ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಲೀಲಾ ವಾಸುದೇವ್ ಅವರ ‘ಮಕ್ಕಳ ಕಸ್ತೂರಬಾ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಅವರ ಬಗ್ಗೆ ಸಾಕಷ್ಟು ಕೃತಿಗಳು ಬಂದಿವೆ. ಆದರೆ, ಅವರ ಪತ್ನಿ ಕಸ್ತೂರಬಾ ಅವರ ಬಗ್ಗೆ ಅಷ್ಟಾಗಿ ಲೇಖನಗಳು, ಪುಸ್ತಕಗಳು ರಚನೆಯಾಗಿಲ್ಲ. ಕಸ್ತೂರಬಾ ಅವರು ಗಾಂಧೀಜಿ ಅವರ ವ್ಯಕ್ತಿತ್ವವನ್ನು ರೂಪಿಸಿದ ಗುರು ಎಂದರು.
ಕಸ್ತೂರಬಾ ಅವರ ಕುರಿತು ಮಕ್ಕಳಿಗಾಗಿ ಕನ್ನಡದಲ್ಲಿ ಬಂದಿರುವ ಮೊದಲ ಕೃತಿ ‘ಮಕ್ಕಳ ಕಸ್ತೂರಬಾ’. ಕಸ್ತೂರ ಬಾ ಅವರ ಆದರ್ಶಗಳು, ವಿಚಾರಗಳನ್ನು ಅತ್ಯಂತ ಸರಳವಾಗಿ ಈ ಕೃತಿ ಮೂಲಕ ಹೇಳಲಾಗಿದೆ ಎಂದು ಹೇಳಿದರು.