ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಪಂಚಾಯಿತಿ: ಅಪಾರ ನಿರೀಕ್ಷೆ

ಆರೂರು ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮಸಭೆ ಇಂದು
Last Updated 30 ಜುಲೈ 2015, 6:29 IST
ಅಕ್ಷರ ಗಾತ್ರ

ಬ್ರಹ್ಮಾವರ: ಹೊಸದಾಗಿ ಅಸ್ತಿತ್ವಕ್ಕೆ ಬಂದ ಆರೂರು ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮಸಭೆ ಇದೇ 30ರಂದು ಕುಂಜಾಲಿನಲ್ಲಿರುವ ಗ್ರಾಮ ಪಂಚಾಯಿತಿ ಯ ಸಭಾಂಗಣದಲ್ಲಿ ನಡೆಯಲಿದೆ. ಹೊಸ ಪಂಚಾಯಿತಿ, ಹೊಸ ಆಡಳಿತ, ಅಪಾರ ನಿರೀಕ್ಷೆಯಲ್ಲಿರುವ ಜನತೆಗೆ ಪ್ರಥಮ ಗ್ರಾಮಸಭೆ ಕುತೂಹಲ ಮೂಡಿಸಿದೆ.

2989.92 ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವ ಈ ಗ್ರಾಮ  2011ರ ಜನಗಣತಿ ಪ್ರಕಾರ ಒಟ್ಟು 3,609 ಜನಸಂಖ್ಯೆಯನ್ನು ಹೊಂದಿತ್ತು. ಇದರಲ್ಲಿ 1,841 ಮಹಿಳೆಯರು ಮತ್ತು 1,768 ಪುರುಷರು. ಈ ಮೊದಲು ಕೇವಲ 2 ವಾರ್ಡ್‌ಗಳನ್ನು ಹೊಂದಿದ್ದ ಈ ಪಂಚಾ ಯಿತಿ ಇದೀಗ ಹೊಸ ಪಂಚಾಯಿತಿಯಾಗಿ ಬದಲಾವಣೆ ಆಗಿ 4 ವಾರ್ಡ್‌ಗಳನ್ನು ಹೊಂದಿದೆ. 10 ಸದಸ್ಯ ಬಲದ ಈ ನೂತನ ಪಂಚಾಯಿತಿ ಇದೀಗ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅಧಿಕಾರ ದಲ್ಲಿದ್ದು, (8 ಬಿಜೆಪಿ ಬೆಂಬಲಿತ, 2 ಕಾಂಗ್ರೆಸ್‌ ಬೆಂಬಲಿತ) ರಾಜೀವ ಕುಲಾಲ ಅಧ್ಯಕ್ಷರಾಗಿ, ಗಣೇಶ ಕುಲಾಲ ಉಪಾಧ್ಯಕ್ಷ ರಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ಅಭಿವೃದ್ಧಿ ಕನಸು: ರಾಜೀವ ಕುಲಾಲರ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸದಸ್ಯರು ಅನೇಕ ಅಭಿವೃದ್ಧಿ ಕನಸು ಕಂಡಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಪ್ರಥಮವಾಗಿ ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿಯ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗು ವುದು. ಗ್ರಾಮ ಲೆಕ್ಕಿಗರ ಕಚೇರಿ, ಸಭಾಭವನ, ಗ್ರಂಥಾಲಯ ಮತ್ತು ವಿವಿಧ ಇಲಾಖೆಗಳ ಕಚೇರಿಗೆ ಅನುಕೂಲವಾಗು ವಂತೆ ಸುಮಾರು 1ಎಕರೆ ವಿಸ್ತೀರ್ಣದ ಜಾಗಕ್ಕಾಗಿ ಹುಡುಕಾಟ ಮಾಡಲಾಗು ತ್ತಿದೆ.

ಇದಲ್ಲದೇ  ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಈಗಾಗಲೇ 2.5 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣ, ವಿದ್ಯುತ್‌ ಸಂಪರ್ಕ, ಸಂಪರ್ಕ ರಸ್ತೆಗಳ ನಿರ್ಮಾಣ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಗ್ರಾಮದಲ್ಲಿ ಸ್ಮಶಾನ ರಚನೆಗೆ ಜಾಗವನ್ನು ಗೊತ್ತುಪಡಿಸಲಾಗಿದೆ ಎಂದು ತಿಳಿಸಿದರು.

ಬೇಡಿಕೆ:  ನೀಲಾವರ ಮತ್ತು ಆರೂರು ಎರಡು ಬೇರೆ ಬೇರೆಯಾಗಿ ಪಂಚಾಯಿತಿ­ಯಾಗಿ ರೂಪುಗೊಂಡ ಕಾರಣ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗುವಂತಾ­ಗುತ್ತದೆ. ಇದರ ಕೇಂದ್ರಸ್ಥಾನ (ಪಂಚಾಯಿತಿ ಕಚೇರಿ) ಗ್ರಾಮದಲ್ಲಿಯೇ ಆದಲ್ಲಿ ಗ್ರಾಮಸ್ಥರು ನೇರವಾಗಿ ತಮ್ಮ ಸಮಸ್ಯೆಗಳನ್ನು ಪಂಚಾಯಿತಿ ಮೂಲಕ ಪರಿಹರಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯಗಳು ಗ್ರಾಮಸ್ಥರದ್ದು.

ಇದಲ್ಲದೇ ಗ್ರಾಮದಲ್ಲಿ ಪಶು ಚಿಕಿತ್ಸಾಲಯ, ಪ್ರಾಥ­­ಮಿಕ ಆರೋಗ್ಯ ಕೇಂದ್ರ, ಸುಸಜ್ಜಿತ ಮೈದಾನ, ರಂಗಮಂದಿರದ ನಿರ್ಮಾಣದೊಂದಿಗೆ ಪ್ರತ್ಯೇಕವಾದ ಗ್ರಾಮ ಲೆಕ್ಕಿಗ­ರನ್ನು ನೀಡು­ವು­ದರೊಂದಿಗೆ ಗ್ರಾಮಸ್ಥರ ಮೂಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆ.   -ಎ.ಶೇಷಗಿರಿ ಭಟ್

14ನೇ ಹಣಕಾಸು ಆಯೋಗದ ಅನುದಾನ ಮತ್ತು ರಾಜ್ಯದ ಶಾಸನ ಬದ್ದ ಅನುದಾನ ಬರುವುದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ   -ರಾಜೀವ ಕುಲಾಲ,ಅಧ್ಯಕ್ಷ, ಆರೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT