ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಕಾವ್ಯದಲ್ಲಿ ಮಾತೃಪ್ರೇಮ ಪ್ರಧಾನ

Last Updated 31 ಜನವರಿ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇಂದ್ರೆ ಅವರ ಕವನ­ಗಳಲ್ಲಿ ಮಾತೃಪ್ರೇಮ ಪ್ರಧಾನವಾಗಿದೆ. ಅವರ ವ್ಯಕ್ತಿತ್ವ ರೂಪುಗೊಳ್ಳಲು ಅವರ ತಾಯಿ ಹಾಗೂ ಧಾರವಾಡದ ಸ್ನೇಹಿ­ತರು ಕಾರಣ’ ಎಂದು ಸಾಹಿತಿ ಪ್ರೊ.ಎಸ್‌.­ಜಿ. ಸಿದ್ದರಾಮಯ್ಯ ಹೇಳಿದರು. ದ.ರಾ. ಬೇಂದ್ರೆ ಕಾವ್ಯಕೂಟದ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ದ.ರಾ.ಬೇಂದ್ರೆ ಅವರ 119ನೇ ಜನ್ಮ ದಿನಾಚರಣೆ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು.

ಅವರ ಪ್ರತಿ ಕವನದಲ್ಲಿಯೂ ಮಾತೃ­ಪ್ರೇಮವನ್ನು ಕಾಣಬಹುದು. ಒಬ್ಬ ಕವಿಯ ಆತ್ಮಕತೆಯನ್ನು ಓದಿ­ದಾಗ ಅವರ ಕವನಗಳು ವಿಸ್ತರಣೆಗೆ ಸಿಗುತ್ತವೆ. ಬೇಂದ್ರೆ ಕಾವ್ಯ ಪ್ರತಿಭೆಯ ಉಗಮ ತಾಯಿಯಿಂದ ಆಗಿದೆ. ಆದರೆ, ಶಾಲ್ಮಲೆಯ ಉಗಮದಂತೆ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಅಭಿಪ್ರಾ­ಯಪಟ್ಟರು.

ಅವರ ಪ್ರಣಯ ಗೀತೆಗಳಲ್ಲಿ ಶೃಂಗಾರ ಭಾವ ಸಂಚಾರಿಯಾಗಿದೆ. ತಾಯಿತನದ ಭಾವ ಸ್ಥಿರವಾಗಿದೆ. ಅವರ ಕಾವ್ಯದಲ್ಲಿ ಜಾನಪದೀಯ ಲಯ, ಗೀತ ಗುಣ, ಲಯ ಮಾಧುರ್ಯ ಇರುವುದರಿಂದ ಇತರ ಕವಿಗಳ ಕಾವ್ಯಕ್ಕಿಂತ ಅದು ಭಿನ್ನವಾಗಿದೆ ಎಂದರು. ದ.ರಾ.ಬೇಂದ್ರೆ ಕಾವ್ಯಕೂಟದ ವತಿ­ಯಿಂದ ಆಯೋಜಿಸಿದ್ದ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ­ಗಳಿಗೆ ಬಹುಮಾನ ವಿತರಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯದ ಜಿ.ಎನ್‌.ಉಷಾ (ಪ್ರಥಮ), ಮೈಸೂರು ವಿಶ್ವವಿದ್ಯಾಲಯದ ಮಂಜು­ಮಣಿ (ದ್ವಿತೀಯ) ಮತ್ತು ತುಮಕೂರು ವಿಶ್ವವಿದ್ಯಾಲಯದ ಎಸ್.ಆರ್.ವೆಂಕಟೇಶ್ (ತೃತೀಯ) ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT