<p><br /> ಗಂಗಾವತಿ: ಅಧುನಿಕತೆ ಮತ್ತು ತಾಂತ್ರಿಕತೆಯ ಪಥದಲ್ಲಿ ಅಭಿವೃದ್ಧಿಯಾದಂತೆಲ್ಲಾ ಕನ್ನಡ ಭಾಷೆಗೆ ಧಕ್ಕೆ ಎದುರಾಗಲಿದೆ. ಭಾಷೆ ಅವನತಿಯ ಹಾದಿ ಹಿಡಿಯತ್ತದೆ ಎಂದು ಹಲವರು ವಾದಿಸುತ್ತಾರೆ. ಆದರೆ ಅದೃಷ್ಟವಶಾತ್ ಕನ್ನಡಕ್ಕೆ ಅವನತಿ ಎಂಬ ಪದ ಅನ್ವಯಿಸದು ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.<br /> ಗಂಗಾವತಿ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಲ್ಲಿನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಕಾಯಕಯೋಗಿ ಚನ್ನಬಸವ ಸ್ವಾಮಿ ಮುಖ್ಯ ವೇದಿಕೆಯಲ್ಲಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ಟಿ.ವಿ. ಕಂಪ್ಯೂಟರ್ ಇನ್ನಿತರ ತಾಂತ್ರಿಕ ಸಾಧನ–ಸಲಕರಣೆಗಳು ಬಂದ ಬಳಿಕ ಪರಸ್ಪರ ಮಾತನಾಡುವ ಅವಕಾಶ ತಗ್ಗಿವೆ. ಇವೇ ಭಾಷಾ ಬೆಳವಣಿಗೆಗೆ ಕೊಂಚ ತೊಡಕಾಗಿವೆ. ಆದರೆ ಕನ್ನಡಕ್ಕೆ ಮಾತ್ರ ಗ್ರಾಮೀಣ, ಹಳ್ಳಿಗಾಡಿನ ಸೊಗಡಿನ ಸಂಸ್ಕೃತಿ ಇರುವವರೆಗೂ ಯಾವ ಆತಂಕವಿಲ್ಲ ಎಂದರು. <br /> ಸಂಸ್ಕೃತಿ ಮತ್ತು ಭಾಷೆಯ ಜೀವಾಳ ಹಳ್ಳಿಗಾಡಿನಲ್ಲಿ ಬೇರು ಬಿಟ್ಟಿರುತ್ತದೆ. ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳನ್ನು ಜೋಗುಳ, ಲಾಲಿ ಹಾಡುಗಳ ಮೂಲಕ ಮಲಗಿಸುವ ಸಂಸ್ಕೃತಿ ಇರುವವರೆಗೂ ಕನ್ನಡ ಭಾಷೆಗೆ ಎಂದಿಗೂ ಧಕ್ಕೆ ಎದುರಾಗದು ಎಂದು ಅಭಿಪ್ರಾಯಪಟ್ಟರು.<br /> ದಕ್ಷಣ ಭಾರತದ ಭಾಷೆಗಳನ್ನೇ ತೆಗೆದುಕೊಂಡರೆ ತಮಿಳು, ತೆಲುಗು, ಮಲಯಾಳಂ ಪರವಾಲಂಬಿ ಭಾಷೆ, ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದುಕೊಂಡಿದೆ. ಆದರೆ ಕನ್ನಡ ಸ್ವಾತಂತ್ರ ಭಾಷೆಯಾಗಿ ಇಂದಿಗೂ ಬೆಳೆಯುತ್ತಿದೆ ಎನ್ನುವುದನ್ನು ವಿದ್ವಾಂಸರು ಗುರುತಿಸುತ್ತಿದ್ದಾರೆ.<br /> ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಅಥವಾ ಹೈದರಾಬಾದ್ ಕರ್ನಾಟಕದಲ್ಲಿ ಮಾತೃ ಭಾಷೆಯೊಂದಿಗೆ ಮತ್ತೊಂದೆರಡು ಭಾಷೆಗಳನ್ನು ಕಲಿಯುವ ಸದವಕಾಶ ಜನರಿಗಿದೆ. ಕನ್ನಡ ಉರ್ದು ಮತ್ತು ತೆಲುಗು ಸೇರಿದಂತೆ ಇತರ ಭಾಷೆಗೆ ಆವಾಸ ಸ್ಥಾನ ಕಲ್ಪಿಸಿದೆ ಎಂದರು.