<p><strong>ಮೈಸೂರು: </strong> ‘ಕನಕದಾಸರ ಆರಾಧಕರು (ಕುರುಬರು) ಶೈವರು. ಹಾಗಾಗಿ, ವೈಷ್ಣವ ದೀಕ್ಷೆ ಪಡೆಯುವ ಅಗತ್ಯ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಷ್ಟವಾಗಿ ಹೇಳಿದರು.<br /> <br /> ನಗರದ ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರ ಆರಾಧಕರು<br /> ಬಯಸಿದರೆ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂಬ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಲಹೆ ರೂಪದ<br /> ‘ಆಹ್ವಾನವನ್ನು’ ನಯವಾಗಿ ತಿರಸ್ಕರಿಸಿದರು.<br /> <br /> ‘ಕನಕದಾಸರು ವೈಷ್ಣವ ಸಿದ್ಧಾಂತದ ಪರಿಪಾಲಕರು. ಕನಕ ಸಿದ್ಧಾಂತದ ಬಗ್ಗೆ ಸತ್ಯವನ್ನು ತಿಳಿದಿದ್ದೇನೆ. ಈ ಹಿನ್ನೆಲೆಯಲ್ಲಿ ಕನಕ ಭಕ್ತರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂದು ಶ್ರೀಗಳು ಹೇಳಿದ್ದಾರಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ ‘ಕುರುಬರೆಲ್ಲ ಶೈವ ಪಂಥದವರು. ಹಾಗಾಗಿ, ವೈಷ್ಣವ ದೀಕ್ಷೆ ಸ್ವೀಕರಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಉತ್ತರಿಸಿದರು.<br /> <br /> <strong>ಬಾಗಲಕೋಟೆ ವರದಿ:</strong> ‘ಕುರುಬರಿಗೆ ವೈಷ್ಣವ ದೀಕ್ಷೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ, ಮುಕ್ತ ಚರ್ಚೆಗೂ ಸಿದ್ಧನಿದ್ದೇನೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.<br /> <br /> ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರು ಶ್ರೀಕೃಷ್ಣನ ಅನುಯಾಯಿ ಆಗಿದ್ದ ಕಾರಣ ಕುರುಬರು ವೈಷ್ಣವ ದೀಕ್ಷೆ ಪಡೆಯಬೇಕು ಎಂದು ಹೇಳಿದ್ದೇನೆ. ಇದು ಒತ್ತಾಯಪೂರ್ವಕ ದೀಕ್ಷೆಯಲ್ಲ. ಅವರ ಇಚ್ಛೆಗೆ ಬಿಟ್ಟದ್ದು’ ಎಂದರು.<br /> <br /> ‘ಕನಕನ ಅನುಯಾಯಿಗಳು ಹರಿಯ ಗುಲಾಮರಾಗಿ ಎಂದಿದ್ದೇನೆಯೇ ಹೊರತು ಬ್ರಾಹ್ಮಣರ ಗುಲಾಮರಾಗಿ ಎಂದೇನು ಹೇಳಿಲ್ಲ’ ಎಂದರು.<br /> <br /> ಕುರುಬ ಸಮಾಜದ ಮಠಾಧೀಶರು ತಮ್ಮನ್ನು ಹಾಲುಮತ ದೀಕ್ಷೆ ಪಡೆಯುವಂತೆ ಆಹ್ವಾನಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಾನು ಹಾಲುಮತ ಪರಂಪರೆ ಆರಾಧಕನಲ್ಲ. ಹಾಲುಮತಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong> ‘ಕನಕದಾಸರ ಆರಾಧಕರು (ಕುರುಬರು) ಶೈವರು. ಹಾಗಾಗಿ, ವೈಷ್ಣವ ದೀಕ್ಷೆ ಪಡೆಯುವ ಅಗತ್ಯ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಷ್ಟವಾಗಿ ಹೇಳಿದರು.<br /> <br /> ನಗರದ ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರ ಆರಾಧಕರು<br /> ಬಯಸಿದರೆ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂಬ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಲಹೆ ರೂಪದ<br /> ‘ಆಹ್ವಾನವನ್ನು’ ನಯವಾಗಿ ತಿರಸ್ಕರಿಸಿದರು.<br /> <br /> ‘ಕನಕದಾಸರು ವೈಷ್ಣವ ಸಿದ್ಧಾಂತದ ಪರಿಪಾಲಕರು. ಕನಕ ಸಿದ್ಧಾಂತದ ಬಗ್ಗೆ ಸತ್ಯವನ್ನು ತಿಳಿದಿದ್ದೇನೆ. ಈ ಹಿನ್ನೆಲೆಯಲ್ಲಿ ಕನಕ ಭಕ್ತರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂದು ಶ್ರೀಗಳು ಹೇಳಿದ್ದಾರಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ ‘ಕುರುಬರೆಲ್ಲ ಶೈವ ಪಂಥದವರು. ಹಾಗಾಗಿ, ವೈಷ್ಣವ ದೀಕ್ಷೆ ಸ್ವೀಕರಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಉತ್ತರಿಸಿದರು.<br /> <br /> <strong>ಬಾಗಲಕೋಟೆ ವರದಿ:</strong> ‘ಕುರುಬರಿಗೆ ವೈಷ್ಣವ ದೀಕ್ಷೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ, ಮುಕ್ತ ಚರ್ಚೆಗೂ ಸಿದ್ಧನಿದ್ದೇನೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.<br /> <br /> ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರು ಶ್ರೀಕೃಷ್ಣನ ಅನುಯಾಯಿ ಆಗಿದ್ದ ಕಾರಣ ಕುರುಬರು ವೈಷ್ಣವ ದೀಕ್ಷೆ ಪಡೆಯಬೇಕು ಎಂದು ಹೇಳಿದ್ದೇನೆ. ಇದು ಒತ್ತಾಯಪೂರ್ವಕ ದೀಕ್ಷೆಯಲ್ಲ. ಅವರ ಇಚ್ಛೆಗೆ ಬಿಟ್ಟದ್ದು’ ಎಂದರು.<br /> <br /> ‘ಕನಕನ ಅನುಯಾಯಿಗಳು ಹರಿಯ ಗುಲಾಮರಾಗಿ ಎಂದಿದ್ದೇನೆಯೇ ಹೊರತು ಬ್ರಾಹ್ಮಣರ ಗುಲಾಮರಾಗಿ ಎಂದೇನು ಹೇಳಿಲ್ಲ’ ಎಂದರು.<br /> <br /> ಕುರುಬ ಸಮಾಜದ ಮಠಾಧೀಶರು ತಮ್ಮನ್ನು ಹಾಲುಮತ ದೀಕ್ಷೆ ಪಡೆಯುವಂತೆ ಆಹ್ವಾನಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಾನು ಹಾಲುಮತ ಪರಂಪರೆ ಆರಾಧಕನಲ್ಲ. ಹಾಲುಮತಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>