ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತು ಖುಲಾಸೆಗೊಂಡರೂ ಅವರಿಗೆ ಪೊಲೀಸ್ ಸೇವೆಯಲ್ಲಿ ಉದ್ಯೋಗ ನಿರಾಕರಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪೊಲೀಸ್ ಸೇವೆಗೆ ಸೇರುವ ವ್ಯಕ್ತಿ ಪ್ರಾಮಾಣಿಕಹಾಗೂ ಚಾರಿತ್ರ್ಯವಂತ ನಾಗಿರಬೇಕು ಎಂದು ಕೋರ್ಟ್ ಹೇಳಿದೆ. ಅನುಕಂಪದ ಆಧಾರದಲ್ಲಿ ಕಾನಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಪರ್ವೇಜ್ ಖಾನ್ ಎಂಬಾತನಿಗೆ ಉದ್ಯೋಗ ನೀಡಬಹುದು ಎಂದು ಮಧ್ಯ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.