ಉಮಾನಾಥ್ ಆಚಾರ್ ಅವರ ಪ್ರಥಮ ಪುತ್ರ ರವೀಶ್ ವಿವಾಹವಾಗಿದ್ದು, ಕುಂದಾಪುರದ ಪತ್ನಿ ಮನೆಯಲ್ಲಿಯೇ ನೆಲೆಸಿದ್ದಾರೆ. ಪುತ್ರಿ ಶೈಲಜಾ ಅವರು ತಾಲ್ಲೂಕಿನ ಹೊದಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಪುತ್ರಿ ಭಾರತಿ ಅವರು ಹೊಸನಗರ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ.
ಮಹೇಶ್ ಮೇಗರವಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾನೆ. ಆಗುಂಬೆಯಲ್ಲಿ ಈ ಹಿಂದೆ ವಾಸವಾಗಿದ್ದ ಆತ ಈಗ ಅಲ್ಲಿನ ನಂಟು ಕಳೆದುಕೊಂಡಿದ್ದಾನೆ. ಈ ಭಾಗದ ಜನ, ಮಹೇಶ್ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದಿದ್ದಾರೆ.
ಕೆಂದಾಳುಬೈಲಿನ ಮಹೇಶ್ ಅವರ ವಾಸದ ಮನೆ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು, ಈ ಮನೆಗೆ ಯಾರೂ ಬಂದುಹೋಗುತ್ತಿಲ್ಲ ಎಂದು ಆಗುಂಬೆ ಪಿಎಸ್ಐ ನಂಜಪ್ಪ ‘ಪ್ರಜಾವಾಣಿಗೆ’ ತಿಳಿಸಿದ್ದಾರೆ.