ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾಗೆ ಹಾಮಾನಾ ಪ್ರಶಸ್ತಿ

Last Updated 27 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿನ ಕರ್ನಾಟಕ ಸಂಘ­ವು ನೀಡುವ ರಾಜ್ಯ ಮಟ್ಟದ ಡಾ.­ಹಾಮಾನಾ ಪ್ರಶಸ್ತಿ­ಗೆ ಈ ಬಾರಿ ಸಾಹಿತಿ ಚಂದ್ರ­ಶೇಖರ ಪಾಟೀಲ (ಚಂಪಾ) ಭಾಜನ­ರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ­ಯಲ್ಲಿ 2014ರ ಫೆ. 5ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₨ 25 ಸಾವಿರ ನಗದು, ಸರಸ್ವತಿ ವಿಗ್ರಹ ಹಾಗೂ ಪ್ರಶಸ್ತಿಪತ್ರ ಹೊಂದಿದೆ.

ಜಾನಪದ, ಅಂಕಣ, ಭಾಷಾ ವಿಜ್ಞಾನ, ಇತರ ಸಾಹಿತ್ಯ ಪ್ರಕಾರ­ಗಳಲ್ಲಿ ಪ್ರತಿ ವರ್ಷ­­ವೂ ಒಂದೊಂದು ಪ್ರಕಾ­­­ರ­ಕ್ಕೆ ಪ್ರಶಸ್ತಿ ನೀಡ­ಲಾಗುತ್ತಿದ್ದು, ಈ ಬಾರಿ ಅಂಕಣ ಸಾಹಿತ್ಯಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆದ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.­ಜಯಪ್ರಕಾಶಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT