<p><strong>ಬೆಂಗಳೂರು: </strong>‘ಕಂಬಾರರದ್ದು ಸಿದ್ಧಮಾದರಿಗೆ ದಕ್ಕುವ ಸಾಹಿತ್ಯವಲ್ಲ. ವೈಯಕ್ತಿಕ ಅಂತರಂಗದ ಅನಾವರಣವೇ ಅವರ ಸಾಹಿತ್ಯದ ಪ್ರಮುಖ ಉದ್ದೇಶ’ ಎಂದು ವಿಮರ್ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.<br /> <br /> ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ–ಒಂದು ಅವಲೋಕನ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಕಂಬಾರರ ನಾಟಕಗಳು ಹಳ್ಳಿ ಮತ್ತು ನಗರ ಸಂಘರ್ಷಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವುದಲ್ಲದೇ, ವ್ಯಕ್ತಿ ಪ್ರಜ್ಞೆಯ ಜತೆಯಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಸಶಕ್ತವಾಗಿ ಬಿಂಬಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.<br /> <br /> ‘ಮಾವೊತ್ಸೆ ಕುರಿತು ಬರೆದ ಕವಿತೆಯಲ್ಲಿ ಜನಪ್ರಿಯತೆಯನ್ನು ಹೊಗಳುತ್ತಲೇ ವ್ಯಂಗ್ಯವಾಡಿದ್ದಾರೆ. ಅವರ ಕಾವ್ಯ ಪ್ರಕಾರವು ವೈಭವ, ವ್ಯಂಗ್ಯ, ವಿಷಾದ ನಂತರ ಪ್ರತಿರೋಧದ ಮಾದರಿಯಲ್ಲಿ ಸಾಗುತ್ತದೆ. ಈ ಪ್ರಕಾರವು ಕನ್ನಡಕ್ಕೆ ಸಲ್ಲುವ ವಿಶೇಷ ಕಾಣಿಕೆ’ ಎಂದು ಬಣ್ಣಿಸಿದರು.<br /> <br /> <strong>ಕಂಬಾರ ಕನ್ನಡದ ಬ್ರೆಕ್ಟ್: ‘</strong>ಕಂಬಾರ ಅವರನ್ನು ನಾಟಕಕಾರ ಬ್ರೆಕ್ಟ್ಗೆ ಹೋಲಿಸಬಹುದು. ಬ್ರೆಕ್ಟ್ ತಮ್ಮ ನಾಟಕಗಳಲ್ಲಿ ಬಂಡವಾಳಶಾಹಿ ನಿಲುವನ್ನು ವಿರೋಧಿಸಿದರೆ, ಕಂಬಾರ ಜಮೀನ್ದಾರಿ ಪದ್ದತಿಯನ್ನು ಪ್ರತಿರೋಧಿಸಿದರು. ಜಾಗತೀಕರಣದ ಭರಾಟೆಯಲ್ಲಿಯೂ ಈ ನೆಲದ ಸಂಸ್ಕೃತಿ ಅಳಿಯದಂತೆ ಅಕ್ಷರ ರೂಪ ನೀಡಿದ್ದಾರೆ’ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕಾವ್ಯ, ಕಥನ, ನಾಟಕ, ಪ್ರಬಂಧ ಹೀಗೆ ಎಲ್ಲ ಪ್ರಕಾರಗಳಲ್ಲೂ ಉತ್ತಮ ಕೃಷಿ ನಡೆಯಬೇಕು. ಆಗ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗುತ್ತದೆ’ ಎಂದು ಹೇಳಿದರು.<br /> <br /> ‘ಕನ್ನಡದ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ವಿಶ್ವವಿದ್ಯಾಲಯವು ಕನ್ನಡ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಕಂಬಾರರದ್ದು ಸಿದ್ಧಮಾದರಿಗೆ ದಕ್ಕುವ ಸಾಹಿತ್ಯವಲ್ಲ. ವೈಯಕ್ತಿಕ ಅಂತರಂಗದ ಅನಾವರಣವೇ ಅವರ ಸಾಹಿತ್ಯದ ಪ್ರಮುಖ ಉದ್ದೇಶ’ ಎಂದು ವಿಮರ್ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.<br /> <br /> ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ–ಒಂದು ಅವಲೋಕನ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಕಂಬಾರರ ನಾಟಕಗಳು ಹಳ್ಳಿ ಮತ್ತು ನಗರ ಸಂಘರ್ಷಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವುದಲ್ಲದೇ, ವ್ಯಕ್ತಿ ಪ್ರಜ್ಞೆಯ ಜತೆಯಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಸಶಕ್ತವಾಗಿ ಬಿಂಬಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.<br /> <br /> ‘ಮಾವೊತ್ಸೆ ಕುರಿತು ಬರೆದ ಕವಿತೆಯಲ್ಲಿ ಜನಪ್ರಿಯತೆಯನ್ನು ಹೊಗಳುತ್ತಲೇ ವ್ಯಂಗ್ಯವಾಡಿದ್ದಾರೆ. ಅವರ ಕಾವ್ಯ ಪ್ರಕಾರವು ವೈಭವ, ವ್ಯಂಗ್ಯ, ವಿಷಾದ ನಂತರ ಪ್ರತಿರೋಧದ ಮಾದರಿಯಲ್ಲಿ ಸಾಗುತ್ತದೆ. ಈ ಪ್ರಕಾರವು ಕನ್ನಡಕ್ಕೆ ಸಲ್ಲುವ ವಿಶೇಷ ಕಾಣಿಕೆ’ ಎಂದು ಬಣ್ಣಿಸಿದರು.<br /> <br /> <strong>ಕಂಬಾರ ಕನ್ನಡದ ಬ್ರೆಕ್ಟ್: ‘</strong>ಕಂಬಾರ ಅವರನ್ನು ನಾಟಕಕಾರ ಬ್ರೆಕ್ಟ್ಗೆ ಹೋಲಿಸಬಹುದು. ಬ್ರೆಕ್ಟ್ ತಮ್ಮ ನಾಟಕಗಳಲ್ಲಿ ಬಂಡವಾಳಶಾಹಿ ನಿಲುವನ್ನು ವಿರೋಧಿಸಿದರೆ, ಕಂಬಾರ ಜಮೀನ್ದಾರಿ ಪದ್ದತಿಯನ್ನು ಪ್ರತಿರೋಧಿಸಿದರು. ಜಾಗತೀಕರಣದ ಭರಾಟೆಯಲ್ಲಿಯೂ ಈ ನೆಲದ ಸಂಸ್ಕೃತಿ ಅಳಿಯದಂತೆ ಅಕ್ಷರ ರೂಪ ನೀಡಿದ್ದಾರೆ’ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕಾವ್ಯ, ಕಥನ, ನಾಟಕ, ಪ್ರಬಂಧ ಹೀಗೆ ಎಲ್ಲ ಪ್ರಕಾರಗಳಲ್ಲೂ ಉತ್ತಮ ಕೃಷಿ ನಡೆಯಬೇಕು. ಆಗ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗುತ್ತದೆ’ ಎಂದು ಹೇಳಿದರು.<br /> <br /> ‘ಕನ್ನಡದ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ವಿಶ್ವವಿದ್ಯಾಲಯವು ಕನ್ನಡ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>