ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್ ಆನಂದ್ ಫುಲೆ (26) ಎಂಬುವರು ಕುತ್ತಿಗೆ ಹಾಗೂ ಕೈಗಳನ್ನು ಚಾಕುವಿನಿಂದ ಕುಯ್ದುಕೊಂಡು ನಂತರ ನೇಣು ಹಾಕಿಕೊಂಡ ಘಟನೆ ಪರಪ್ಪನ ಅಗ್ರಹಾರ ಸಮೀಪದ ನಾರಾಯಣರೆಡ್ಡಿ ಲೇಔಟ್ನಲ್ಲಿ ನಡೆದಿದೆ.
ವಿಶಾಖಪಟ್ಟಣ ಮೂಲದ ಆನಂದ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಎಚ್ಎಎಲ್ ಸಮೀಪದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು, ಮೂರು ತಿಂಗಳ ಅವಧಿಗೆ ಗೋವಾಗೆ ವರ್ಗಾವಣೆಗೊಂಡಿದ್ದರು.
ಮಂಗಳವಾರ ಬೆಳಿಗ್ಗೆ ಗೋವಾದಿಂದ ನಗರಕ್ಕೆ ವಾಪಸಾದ ಆನಂದ್, ನಾರಾಯಣರೆಡ್ಡಿ ಲೇಔಟ್ನಲ್ಲಿರುವ ಸ್ನೇಹಿತರ ಮನೆಯಲ್ಲಿ ಉಳಿದು ಕೊಂಡಿದ್ದರು.
ಎಂದಿನಂತೆ ಬುಧವಾರ ಬೆಳಿಗ್ಗೆ 10 ಗಂಟೆಗೆ ಸ್ನೇಹಿತರು ಕೆಲಸಕ್ಕೆ ಹೋಗಿದ್ದರು.