<p><strong>ಬೆಂಗಳೂರು:</strong> ‘ರಾಷ್ಟ್ರಕವಿ’ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಆಶಯದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೆ ಜಿ.ಎಸ್.ಎಸ್. ಅವರ ಅಂತ್ಯಕ್ರಿಯೆ ಸರಳವಾಗಿ ಭಾವಪೂರ್ಣವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು.<br /> <br /> ಜಿ.ಎಸ್.ಎಸ್. ಅವರು ಬನಶಂಕರಿಯಲ್ಲಿರುವ ನಿವಾಸ ‘ಚೈತ್ರ’ದಲ್ಲಿ ಸೋಮವಾರ ವಿಧಿವಶರಾಗಿದ್ದರು. ‘ನಾನು ಯಾವುದೇ ಜಾತಿಗೆ ಸೇರಿದವನು ಅಲ್ಲ. ಕರ್ನಾಟಕಕ್ಕೆ ಸೇರಿದವನು ಅಲ್ಲ. ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬಾರದು’ ಎಂದು ಅವರು ಪತ್ರ ಬರೆದು ಇಟ್ಟಿದ್ದರು. ಅವರ ಆಶಯದ ಪ್ರಕಾರವೇ ಅಂತ್ಯಕ್ರಿಯೆ ನೆರವೇರಿತು.<br /> <br /> ನಗರದ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ದರ್ಶನದ ಬಳಿಕ ಸಂಜೆ 4.30ರ ವೇಳೆಗೆ ಪಾರ್ಥಿವ ಶರೀರವನ್ನು ಕುವೆಂಪು ಭಾಷಾ ಭಾರತಿ ಹಿಂಭಾಗದಲ್ಲಿರುವ ಜಾಗಕ್ಕೆ ತರಲಾಯಿತು. ಚಿತೆಗೆ ಹಿರಿಯ ಪುತ್ರ ಜಿ.ಎಸ್. ಜಯದೇವ ಅಗ್ನಿಸ್ಪರ್ಶ ಮಾಡಿದರು.</p>.<p>ಈ ಸಂದರ್ಭದಲ್ಲಿ ಜಿಎಸ್ಎಸ್ ಅವರ ಪತ್ನಿಯರಾದ ರುದ್ರಾಣಿ, ಪದ್ಮಾ, ಮಗಳು ಜಯಂತಿ, ಅಳಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಕಿರಿಯ ಪುತ್ರ ಡಾ.ಶಿವಪ್ರಸಾದ್ ದಂಪತಿ, ಮೊಮ್ಮಗ ಕೆ.ಎಂ.ಚೈತನ್ಯ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು.<br /> <br /> ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಹಿರಿಯ ಸಾಹಿತಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಷ್ಟ್ರಕವಿ’ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಆಶಯದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೆ ಜಿ.ಎಸ್.ಎಸ್. ಅವರ ಅಂತ್ಯಕ್ರಿಯೆ ಸರಳವಾಗಿ ಭಾವಪೂರ್ಣವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು.<br /> <br /> ಜಿ.ಎಸ್.ಎಸ್. ಅವರು ಬನಶಂಕರಿಯಲ್ಲಿರುವ ನಿವಾಸ ‘ಚೈತ್ರ’ದಲ್ಲಿ ಸೋಮವಾರ ವಿಧಿವಶರಾಗಿದ್ದರು. ‘ನಾನು ಯಾವುದೇ ಜಾತಿಗೆ ಸೇರಿದವನು ಅಲ್ಲ. ಕರ್ನಾಟಕಕ್ಕೆ ಸೇರಿದವನು ಅಲ್ಲ. ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬಾರದು’ ಎಂದು ಅವರು ಪತ್ರ ಬರೆದು ಇಟ್ಟಿದ್ದರು. ಅವರ ಆಶಯದ ಪ್ರಕಾರವೇ ಅಂತ್ಯಕ್ರಿಯೆ ನೆರವೇರಿತು.<br /> <br /> ನಗರದ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ದರ್ಶನದ ಬಳಿಕ ಸಂಜೆ 4.30ರ ವೇಳೆಗೆ ಪಾರ್ಥಿವ ಶರೀರವನ್ನು ಕುವೆಂಪು ಭಾಷಾ ಭಾರತಿ ಹಿಂಭಾಗದಲ್ಲಿರುವ ಜಾಗಕ್ಕೆ ತರಲಾಯಿತು. ಚಿತೆಗೆ ಹಿರಿಯ ಪುತ್ರ ಜಿ.ಎಸ್. ಜಯದೇವ ಅಗ್ನಿಸ್ಪರ್ಶ ಮಾಡಿದರು.</p>.<p>ಈ ಸಂದರ್ಭದಲ್ಲಿ ಜಿಎಸ್ಎಸ್ ಅವರ ಪತ್ನಿಯರಾದ ರುದ್ರಾಣಿ, ಪದ್ಮಾ, ಮಗಳು ಜಯಂತಿ, ಅಳಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಕಿರಿಯ ಪುತ್ರ ಡಾ.ಶಿವಪ್ರಸಾದ್ ದಂಪತಿ, ಮೊಮ್ಮಗ ಕೆ.ಎಂ.ಚೈತನ್ಯ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು.<br /> <br /> ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಹಿರಿಯ ಸಾಹಿತಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>