ರಾಜರಾಜೇಶ್ವರಿನಗರ ಲಗ್ಗೆರೆ ವಲಯದ ಚೌಡೇಶ್ವರಿ ನಗರಕ್ಕೆ ಮಾರ್ಕೆಟ್ನಿಂದ 267, ಮೆಜೆಸ್ಟಿಕ್ನಿಂದ 267ಎ, ಶಿವಾಜಿನಗರದಿಂದ 267ಬಿ ಬಸ್ಸುಗಳ ವ್ಯವಸ್ಥೆ ಇದೆ. ಆದರೆ ಕಳೆದ ಎರಡು ತಿಂಗಳಿನಿಂದ ಈ ಮೂರು ಮಾರ್ಗಗಳ ಬಸ್ಸುಗಳು ಚೌಡೇಶ್ವರಿನಗರ ಬಸ್ಸು ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿವೆ.
ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಮಳೆ, ಬಿಸಿಲು ಎನ್ನದೆ ತಮ್ಮ ಬೆನ್ನುಗಳ ಮೇಲೆ ಮಣಭಾರದ ಪುಸ್ತಕಗಳ ಬ್ಯಾಗುಗಳನ್ನು ಹೊತ್ತುಕೊಂಡು 2–3 ಕಿ.ಮೀ. ದೂರ ನಡೆದುಕೊಂಡು ಲಗ್ಗೆರೆ ನೂತನ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರದ ಕಡೆಗೆ ಹೋಗುವ ಬಸ್ಸುಗಳಲ್ಲಿ ಪ್ರಯಾಣ ಮಾಡಿ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಾಗಿದೆ. ಜೊತೆಗೆ ಗಾರ್ಮೆಂಟ್್ಸ ನೌಕರರು, ಹಿರಿಯ ನಾಗರಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಬಿಎಂಟಿಸಿಯವರು ನಾಗರಿಕ ಸೇವೆಯ ಹಿತದೃಷ್ಟಿಯಿಂದ ಮೇಲಿನ ಮೂರು ಮಾರ್ಗಗಳ ಬಸ್ಸು ಸಂಚಾರ ವ್ಯವಸ್ಥೆಯಲ್ಲಿ ಚೌಡೇಶ್ವರಿನಗರಕ್ಕೆ ಬಂದು ಹೋಗುವಂತೆ ಮಾರ್ಪಾಟು ಮಾಡಬೇಕು.