<p><strong>ಬೆಂಗಳೂರು: </strong>ಹೈಕೋರ್ಟ್ ನ್ಯಾಯಮೂರ್ತಿ ಕೆ. ಎಲ್. ಮಂಜುನಾಥ್ ಅವರು ಸೋಮವಾರ ನಿವೃತ್ತರಾದರು.</p>.<p>ಅಪರೂಪದ ವಿದಾಯ: ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಗಂಣದಲ್ಲಿ ಮಂಜುನಾಥ್ ಅವರಿಗೆ ರಾಜ್ಯ ವಕೀಲರ ಪರಿಷತ್ ವತಿಯಿಂದ ಭಾವಪೂರ್ಣ ಬೀಳ್ಕೊಡೆಗೆ ನೀಡಲಾಯಿತು.<br /> <br /> ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರು, ಮಂಜುನಾಥ್ ಅವರು ಬಾರ್ ಮತ್ತು ಬೆಂಚ್ಗಳ ನಡುವಿನ ಸಮನ್ವಯಕಾರರಾಗಿ ಅಪಾರ ಜನಮನ್ನಣೆ ಗಳಿಸಿದ್ದರು ಎಂದು ಶ್ಲಾಘಿಸಿದರು. <br /> <br /> ವಿಷಾದ: ಮಂಜುನಾಥ್ ಅವರ ಸೇವಾ ಅವಧಿಯಲ್ಲಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿಸಿದ್ದನ್ನು ಸ್ಮರಿಸಿದ ವಘೇಲಾ ಅವರು, ಈ ದೇಶದಲ್ಲಿ ನ್ಯಾಯಮೂರ್ತಿಗೆ ನ್ಯಾಯವೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಂಜುನಾಥ್ ಅವರಿಗೆ ಅನ್ಯಾಯವಾಗಿದೆ. ಇದು ಬೇರೆ ಯಾರಿಗೂ ಆಗಬಾರದು. ಇದನ್ನು ರಿಪೇರಿ ಮಾಡಲು ಆಗುವುದಿಲ್ಲ ಎಂದು ನೋವಿನಿಂದ ಹೇಳಿದರು.<br /> <br /> ಬೀಳ್ಕೊಡುಗೆ ಸ್ವೀಕರಿಸಿದ ಮಾತನಾಡಿದ ಮಂಜುನಾಥ್ ಅವರು, ‘ಓ ದೇವರೇ ನನ್ನ ಶತ್ರುಗಳನ್ನು ಕ್ಷಮಿಸಿ ಬಿಡು’ ಎಂದು ಹೇಳಿದರು.<br /> <br /> ‘ಹಾಲಿ ನ್ಯಾಯಮೂರ್ತಿಗಳ ಕುತಂತ್ರದಿಂದ ನನಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿತು. ಕೇರಳದ ಕ್ರೈಂ ನ್ಯೂಸ್ ಪತ್ರಿಕೆಯಲ್ಲಿ ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾನೆಂದು ಸುಳ್ಳು ವರದಿ ಪ್ರಕಟಿಸಿ, ದೇಶದಾದ್ಯಂತ ಅಪಪ್ರಚಾರ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನೂ ಸುಪ್ರೀಂಕೋರ್ಟ್ನಲ್ಲಿ ತಡೆ ಹಿಡಿಯಲಾಯತು. ಇದು ಬೇರೆ ಯಾರಿಗೂ ಆಗಬಾರದು. ಪ್ರಾಮಾಣಿಕವಾಗಿ 14 ವರ್ಷ 4 ತಿಂಗಳು ಕೆಲಸ ಮಾಡಿದ್ದೇನೆ, ನನಗೆ ಯಾರ ಮೇಲೂ ದ್ವೇಷ ಇಲ್ಲ’ ಎಂದು ಗದ್ಗದಿತರಾಗಿ ಹೇಳಿದರು.<br /> <br /> ಕೆಲವರು ನನ್ನನ್ನು ಅಸಮರ್ಥ ಎಂದು ಟೀಕಿಸಿದ್ದಾರೆ. ನಾನು ನೀಡಿರುವ 10 ಸಾವಿರಕ್ಕಿಂತ ಹೆಚ್ಚಿನ ತೀರ್ಪುಗಳೇ ನನ್ನ ಸಾಮರ್ಥ್ಯದ ಬಗ್ಗೆ ಉತ್ತರ ಹೇಳುತ್ತವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹೈಕೋರ್ಟ್ ನ್ಯಾಯಮೂರ್ತಿ ಕೆ. ಎಲ್. ಮಂಜುನಾಥ್ ಅವರು ಸೋಮವಾರ ನಿವೃತ್ತರಾದರು.