<br /> ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಪ್ರಾಧ್ಯಾಪಕ ವಿ.ಎಚ್. ನಾಯಕ ಮಾತನಾಡಿ, ಕೇವಲ ಕನ್ನಡ ಕನ್ನಡ ಎಂದು ಮಾತನಾಡಿದರೆ ಸಾಲದು. ಕನ್ನಡದ ಕೈಗೆ ಕೆಲಸ, ಹೊಟ್ಟೆಗೆ ಊಟ ನೀಡುವ ಕೆಸಲಕ್ಕೆ ಸರ್ಕಾರ ಗಮನಹರಿಸಬೇಕು.<br /> ಕನ್ನಡ ಪ್ರಾಧ್ಯಾಪಕನಾಗಿದ್ದ ತಾನು, ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಎರಡನೇ ತರಗತಿಯಲ್ಲಿ ಶಾಲೆ ಬಿಡಿಸಿ ಕನ್ನಡ ಶಾಲೆಗೆ ಹಾಕಿದೆ. ಪರಿಣಾಮ ಇಂದು ಅವರಿಬ್ಬರಿಗೂ ಉದ್ಯೋಗವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಸಂಸದ ಶಿವರಾಮಗೌಡ ಮಾತನಾಡಿ, ಕನ್ನಡಕ್ಕೆ ಆತಂಕ ಎದುರಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ರಂಗಭೂಮಿ, ಚಿತ್ರರಂಗ ಉಳಿವಿಗೆ ಡಬ್ಬಿಂಗ್ ನಿಷೇಧವಾಗಬೇಕು. ಈ ತೀರ್ಮಾನ ಈ ಸಮ್ಮೇಳನದ ಮೂಲಕ ಆಗಬೇಕೆಂದು ಒತ್ತಾಯಿಸಿದರು.<br /> ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ, ಸಾಹಿತ್ಯ ಎಂದರೆ ಕೇವಲ ಓದುವುದು, ಬರೆಯುವುದು ಅಲ್ಲ. ಸಾಹಿತ್ಯ ಎಂದರೇನು ಅನ್ನುವುದು ಅರ್ಥವಾಗಬೇಕಾದರೆ ಸಹನೆ, ಅಗತ್ಯ. ಈ ವೇದಿಕೆ ರಾಜಕೀಯ ಉದ್ದೇಶಕ್ಕೆ ಅಲ್ಲ, ಕವಿ, ಸಾಹಿತಿ, ಲೇಖಕರಿಗಾಗಿ ನಿರ್ಮಿಸಿದ್ದು ಎಂದರು.<br /> ವಿಜಯಕುಮಾರ ಸ್ವಾಗತಿಸಿದರು. ಅಜಮೀರ ನಂದಾಪುರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ನಿಂಗೋಜಿ, ಅಯೋಧ್ಯ ರಾಮಾಚಾರ, ಸಿ.ಎಚ್. ನಾರಿನಾಳ, ಶಾಮಿದ್ ಮನಿಯಾರ, ಜಿ. ಶ್ರೀಧರ, ದೊಡ್ಡಪ್ಪ ದೇಸಾಯಿ, ತಿಪ್ಪೇರುದ್ರಸ್ವಾಮಿ, ನಾರಾಯಣಪ್ಪ ನಾಯಕ್, ಎಸ್.ಎನ್. ಮಠ, ಅಲ್ಲಮಪ್ರಭು ಬೆಟ್ಟದೂರು ಇತರರಿದ್ದರು.</p>.<p>‘ಪವಿತ್ರ ಸ್ಥಾನ ಬೇಕು’</p>.