<p><strong>ನವದೆಹಲಿ (ಪಿಟಿಐ): </strong>ಭಾರತದಲ್ಲಿ ಪ್ರತಿ ನಿತ್ಯ 1300 ಜನರು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ತಿಳಿಸಿದೆ.</p>.<p>ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ದೇಶವ್ಯಾಪಿ ನಡೆಸಿದ ಸಮಿಕ್ಷೆಯಿಂದ ಈ ಅಂಶ ದೃಢಪಟ್ಟಿದ್ದು, ತಂಬಾಕು ಸೇವನೆಯಿಂದ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಸಮೀಕ್ಷೆ ವರದಿ ತಿಳಿಸಿದೆ.<br /> <br /> 2012 ರಿಂದ 2014ರವರೆಗೆ ನಡೆದ ಸಂಶೋಧನೆಯಿಂದ ಈ ಅಂಶ ದೃಢಪಟ್ಟಿದ್ದು ಪ್ರತಿ ವರ್ಷ ಶೇ.6ರಷ್ಟು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.<br /> <br /> 2014ರಲ್ಲಿ 28,20,179ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4,91,598 ಜನರು ಸಾವನ್ನಪ್ಪಿದ್ದರು. 2013ರಲ್ಲಿ 4,78,180 ಹಾಗೂ 2012ರಲ್ಲಿ 4,65,169 ಜನರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು.<br /> <br /> ಬದಲಾದ ಜೀವನ ಶೈಲಿ, ತಂಬಾಕು ಸೇವನೆ, ಅತಿಯಾದ ಒತ್ತಡ, ಡಯಟ್, ಪೌಷ್ಠಿಕ ಆಹಾರದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ರೋಗ ಹರಡುತ್ತಿದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭಾರತದಲ್ಲಿ ಪ್ರತಿ ನಿತ್ಯ 1300 ಜನರು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ತಿಳಿಸಿದೆ.</p>.<p>ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ದೇಶವ್ಯಾಪಿ ನಡೆಸಿದ ಸಮಿಕ್ಷೆಯಿಂದ ಈ ಅಂಶ ದೃಢಪಟ್ಟಿದ್ದು, ತಂಬಾಕು ಸೇವನೆಯಿಂದ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಸಮೀಕ್ಷೆ ವರದಿ ತಿಳಿಸಿದೆ.<br /> <br /> 2012 ರಿಂದ 2014ರವರೆಗೆ ನಡೆದ ಸಂಶೋಧನೆಯಿಂದ ಈ ಅಂಶ ದೃಢಪಟ್ಟಿದ್ದು ಪ್ರತಿ ವರ್ಷ ಶೇ.6ರಷ್ಟು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.<br /> <br /> 2014ರಲ್ಲಿ 28,20,179ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4,91,598 ಜನರು ಸಾವನ್ನಪ್ಪಿದ್ದರು. 2013ರಲ್ಲಿ 4,78,180 ಹಾಗೂ 2012ರಲ್ಲಿ 4,65,169 ಜನರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು.<br /> <br /> ಬದಲಾದ ಜೀವನ ಶೈಲಿ, ತಂಬಾಕು ಸೇವನೆ, ಅತಿಯಾದ ಒತ್ತಡ, ಡಯಟ್, ಪೌಷ್ಠಿಕ ಆಹಾರದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ರೋಗ ಹರಡುತ್ತಿದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>