<p><strong>ಚೆನ್ನೈ (ಪಿಟಿಐ):</strong> ತಮ್ಮ ಹಿರಿಯ ಪುತ್ರ ಎಂ.ಕೆ.ಅಳಗಿರಿಯನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಹೊತ್ತಿದ ಕೌಟುಂಬಿಕ ಕಿಚ್ಚಿಗೆ ಬೆಚ್ಚಿರುವ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಬುಧವಾರ ತಮ್ಮ ಕಿರಿಯ ಪುತ್ರ ಸಾಲ್ಟಿನ್ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.<br /> <br /> ಅಳಗಿರಿಯ ಅಮಾನತು ಮಾಡಿದ ಘಟನೆಯ ನಂತರ ಕರುಣಾನಿಧಿ ಅವರು ಸಾಲ್ಟಿನ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>2006ರಲ್ಲಿ ಮಧುರೈ ರೈಲು ನಿಲ್ದಾಣದಲ್ಲಿ ಸಾಲ್ಟಿನ್ ಅವರ ಮೇಲೆ ನಡೆದ ಹತ್ಯೆಯ ಯತ್ನದ ಘಟನೆಯ ನಂತರ ಅವರಿಗೆ ಸಿಆರ್ಪಿಎಫ್ ಕಮಾಂಡೊಗಳ ಭದ್ರತೆ ಒದಗಿಸಲಾಗಿದೆ.</p>.<p>ಸಹೋದರ ಎಂ.ಕೆ. ಸ್ಟಾಲಿನ್ ಸಾವಿನ ಕುರಿತು ಅನುಚಿತ ಪದ ಪ್ರಯೋಗಿಸಿ ಮಾತನಾಡಿದ್ದಕ್ಕೆ, ಪಕ್ಷದಲ್ಲಿ ಹೊಂದಿದ ಉತ್ತಮ ಸ್ಥಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸದೆ ಇರುವುದು ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಕಾರಣಕ್ಕೆ ಅಳಗಿರಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು ಕರುಣಾನಿಧಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ):</strong> ತಮ್ಮ ಹಿರಿಯ ಪುತ್ರ ಎಂ.ಕೆ.ಅಳಗಿರಿಯನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಹೊತ್ತಿದ ಕೌಟುಂಬಿಕ ಕಿಚ್ಚಿಗೆ ಬೆಚ್ಚಿರುವ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಬುಧವಾರ ತಮ್ಮ ಕಿರಿಯ ಪುತ್ರ ಸಾಲ್ಟಿನ್ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.<br /> <br /> ಅಳಗಿರಿಯ ಅಮಾನತು ಮಾಡಿದ ಘಟನೆಯ ನಂತರ ಕರುಣಾನಿಧಿ ಅವರು ಸಾಲ್ಟಿನ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>2006ರಲ್ಲಿ ಮಧುರೈ ರೈಲು ನಿಲ್ದಾಣದಲ್ಲಿ ಸಾಲ್ಟಿನ್ ಅವರ ಮೇಲೆ ನಡೆದ ಹತ್ಯೆಯ ಯತ್ನದ ಘಟನೆಯ ನಂತರ ಅವರಿಗೆ ಸಿಆರ್ಪಿಎಫ್ ಕಮಾಂಡೊಗಳ ಭದ್ರತೆ ಒದಗಿಸಲಾಗಿದೆ.</p>.<p>ಸಹೋದರ ಎಂ.ಕೆ. ಸ್ಟಾಲಿನ್ ಸಾವಿನ ಕುರಿತು ಅನುಚಿತ ಪದ ಪ್ರಯೋಗಿಸಿ ಮಾತನಾಡಿದ್ದಕ್ಕೆ, ಪಕ್ಷದಲ್ಲಿ ಹೊಂದಿದ ಉತ್ತಮ ಸ್ಥಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸದೆ ಇರುವುದು ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಕಾರಣಕ್ಕೆ ಅಳಗಿರಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು ಕರುಣಾನಿಧಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>