ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರ್ಲಾ ಪ್ರಕರಣದ ಪರಿಸಮಾಪ್ತಿ ವರದಿ ಸಲ್ಲಿಕೆ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಉದ್ಯಮಿ ಕುಮಾರ ಮಂಗಳಂ ಬಿರ್ಲಾ, ಕಲ್ಲಿ­ದ್ದಲು ಇಲಾಖೆಯ ಮಾಜಿ ಕಾರ್ಯ­ದರ್ಶಿ ಪಿ.ಸಿ. ಪಾರೇಕ್‌ ಮತ್ತಿತರರ ವಿರುದ್ಧದ ಪ್ರಕರಣದ ವಿವರಣಾತ್ಮಕ ಮತ್ತು ವಿಸ್ತೃತ ಅಂತಿಮ ಪರಿಸಮಾಪ್ತಿ ವರದಿಯನ್ನು ಸಿಬಿಐ ವಿಶೇಷ ಕೋರ್ಟ್‌ಗೆ ಮಂಗಳವಾರ ಸಲ್ಲಿಸಿತು.

ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್‌ ಅವರಿಗೆ ವರದಿ ಸಲ್ಲಿಸಿದ ಸಂಸ್ಥೆ, ಪ್ರಕರಣದ ಕುರಿತು ನಡೆಸಲಾದ ತನಿಖೆಯ ಸಂಪೂರ್ಣ ವಿವರವನ್ನು ಇದು ಒಳಗೊಂಡಿದೆ ಎಂದು ತಿಳಿಸಿತು.

‘ತನಿಖಾ ಅಧಿಕಾರಿ (ಐಒ) ಡಿಎಸ್‌ಪಿ ಕೆ.ಎಲ್‌. ಮೋಸೆಸ್‌ ಅವರು ವಿವರ­ಣಾತ್ಮಕ ಮತ್ತು ವಿಸ್ತೃತವಾದ ಪರಿಷ್ಕೃತ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಅಂತಿಮ ವರದಿ ಪರಿಸಮಾಪ್ತಿ ವರದಿಯ ಲಕ್ಷಣವನ್ನೂ ಹೊಂದಿದೆ. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್.ಎಸ್‌. ಚೀಮಾ ಅವರು ವಾದ ಮುಂದು­ವರಿ­ಸಲು ಕಾಲಾವ-ಕಾಶ ಕೇಳಿದ್ದು, ವಿಚಾರ­ಣೆ­ಯನ್ನು ನ.10ಕ್ಕೆ ನಿಗದಿ-ಪಡಿಸಲಾಗಿದೆ’ ಎಂದು ನ್ಯಾಯಾಧೀಶರು ತಿಳಿಸಿದರು.

ತನಿಖೆ ವೇಳೆ ವಶಪಡಿಸಿಕೊಂಡ ಕೆಲವು ಹೆಚ್ಚುವರಿ ದಾಖಲೆಗಳನ್ನೂ ಸಿಬಿಐ ಕೋರ್ಟ್‌ಗೆ ಒಪ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT