<p>ಶಿರಸಿ (ಉ.ಕ): ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ವೈದೇಹಿ ಪ್ರದಾನ ಮಾಡಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ವೈದೇಹಿ, ‘ತಮಾಷೆ ನಂದಿಸಿಕೊಂಡ, ಮಾತು ಕಳೆದುಕೊಂಡ, ಮಾತು ಮಾಹಿತಿ ಆದ ಸಮಾಜದಲ್ಲಿ ನಾವಿದ್ದೇವೆ. ಇಂತಹ ಸಮಾಜವನ್ನು ಲವಲವಿಕೆಗೆ ತರುವ ಸವಾಲು ಸಾಹಿತಿಗಳ ಮುಂದಿದೆ’ ಎಂದರು.<br /> <br /> ‘ಮನಸ್ಸಿಗೆ ನೋವುಂಟು ಮಾಡುವ, ಅಮಾನವೀಯ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಈ ದ್ವಂದ್ವಗಳನ್ನು ಕತೆಗಾರರು ಕತೆಯಲ್ಲಿ ನಿರೂಪಿಸಬಹುದು. ಆದರೆ ಇವನ್ನು ಹಾಸ್ಯದ ಮೂಲಕ ಸಮಾಜಕ್ಕೆ ತಲುಪಿಸುವುದು ಹಾಸ್ಯ ಬರಹಗಾರರಿಗೆ ಸವಾಲಾಗಿದೆ’ ಎಂದರು.<br /> <br /> ಭುವನೇಶ್ವರಿ ಹೆಗಡೆ ಮಾತನಾಡಿ ‘ಅನುಭವವನ್ನು ಆಶ್ರಯಿಸಿಕೊಂಡವರು ಹಾಸ್ಯ ಸಾಹಿತಿಗಳು. ಆದರೆ ಎಂದಿಗೂ ಒಬ್ಬ ಬಡವ, ಒಬ್ಬ ಅಂಗವಿಕಲನನ್ನು ಕಂಡಾಗ ಹಾಸ್ಯ ಸೃಷ್ಟಿಯಾಗಲಿಲ್ಲ. ‘ಕುಂಠಿತ’ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಹಾಸ್ಯ ಮೂಡಿ ಬಂದಿದೆ’ ಎಂದರು.<br /> <br /> ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ (ಉ.ಕ): ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ವೈದೇಹಿ ಪ್ರದಾನ ಮಾಡಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ವೈದೇಹಿ, ‘ತಮಾಷೆ ನಂದಿಸಿಕೊಂಡ, ಮಾತು ಕಳೆದುಕೊಂಡ, ಮಾತು ಮಾಹಿತಿ ಆದ ಸಮಾಜದಲ್ಲಿ ನಾವಿದ್ದೇವೆ. ಇಂತಹ ಸಮಾಜವನ್ನು ಲವಲವಿಕೆಗೆ ತರುವ ಸವಾಲು ಸಾಹಿತಿಗಳ ಮುಂದಿದೆ’ ಎಂದರು.<br /> <br /> ‘ಮನಸ್ಸಿಗೆ ನೋವುಂಟು ಮಾಡುವ, ಅಮಾನವೀಯ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಈ ದ್ವಂದ್ವಗಳನ್ನು ಕತೆಗಾರರು ಕತೆಯಲ್ಲಿ ನಿರೂಪಿಸಬಹುದು. ಆದರೆ ಇವನ್ನು ಹಾಸ್ಯದ ಮೂಲಕ ಸಮಾಜಕ್ಕೆ ತಲುಪಿಸುವುದು ಹಾಸ್ಯ ಬರಹಗಾರರಿಗೆ ಸವಾಲಾಗಿದೆ’ ಎಂದರು.<br /> <br /> ಭುವನೇಶ್ವರಿ ಹೆಗಡೆ ಮಾತನಾಡಿ ‘ಅನುಭವವನ್ನು ಆಶ್ರಯಿಸಿಕೊಂಡವರು ಹಾಸ್ಯ ಸಾಹಿತಿಗಳು. ಆದರೆ ಎಂದಿಗೂ ಒಬ್ಬ ಬಡವ, ಒಬ್ಬ ಅಂಗವಿಕಲನನ್ನು ಕಂಡಾಗ ಹಾಸ್ಯ ಸೃಷ್ಟಿಯಾಗಲಿಲ್ಲ. ‘ಕುಂಠಿತ’ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಹಾಸ್ಯ ಮೂಡಿ ಬಂದಿದೆ’ ಎಂದರು.<br /> <br /> ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>