ಸೌದಿ ಅರೇಬಿಯಾದ ದೊರೆ ಅಲಾವಲೀದ್ ಬಿನ್ ತಲಾಲ್ ಸುಮಾರು ₨ 2 ಲಕ್ಷ ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ದೇಶದ ಅಭಿವೃದ್ಧಿ ಯೋಜನೆಗಳಿಗಾಗಿ ದತ್ತಿ ನೀಡಲು ಮುಂದಾಗಿ ದೇಶಕ್ಕೆ ಆದರ್ಶಪ್ರಾಯರಾಗಿದ್ದಾರೆ (ಪ್ರ.ವಾ., ಜುಲೈ 3). ಅಮೆರಿಕದ ಸಿರಿವಂತ ಬಿಲ್ ಗೇಟ್್ಸ ತಮ್ಮ ಪ್ರತಿಷ್ಠಾನದ ಮೂಲಕ ಕೋಟಿಗಳಲ್ಲಿ ದಾನ ಧರ್ಮ ಮಾಡಿ, ಇತರ ಸಿರಿವಂತರನ್ನೂ ದಾನಕ್ಕಾಗಿ ಪ್ರೇರೇಪಿಸುತ್ತಿದ್ದಾರೆ.
ಭಾರತದಲ್ಲೂ ಸಾಕಷ್ಟು ನವಕೋಟಿ ನಾರಾಯಣರು ಇದ್ದಾರೆ. ಅವರೂ ಇದೇ ರೀತಿ ತ್ಯಾಗಬುದ್ಧಿಯನ್ನು ತೋರಿಸಬೇಕಾಗಿದೆ. ನಮ್ಮಲ್ಲಿ ವೇದಕಾಲದಿಂದಲೂ ದಾನ– ಧರ್ಮ ಪ್ರಜ್ಞೆ ಬೆಳೆದು ಬಂದಿದೆ. ವಿಪರ್ಯಾಸವೆಂದರೆ ಈಗ ಭಾರತೀಯ ಕುಬೇರರೇ ಪರಕೀಯರಿಂದ ತ್ಯಾಗ ಬುದ್ಧಿ ಕಲಿತು ಅಳವಡಿಸಿಕೊಳ್ಳಬೇಕಾಗಿದೆ.