ತಾಲಿಬಾನ್ ಉಗ್ರರು 132 ಮಕ್ಕಳೂ ಸೇರಿ 148 ಮಂದಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಪ್ರಧಾನಿ ನವಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮರಣದಂಡನೆ ಮೇಲೆ ಹೇರಿದ್ದ ನಿಷೇಧವನ್ನು ರದ್ದುಪಡಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಯೊ ಟಿ.ವಿ. ವಾಹಿನಿ ತಿಳಿಸಿದೆ.
ತಾಲಿಬಾನ್ ಉಗ್ರರು ಮಂಗಳವಾರ ಸೇನೆಯ ಪಬ್ಲಿಕ್ ಶಾಲೆಯ ಮೇಲೆ ನಡೆಸಿದ ದಾಳಿಯನ್ನು ‘ಅನಾಗರಿಕರ ಮೂಲಕ ನಡೆದ ರಾಷ್ಟ್ರೀಯ ದುರಂತ’ ಎಂದು ಸರ್ವಪಕ್ಷಗಳ ಸಭೆ ಖಂಡಿಸಿದೆ.
ಉಗ್ರರ ಕ್ಷಮಾದಾನ ಮನವಿ ತಿರಸ್ಕೃತ: ಮರಣದಂಡನೆ ಶಿಕ್ಷೆ ಮೇಲೆ ಹೇರಿದ್ದ ನಿಷೇಧವನ್ನು ರದ್ದುಪಡಿಸಿದ ಬೆನ್ನಲ್ಲೇ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಉಗ್ರರ ಕ್ಷಮಾದಾನ ಅರ್ಜಿಗಳನ್ನು ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ತಿರಸ್ಕರಿಸಿದ್ದಾರೆ. 2012ರಲ್ಲಿ ಈ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಲಾಗಿತ್ತು.