ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಎಲ್ಲ ಹಂತಗಳೂ ಸೇರಿ 50 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ನ ಅಜಯ್ ರಾಯ್ ಅಖಾಡಕ್ಕಿಳಿದ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರ ಅಂತಿಮ ಹಂತದ ಮತದಾನದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು.
ಪಶ್ಚಿಮಬಂಗಾಳದಲ್ಲಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಮಾರಾಮಾರಿ ಬಿಟ್ಟರೆ, ಬಹುತೇಕ ಶಾಂತಿಯುತ ಮತದಾನ ನಡೆಯಿತು. ಮೋದಿ ಅವರು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದು ಹಾಗೂ ಅಜಯ್ ರಾಯ್ ತಮ್ಮ ಕುರ್ತಾದ ಮೇಲೆ ಪಕ್ಷದ ಚಿನ್ಹೆಯನ್ನು ಅಂಟಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಯಿತು.
ಪಶ್ಚಿಮಬಂಗಾಳದಲ್ಲಿ ಶೇ 79.96 ರಷ್ಟು, ಬಿಹಾರದಲ್ಲಿ ಶೇ 58 ಹಾಗೂ ಉ.ಪ್ರದೇಶದಲ್ಲಿ ಶೇ 55.29ರಷ್ಟು ಮತದಾನವಾಗಿದೆ.
ಪ್ರತಿಷ್ಠಿತ ವಾರಾಣಸಿ ಕ್ಷೇತ್ರದಲ್ಲಿ ಶೇ 55.34ರಷ್ಟು ಮತದಾನವಾಗಿದೆ.