ಬೆಂಗಳೂರು: ‘ಗುಲ್ಬರ್ಗ’ ನಗರದ ಹೆಸರನ್ನು ‘ಕಲಬುರಗಿ’ ಮತ್ತು ‘ವಿಜಾಪುರ’ವನ್ನು ‘ವಿಜಯಾಪುರ’ ಎಂದು ಬದಲಾವಣೆ ಮಾಡಿ ಕಂದಾಯ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಉಳಿದ 10 ನಗರಗಳ ಹೆಸರುಗಳನ್ನು ರೋಮನ್ ಮತ್ತು ದೇವನಾಗರಿ ಲಿಪಿಗಳಲ್ಲಿ ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ.
ರಾಜ್ಯದ 12 ನಗರಗಳ ಹೆಸರು ಬದಲಾವಣೆಗೆ ಅ.17ರಂದು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಕೇಂದ್ರದ ಸೂಚನೆ ಆಧರಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯೋತ್ಸವದ ದಿನವಾದ ಶನಿವಾರದಿಂದ ಹೊಸ ಹೆಸರುಗಳು ಜಾರಿಗೆ ಬರಲಿವೆ.
‘ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಲ್ಲಿ ‘ಮೈಸೂರು’ ಎಂಬುದು ‘MYSURE' ಆಗಿತ್ತು. ಈ ಬಗ್ಗೆ ಪುನಃ ಕೇಂದ್ರ ಗೃಹ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸರ್ವೆ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆಯಲಾಯಿತು.
ಅದು ಮುದ್ರಣದಲ್ಲಿ ಆದ ದೋಷ. ‘MYSURU' ಎಂದೇ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ದೊರೆಯಿತು. ಅದರಂತೆ ತಿದ್ದುಪಡಿ ಮಾಡಬೇಕು ಎಂಬ ಸೂಚನೆ ದೊರೆಯಿತು. ಆ ಬಳಿಕ ಅಧಿಸೂಚನೆ ಹೊರಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
ಬದಲಾದ ಹೆಸರುಗಳು
ಕನ್ನಡ ಇಂಗ್ಲಿಷ್