೆ ಅನುವಾದಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ತರವಾದದ್ದು. ಅರವಿಂದರು ರಚಿಸಿದ ಮೂವತ್ತು ಸಂಪುಟಗಳ 18 ಸಾವಿರ ಪುಟಗಳ ಕೃತಿಗಳು ಇರುವವರೆಗೂ ಅರವಿಂದರ ಹೆಸರು ಅಜರಾಮರ’ ಎಂದು ತಿಳಿಸಿದರು.<br /> <br /> ‘ಕನ್ನಡ ಭಾಷೆ ಸಾಯದಂತೆ ಎಚ್ಚರ ವಹಿಸಿದರೆ ಮಾತ್ರ ಇಂತಹ ಮೇರುಕೃತಿಗಳ ಪ್ರಯೋಜನವನ್ನು ಯುವಪೀಳಿಗೆ ಪಡೆಯಲು ಸಾಧ್ಯ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.<br /> <br /> ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ‘ಅಧ್ಯಾತ್ಮ ಹಾಗೂ ತತ್ವದ ಮೂಲಕ ಮಾನವೀಯತೆಯನ್ನು ಪಸರಿಸಿದ ಮಹರ್ಷಿ ಅರವಿಂದರ ಇನ್ನಷ್ಟು ವಿಚಾರಧಾರೆಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು’ ಎಂದು ತಿಳಿಸಿದರು. ‘ವಿಧಾನಮಂಡಲದ ಗ್ರಂಥಾಲಯ ಸಮಿತಿಯ ಸದಸ್ಯನಾಗಿದ್ದು, ಅರವಿಂದರ ಗ್ರಂಥಗಳನ್ನು ಖರೀದಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.<br /> <br /> ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ‘ಗಣಿತದ ಪ್ರಾಧ್ಯಾಪಕನಾಗಿ ಇಂಗ್ಲಿಷ್ ಮೂಲದ ಅರವಿಂದರ ಈ ಕೃತಿಯನ್ನು ಎಂ.ಎಸ್.ನಾಗರಹಳ್ಳಿ ಬಹಳ ಸೊಗಸಾಗಿ ಅನುಸೃಷ್ಟಿಸಿದ್ದಾರೆ. ಬಾಣನ ಸಂಸ್ಕೃತ ಹಾಗೂ ಅರವಿಂದರ ಇಂಗ್ಲಿಷ್ ಬರಹವನ್ನು ಅನುವಾದ ಮಾಡುವುದು ಬಹಳ ಕಷ್ಟದ ಕೆಲಸ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಯನ್ನು ಏರಿದವರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತೂ ಉದ್ಧಾರ ಆಗದವರ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರ ಆಯೋಗವೊಂದನ್ನು ರಚಿಸಬೇಕು’ ಎಂದು ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅಭಿಪ್ರಾಯಪಟ್ಟರು.<br /> <br /> ಅರವಿಂದೋ ಸೊಸೈಟಿ ರಾಜ್ಯ ಸಮಿತಿಯು ಹೊರತಂದಿರುವ ಮಹರ್ಷಿ ಅರವಿಂದರ ‘ಯೋಗ ಸಮನ್ವಯ’ ಅನುವಾದಿತ ಕನ್ನಡ ಕೃತಿಯನ್ನು ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು. <br /> <br /> ‘ಇಂಗ್ಲಿಷ್ನಲ್ಲಿ ಕಲಿತರೆ ಮಾತ್ರ ಜೀವನದಲ್ಲಿ ಉದ್ಧಾರವಾಗಲು ಸಾಧ್ಯ ಎಂಬ ಹುಸಿ ನಂಬಿಕೆ ಬೆಳೆದಿದೆ. ವಿಶ್ವವೇ ಬೆರಗಿನಿಂದ ನೋಡುವಂತಹ ಕನ್ನಡ ಸೇರಿದಂತೆ ಮಾತೃಭಾಷೆಯಲ್ಲಿಯೇ ಕಲಿತ ಸಾಧಕರು ನಮ್ಮ ನಡುವೆ ಇದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸಿ, ಸತ್ಯವನ್ನು ಸುಪ್ರೀಂಕೋರ್ಟ್ನ ಮುಂದಿಡುವ ತುರ್ತು ಇದೆ’ ಎಂದು ಹೇಳಿದರು.<br /> <br /> ‘ಅರವಿಂದರ ಸಂದೇಶಗಳು ಕನ್ನಡ ಭಾಷೆಗೆ ಅನುವಾದಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ತರವಾದದ್ದು. ಅರವಿಂದರು ರಚಿಸಿದ ಮೂವತ್ತು ಸಂಪುಟಗಳ 18 ಸಾವಿರ ಪುಟಗಳ ಕೃತಿಗಳು ಇರುವವರೆಗೂ ಅರವಿಂದರ ಹೆಸರು ಅಜರಾಮರ’ ಎಂದು ತಿಳಿಸಿದರು.<br /> <br /> ‘ಕನ್ನಡ ಭಾಷೆ ಸಾಯದಂತೆ ಎಚ್ಚರ ವಹಿಸಿದರೆ ಮಾತ್ರ ಇಂತಹ ಮೇರುಕೃತಿಗಳ ಪ್ರಯೋಜನವನ್ನು ಯುವಪೀಳಿಗೆ ಪಡೆಯಲು ಸಾಧ್ಯ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.<br /> <br /> ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ‘ಅಧ್ಯಾತ್ಮ ಹಾಗೂ ತತ್ವದ ಮೂಲಕ ಮಾನವೀಯತೆಯನ್ನು ಪಸರಿಸಿದ ಮಹರ್ಷಿ ಅರವಿಂದರ ಇನ್ನಷ್ಟು ವಿಚಾರಧಾರೆಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು’ ಎಂದು ತಿಳಿಸಿದರು. ‘ವಿಧಾನಮಂಡಲದ ಗ್ರಂಥಾಲಯ ಸಮಿತಿಯ ಸದಸ್ಯನಾಗಿದ್ದು, ಅರವಿಂದರ ಗ್ರಂಥಗಳನ್ನು ಖರೀದಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.<br /> <br /> ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ‘ಗಣಿತದ ಪ್ರಾಧ್ಯಾಪಕನಾಗಿ ಇಂಗ್ಲಿಷ್ ಮೂಲದ ಅರವಿಂದರ ಈ ಕೃತಿಯನ್ನು ಎಂ.ಎಸ್.ನಾಗರಹಳ್ಳಿ ಬಹಳ ಸೊಗಸಾಗಿ ಅನುಸೃಷ್ಟಿಸಿದ್ದಾರೆ. ಬಾಣನ ಸಂಸ್ಕೃತ ಹಾಗೂ ಅರವಿಂದರ ಇಂಗ್ಲಿಷ್ ಬರಹವನ್ನು ಅನುವಾದ ಮಾಡುವುದು ಬಹಳ ಕಷ್ಟದ ಕೆಲಸ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>