</p>.<p>ಅಪರೂಪದ ವಿದಾಯ: ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಗಂಣದಲ್ಲಿ ಮಂಜುನಾಥ್ ಅವರಿಗೆ ರಾಜ್ಯ ವಕೀಲರ ಪರಿಷತ್ ವತಿಯಿಂದ ಭಾವಪೂರ್ಣ ಬೀಳ್ಕೊಡೆಗೆ ನೀಡಲಾಯಿತು.<br /> <br /> ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರು, ಮಂಜುನಾಥ್ ಅವರು ಬಾರ್ ಮತ್ತು ಬೆಂಚ್ಗಳ ನಡುವಿನ ಸಮನ್ವಯಕಾರರಾಗಿ ಅಪಾರ ಜನಮನ್ನಣೆ ಗಳಿಸಿದ್ದರು ಎಂದು ಶ್ಲಾಘಿಸಿದರು. <br /> <br /> ವಿಷಾದ: ಮಂಜುನಾಥ್ ಅವರ ಸೇವಾ ಅವಧಿಯಲ್ಲಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿಸಿದ್ದನ್ನು ಸ್ಮರಿಸಿದ ವಘೇಲಾ ಅವರು, ಈ ದೇಶದಲ್ಲಿ ನ್ಯಾಯಮೂರ್ತಿಗೆ ನ್ಯಾಯವೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಂಜುನಾಥ್ ಅವರಿಗೆ ಅನ್ಯಾಯವಾಗಿದೆ. ಇದು ಬೇರೆ ಯಾರಿಗೂ ಆಗಬಾರದು. ಇದನ್ನು ರಿಪೇರಿ ಮಾಡಲು ಆಗುವುದಿಲ್ಲ ಎಂದು ನೋವಿನಿಂದ ಹೇಳಿದರು.<br /> <br /> ಬೀಳ್ಕೊಡುಗೆ ಸ್ವೀಕರಿಸಿದ ಮಾತನಾಡಿದ ಮಂಜುನಾಥ್ ಅವರು, ‘ಓ ದೇವರೇ ನನ್ನ ಶತ್ರುಗಳನ್ನು ಕ್ಷಮಿಸಿ ಬಿಡು’ ಎಂದು ಹೇಳಿದರು.<br /> <br /> ‘ಹಾಲಿ ನ್ಯಾಯಮೂರ್ತಿಗಳ ಕುತಂತ್ರದಿಂದ ನನಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿತು. ಕೇರಳದ ಕ್ರೈಂ ನ್ಯೂಸ್ ಪತ್ರಿಕೆಯಲ್ಲಿ ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾನೆಂದು ಸುಳ್ಳು ವರದಿ ಪ್ರಕಟಿಸಿ, ದೇಶದಾದ್ಯಂತ ಅಪಪ್ರಚಾರ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನೂ ಸುಪ್ರೀಂಕೋರ್ಟ್ನಲ್ಲಿ ತಡೆ ಹಿಡಿಯಲಾಯತು. ಇದು ಬೇರೆ ಯಾರಿಗೂ ಆಗಬಾರದು. ಪ್ರಾಮಾಣಿಕವಾಗಿ 14 ವರ್ಷ 4 ತಿಂಗಳು ಕೆಲಸ ಮಾಡಿದ್ದೇನೆ, ನನಗೆ ಯಾರ ಮೇಲೂ ದ್ವೇಷ ಇಲ್ಲ’ ಎಂದು ಗದ್ಗದಿತರಾಗಿ ಹೇಳಿದರು.<br /> <br /> ಕೆಲವರು ನನ್ನನ್ನು ಅಸಮರ್ಥ ಎಂದು ಟೀಕಿಸಿದ್ದಾರೆ. ನಾನು ನೀಡಿರುವ 10 ಸಾವಿರಕ್ಕಿಂತ ಹೆಚ್ಚಿನ ತೀರ್ಪುಗಳೇ ನನ್ನ ಸಾಮರ್ಥ್ಯದ ಬಗ್ಗೆ ಉತ್ತರ ಹೇಳುತ್ತವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>