<p>ಗಂಗಾವತಿ: ನಾವು ನಿತ್ಯ ಪರಸ್ಪರ ವ್ಯವಹರಿಸುವುದಕ್ಕೆ ಸಂವಹನ ಸಂಪರ್ಕವಾಗಿ ಬಳಸುವ ಮಾತೃಭಾಷೆಗೆ ಪವಿತ್ರ ಸ್ಥಾನಮಾನ ನೀಡಿದರೆ ಮಾತ್ರ ಭಾಷೆಗೆ ಗೌರವ ನೀಡಿ ಉಳಿಸಲು ಸಾಧ್ಯ ಎಂದು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ ಅಭಿಪ್ರಾಯಪಟ್ಟರು.<br /> ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಮಾನವೀಯತೆ ಮತ್ತು ವಾಸ್ತವಿಕತೆಯ ತಳಹದಿಯ ಮೇಲೆ ಸಾಹಿತ್ಯ ಬೆಳೆದು ಬಂದಾಗ ಮಾತ್ರ ಅದೊಂದುಉತ್ಕೃಷ್ಟ ಸಾಹಿತ್ಯವಾಗಲು ಸಾಧ್ಯ. ಒಂದು ಜನಾಂಗದ ಸಂಸ್ಕೃತಿಯ ಸಾಧನೆ ಅಲ್ಲಿನ ಸಾಹಿತ್ಯದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ.<br /> ತಿರುಳ್ಗನ್ನಡ ನಾಡೆಂದು ಖ್ಯಾತವಾದ ಕೊಪ್ಪಳ ಜಿಲ್ಲೆಯ ಮಾನವ ಪರಂಪರೆಗೆ ಐದು ಸಾವಿರ ವರ್ಷದ ಇತಿಹಾಸವಿದೆ ಇಲ್ಲಿನ ಜನರಲ್ಲಿ ಸಹೋದರತೆ, ಸಮಾನತೆ, ಸಹಿಷ್ಣುತೆ ಹಾಸುಹೊಕ್ಕಾಗಿದೆ. ಸಾಹಿತ್ಯದೊಂದಿಗೆ ಭಾಷೆಯ ಬೆಳವಣಿಗೆಗೆ ಪರಸ್ಪರ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಗಂಗಾವತಿ: ಅಧುನಿಕತೆ ಮತ್ತು ತಾಂತ್ರಿಕತೆಯ ಪಥದಲ್ಲಿ ಅಭಿವೃದ್ಧಿಯಾದಂತೆಲ್ಲಾ ಕನ್ನಡ ಭಾಷೆಗೆ ಧಕ್ಕೆ ಎದುರಾಗಲಿದೆ. ಭಾಷೆ ಅವನತಿಯ ಹಾದಿ ಹಿಡಿಯತ್ತದೆ ಎಂದು ಹಲವರು ವಾದಿಸುತ್ತಾರೆ. ಆದರೆ ಅದೃಷ್ಟವಶಾತ್ ಕನ್ನಡಕ್ಕೆ ಅವನತಿ ಎಂಬ ಪದ ಅನ್ವಯಿಸದು ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.<br /> ಗಂಗಾವತಿ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಲ್ಲಿನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಕಾಯಕಯೋಗಿ ಚನ್ನಬಸವ ಸ್ವಾಮಿ ಮುಖ್ಯ ವೇದಿಕೆಯಲ್ಲಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ಟಿ.ವಿ. ಕಂಪ್ಯೂಟರ್ ಇನ್ನಿತರ ತಾಂತ್ರಿಕ ಸಾಧನ–ಸಲಕರಣೆಗಳು ಬಂದ ಬಳಿಕ ಪರಸ್ಪರ ಮಾತನಾಡುವ ಅವಕಾಶ ತಗ್ಗಿವೆ. ಇವೇ ಭಾಷಾ ಬೆಳವಣಿಗೆಗೆ ಕೊಂಚ ತೊಡಕಾಗಿವೆ. ಆದರೆ ಕನ್ನಡಕ್ಕೆ ಮಾತ್ರ ಗ್ರಾಮೀಣ, ಹಳ್ಳಿಗಾಡಿನ ಸೊಗಡಿನ ಸಂಸ್ಕೃತಿ ಇರುವವರೆಗೂ ಯಾವ ಆತಂಕವಿಲ್ಲ ಎಂದರು. <br /> ಸಂಸ್ಕೃತಿ ಮತ್ತು ಭಾಷೆಯ ಜೀವಾಳ ಹಳ್ಳಿಗಾಡಿನಲ್ಲಿ ಬೇರು ಬಿಟ್ಟಿರುತ್ತದೆ. ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳನ್ನು ಜೋಗುಳ, ಲಾಲಿ ಹಾಡುಗಳ ಮೂಲಕ ಮಲಗಿಸುವ ಸಂಸ್ಕೃತಿ ಇರುವವರೆಗೂ ಕನ್ನಡ ಭಾಷೆಗೆ ಎಂದಿಗೂ ಧಕ್ಕೆ ಎದುರಾಗದು ಎಂದು ಅಭಿಪ್ರಾಯಪಟ್ಟರು.<br /> ದಕ್ಷಣ ಭಾರತದ ಭಾಷೆಗಳನ್ನೇ ತೆಗೆದುಕೊಂಡರೆ ತಮಿಳು, ತೆಲುಗು, ಮಲಯಾಳಂ ಪರವಾಲಂಬಿ ಭಾಷೆ, ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದುಕೊಂಡಿದೆ. ಆದರೆ ಕನ್ನಡ ಸ್ವಾತಂತ್ರ ಭಾಷೆಯಾಗಿ ಇಂದಿಗೂ ಬೆಳೆಯುತ್ತಿದೆ ಎನ್ನುವುದನ್ನು ವಿದ್ವಾಂಸರು ಗುರುತಿಸುತ್ತಿದ್ದಾರೆ.<br /> ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಅಥವಾ ಹೈದರಾಬಾದ್ ಕರ್ನಾಟಕದಲ್ಲಿ ಮಾತೃ ಭಾಷೆಯೊಂದಿಗೆ ಮತ್ತೊಂದೆರಡು ಭಾಷೆಗಳನ್ನು ಕಲಿಯುವ ಸದವಕಾಶ ಜನರಿಗಿದೆ. ಕನ್ನಡ ಉರ್ದು ಮತ್ತು ತೆಲುಗು ಸೇರಿದಂತೆ ಇತರ ಭಾಷೆಗೆ ಆವಾಸ ಸ್ಥಾನ ಕಲ್ಪಿಸಿದೆ ಎಂದರು.<br /> ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಪ್ರಾಧ್ಯಾಪಕ ವಿ.ಎಚ್. ನಾಯಕ ಮಾತನಾಡಿ, ಕೇವಲ ಕನ್ನಡ ಕನ್ನಡ ಎಂದು ಮಾತನಾಡಿದರೆ ಸಾಲದು. ಕನ್ನಡದ ಕೈಗೆ ಕೆಲಸ, ಹೊಟ್ಟೆಗೆ ಊಟ ನೀಡುವ ಕೆಸಲಕ್ಕೆ ಸರ್ಕಾರ ಗಮನಹರಿಸಬೇಕು.<br /> ಕನ್ನಡ ಪ್ರಾಧ್ಯಾಪಕನಾಗಿದ್ದ ತಾನು, ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಎರಡನೇ ತರಗತಿಯಲ್ಲಿ ಶಾಲೆ ಬಿಡಿಸಿ ಕನ್ನಡ ಶಾಲೆಗೆ ಹಾಕಿದೆ. ಪರಿಣಾಮ ಇಂದು ಅವರಿಬ್ಬರಿಗೂ ಉದ್ಯೋಗವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಸಂಸದ ಶಿವರಾಮಗೌಡ ಮಾತನಾಡಿ, ಕನ್ನಡಕ್ಕೆ ಆತಂಕ ಎದುರಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ರಂಗಭೂಮಿ, ಚಿತ್ರರಂಗ ಉಳಿವಿಗೆ ಡಬ್ಬಿಂಗ್ ನಿಷೇಧವಾಗಬೇಕು. ಈ ತೀರ್ಮಾನ ಈ ಸಮ್ಮೇಳನದ ಮೂಲಕ ಆಗಬೇಕೆಂದು ಒತ್ತಾಯಿಸಿದರು.