ಕೋಲ್ಕತ್ತ(ಪಿಟಿಐ): ಬಾಂಗ್ಲಾದೇಶ ಮೂಲದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರು ‘ನಾನು ಭಾರತವನ್ನು ಶಾಶ್ವತವಾಗಿ ತೊರೆದಿಲ್ಲ. ಸುರಕ್ಷಿತ ಭಾವನೆ ಮೂಡಿದಾಗ ಭಾರತಕ್ಕೆ ಮರಳುತ್ತೇನೆ’ ಎಂದು ಹೇಳಿದ್ದಾರೆ.
‘ಬಾಂಗ್ಲಾದೇಶದಲ್ಲಿ ನಾಸ್ತಿಕ ಬರಹಗಾರರರನ್ನು (ಬ್ಲಾಗರ್ಗಳನ್ನು) ಕೊಲೆ ಮಾಡಿದ ಇಸ್ಲಾಂ ಮೂಲಭೂತವಾದಿಗಳಿಂದ ನನಗೆ ಜೀವ ಬೆದರಿಕೆ ಇತ್ತು’ ಎಂದು ಈಗ ಅಮೆರಿಕದಲ್ಲಿ ನೆಲೆಸಿರುವ ತಸ್ಲಿಮಾ ಟ್ವೀಟ್ ಮಾಡಿದ್ದಾರೆ.
‘ಭಾರತ ಸರ್ಕಾರದ ಜತೆ ನಾನು ಮಾತನಾಡಬೇಕಿದೆ. ಸುರಕ್ಷಿತ ಎನಿಸಿದಾಗ ಭಾರತಕ್ಕೆ ಮರಳುತ್ತೇನೆ’ ಎಂದು ಹೇಳಿದ್ದಾರೆ. ‘ಉಪನ್ಯಾಸ ನೀಡಲು ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಲು ನಾನು ಆಗಾಗ್ಗೆ ಅಮೆರಿಕಕ್ಕೆ ಹೋಗುತ್ತಿರುತ್ತೇನೆ. ಆದರೆ, ನಾನು ಶಾಶ್ವತವಾಗಿ ಭಾರತ ತೊರೆದಿಲ್ಲ. ಭಾರತ ಸರ್ಕಾರ ನನಗೆ ಯಾವಾಗಲೂ ಭದ್ರತೆ ಒದಗಿಸುತ್ತಾ ಬಂದಿದೆ’ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
52 ವರ್ಷದ ತಸ್ಲಿಮಾ ಅವರು ತಮ್ಮ ‘ಲಜ್ಜಾ’, ‘ದ್ವಿಖಂಡಿತೊ’ ಪುಸ್ತಕಗಳ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಜೀವಬೆದರಿಕೆ ಎದುರಿಸುತ್ತಿದ್ದಾರೆ.