<p><strong>ನವದೆಹಲಿ (ಐಎಎನ್ಎಸ್): </strong>ಮಾಜಿ ಪ್ರಧಾನಿ ನೆಹರೂ ಅವರು ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು `ಕಟ್ಟಾ ಕೋಮುವಾದಿ' ಎಂದು ಕರೆದಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತೊಂದು ವಿವಾದದ ಹೇಳಿಕೆ ನೀಡಿದ್ದಾರೆ.</p>.<p>ಇತಿಹಾಸಕಾರ ಎಮ್.ಕೆ.ಕೆ. ನಾಯರ್ ಅವರ ಪುಸ್ತಕವನ್ನು ಉಲ್ಲೇಖಿಸಿ ತಮ್ಮ ಬ್ಲಾಗ್ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದ್ದಾರೆ.<br /> <br /> ಸ್ವಾತಂತ್ರ್ಯ ನಂತರದಲ್ಲಿ ನಿಜಾಮರು ಹೈದರಾಬಾದ್ ಪ್ರಾಂತ್ಯವನ್ನು ಪಾಕಿಸ್ತಾನಕ್ಕೆ ಸೇರಿಸಲು ಒಲವು ತೋರಿದ್ದರು. ಹಾಗಾಗಿ ನಿಜಾಮರು ಅಂದಿನ ಪಾಕ್ ಸರ್ಕಾರಕ್ಕೆ ಸಾಕಷ್ಟು ಹಣ ರವಾನೆ ಮಾಡಿದ್ದರು.<br /> <br /> ಈ ಹಿನ್ನೆಲೆಯಲ್ಲಿ ಪಟೇಲ್ ನೆಹರೂ ಬಳಿ ಮಿಲಿಟರಿ ದಾಳಿಗೆ ಅನುಮತಿ ಕೋರಿದ್ದರು. ಶಾಂತ ಸ್ವಾಭಾವದ ನೆಹರೂ 'ನೀನು ಕಟ್ಟಾ ಕೋಮುವಾದಿ ಈ ಪ್ರಸ್ತಾವನೆಗೆ ನಾನು ಒಪ್ಪಿಗೆ ಸೂಚಿಸುವುದಿಲ್ಲ' ಎಂದು ಹೇಳಿದ್ದರು. ಆಗ ಪಟೇಲರು ಖಾಲಿ ಪೇಪರ್ ಹಿಡಿದು ನೆಹರೂ ಕೊಠಡಿಯಿಂದ ಹೊರ ನಡೆದಿದ್ದರು ಎಂದು ಅಡ್ವಾಣಿ ಉಲ್ಲೇಖಿಸಿದ್ದಾರೆ.<br /> <br /> ಕೆಲ ದಿನಗಳ ಹಿಂದೆ ಅತಿ ಎತ್ತರದ ಪಟೇಲ್ ಪ್ರತಿಮೆಯನ್ನು ಅನಾವರಣ ಮಾಡುವ ಸಂದರ್ಭದಲ್ಲಿ ಅಡ್ವಾಣಿ ಅವರು `ದೇಶದಲ್ಲಿ ಪಟೇಲರ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಬೇಕೇ ಹೊರತು ಮತಬ್ಯಾಂಕ್ ಜಾತ್ಯತೀತತೆಯನ್ನಲ್ಲಾ' ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್): </strong>ಮಾಜಿ ಪ್ರಧಾನಿ ನೆಹರೂ ಅವರು ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು `ಕಟ್ಟಾ ಕೋಮುವಾದಿ' ಎಂದು ಕರೆದಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತೊಂದು ವಿವಾದದ ಹೇಳಿಕೆ ನೀಡಿದ್ದಾರೆ.</p>.<p>ಇತಿಹಾಸಕಾರ ಎಮ್.ಕೆ.ಕೆ. ನಾಯರ್ ಅವರ ಪುಸ್ತಕವನ್ನು ಉಲ್ಲೇಖಿಸಿ ತಮ್ಮ ಬ್ಲಾಗ್ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದ್ದಾರೆ.<br /> <br /> ಸ್ವಾತಂತ್ರ್ಯ ನಂತರದಲ್ಲಿ ನಿಜಾಮರು ಹೈದರಾಬಾದ್ ಪ್ರಾಂತ್ಯವನ್ನು ಪಾಕಿಸ್ತಾನಕ್ಕೆ ಸೇರಿಸಲು ಒಲವು ತೋರಿದ್ದರು. ಹಾಗಾಗಿ ನಿಜಾಮರು ಅಂದಿನ ಪಾಕ್ ಸರ್ಕಾರಕ್ಕೆ ಸಾಕಷ್ಟು ಹಣ ರವಾನೆ ಮಾಡಿದ್ದರು.<br /> <br /> ಈ ಹಿನ್ನೆಲೆಯಲ್ಲಿ ಪಟೇಲ್ ನೆಹರೂ ಬಳಿ ಮಿಲಿಟರಿ ದಾಳಿಗೆ ಅನುಮತಿ ಕೋರಿದ್ದರು. ಶಾಂತ ಸ್ವಾಭಾವದ ನೆಹರೂ 'ನೀನು ಕಟ್ಟಾ ಕೋಮುವಾದಿ ಈ ಪ್ರಸ್ತಾವನೆಗೆ ನಾನು ಒಪ್ಪಿಗೆ ಸೂಚಿಸುವುದಿಲ್ಲ' ಎಂದು ಹೇಳಿದ್ದರು. ಆಗ ಪಟೇಲರು ಖಾಲಿ ಪೇಪರ್ ಹಿಡಿದು ನೆಹರೂ ಕೊಠಡಿಯಿಂದ ಹೊರ ನಡೆದಿದ್ದರು ಎಂದು ಅಡ್ವಾಣಿ ಉಲ್ಲೇಖಿಸಿದ್ದಾರೆ.<br /> <br /> ಕೆಲ ದಿನಗಳ ಹಿಂದೆ ಅತಿ ಎತ್ತರದ ಪಟೇಲ್ ಪ್ರತಿಮೆಯನ್ನು ಅನಾವರಣ ಮಾಡುವ ಸಂದರ್ಭದಲ್ಲಿ ಅಡ್ವಾಣಿ ಅವರು `ದೇಶದಲ್ಲಿ ಪಟೇಲರ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಬೇಕೇ ಹೊರತು ಮತಬ್ಯಾಂಕ್ ಜಾತ್ಯತೀತತೆಯನ್ನಲ್ಲಾ' ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>