<br /> ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ, ಸಾಹಿತ್ಯ ಎಂದರೆ ಕೇವಲ ಓದುವುದು, ಬರೆಯುವುದು ಅಲ್ಲ. ಸಾಹಿತ್ಯ ಎಂದರೇನು ಅನ್ನುವುದು ಅರ್ಥವಾಗಬೇಕಾದರೆ ಸಹನೆ, ಅಗತ್ಯ. ಈ ವೇದಿಕೆ ರಾಜಕೀಯ ಉದ್ದೇಶಕ್ಕೆ ಅಲ್ಲ, ಕವಿ, ಸಾಹಿತಿ, ಲೇಖಕರಿಗಾಗಿ ನಿರ್ಮಿಸಿದ್ದು ಎಂದರು.<br /> ವಿಜಯಕುಮಾರ ಸ್ವಾಗತಿಸಿದರು. ಅಜಮೀರ ನಂದಾಪುರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ನಿಂಗೋಜಿ, ಅಯೋಧ್ಯ ರಾಮಾಚಾರ, ಸಿ.ಎಚ್. ನಾರಿನಾಳ, ಶಾಮಿದ್ ಮನಿಯಾರ, ಜಿ. ಶ್ರೀಧರ, ದೊಡ್ಡಪ್ಪ ದೇಸಾಯಿ, ತಿಪ್ಪೇರುದ್ರಸ್ವಾಮಿ, ನಾರಾಯಣಪ್ಪ ನಾಯಕ್, ಎಸ್.ಎನ್. ಮಠ, ಅಲ್ಲಮಪ್ರಭು ಬೆಟ್ಟದೂರು ಇತರರಿದ್ದರು.</p>.<p>‘ಪವಿತ್ರ ಸ್ಥಾನ ಬೇಕು’</p>.<p>ಗಂಗಾವತಿ: ನಾವು ನಿತ್ಯ ಪರಸ್ಪರ ವ್ಯವಹರಿಸುವುದಕ್ಕೆ ಸಂವಹನ ಸಂಪರ್ಕವಾಗಿ ಬಳಸುವ ಮಾತೃಭಾಷೆಗೆ ಪವಿತ್ರ ಸ್ಥಾನಮಾನ ನೀಡಿದರೆ ಮಾತ್ರ ಭಾಷೆಗೆ ಗೌರವ ನೀಡಿ ಉಳಿಸಲು ಸಾಧ್ಯ ಎಂದು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ ಅಭಿಪ್ರಾಯಪಟ್ಟರು.<br /> ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಮಾನವೀಯತೆ ಮತ್ತು ವಾಸ್ತವಿಕತೆಯ ತಳಹದಿಯ ಮೇಲೆ ಸಾಹಿತ್ಯ ಬೆಳೆದು ಬಂದಾಗ ಮಾತ್ರ ಅದೊಂದುಉತ್ಕೃಷ್ಟ ಸಾಹಿತ್ಯವಾಗಲು ಸಾಧ್ಯ. ಒಂದು ಜನಾಂಗದ ಸಂಸ್ಕೃತಿಯ ಸಾಧನೆ ಅಲ್ಲಿನ ಸಾಹಿತ್ಯದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ.<br /> ತಿರುಳ್ಗನ್ನಡ ನಾಡೆಂದು ಖ್ಯಾತವಾದ ಕೊಪ್ಪಳ ಜಿಲ್ಲೆಯ ಮಾನವ ಪರಂಪರೆಗೆ ಐದು ಸಾವಿರ ವರ್ಷದ ಇತಿಹಾಸವಿದೆ ಇಲ್ಲಿನ ಜನರಲ್ಲಿ ಸಹೋದರತೆ, ಸಮಾನತೆ, ಸಹಿಷ್ಣುತೆ ಹಾಸುಹೊಕ್ಕಾಗಿದೆ. ಸಾಹಿತ್ಯದೊಂದಿಗೆ ಭಾಷೆಯ ಬೆಳವಣಿಗೆಗೆ ಪರಸ್ಪರ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>