<p><p><strong>ನವದೆಹಲಿ: </strong>‘ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ, ಭಾರತದ ಒಳಗೆ ಸ್ವಾತಂತ್ರ್ಯವನ್ನು ಕೇಳುತ್ತಿದ್ದೇನೆ’.</p><p>ಇದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ, ರಾತ್ರಿ ಜೆಎನ್ಯು ಕ್ಯಾಂಪಸ್ನಲ್ಲಿ ಮಾಡಿದ ಭಾಷಣದ ತುಣುಕು.<br/>&#13; <br/>&#13; ‘ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಾಕಷ್ಟು ಭಿನ್ನಾಭಿಪ್ರಾಯವಿರುವುದು ನಿಜ. ಆದರೆ, ನಾನು ಅವರು ಮಾಡಿದ ಟ್ವೀಟ್ ‘ಸತ್ಯಮೇವ ಜಯತೆ’ಯನ್ನು ಗೌರವಿಸುತ್ತೇನೆ. ಯಾಕೆಂದರೆ ಈ ಪದಗಳು ನಮ್ಮ ದೇಶದ ಸಂವಿಧಾನದಲ್ಲಿವೆ’. ಭಾರತದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ’ ಎಂದರು.<br/>&#13; <br/>&#13; ‘ವಿದ್ಯಾರ್ಥಿಗಳಿಗೆ ದೇಶದೊಳಗೆ ಸ್ವಾತಂತ್ರ್ಯ ಬೇಕು. ಖಂಡಿತವಾಗಿಯೂ ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ. ಭಾರತದೊಳಗೆ ಸ್ವಾತಂತ್ರ್ಯ ಬೇಕು ಎಂದು ಕೇಳುತ್ತಿದ್ದೇನೆ’ ಎಂದರು.<br/>&#13; <br/>&#13; ಎಬಿವಿಪಿಯನ್ನು ಖಂಡಿತ ಶತ್ರುವಾಗಿ ನೋಡುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇನೆ. ಈ ವ್ಯವಸ್ಥೆಯಲ್ಲಿ ಅವರನ್ನು ವಿರೋಧ ಪಕ್ಷದ ರೀತಿಯಲ್ಲಿ ನೋಡಲು ಬಯಸುತ್ತೇನೆ ಎಂದರು.<br/>&#13; <br/>&#13; ದೆಹಲಿ ಹೈಕೋರ್ಟ್ ಗುರುವಾರ ಕನ್ಹಯ್ಯಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.</p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><p><strong>ನವದೆಹಲಿ: </strong>‘ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ, ಭಾರತದ ಒಳಗೆ ಸ್ವಾತಂತ್ರ್ಯವನ್ನು ಕೇಳುತ್ತಿದ್ದೇನೆ’.</p><p>ಇದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ, ರಾತ್ರಿ ಜೆಎನ್ಯು ಕ್ಯಾಂಪಸ್ನಲ್ಲಿ ಮಾಡಿದ ಭಾಷಣದ ತುಣುಕು.<br/>&#13; <br/>&#13; ‘ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಾಕಷ್ಟು ಭಿನ್ನಾಭಿಪ್ರಾಯವಿರುವುದು ನಿಜ. ಆದರೆ, ನಾನು ಅವರು ಮಾಡಿದ ಟ್ವೀಟ್ ‘ಸತ್ಯಮೇವ ಜಯತೆ’ಯನ್ನು ಗೌರವಿಸುತ್ತೇನೆ. ಯಾಕೆಂದರೆ ಈ ಪದಗಳು ನಮ್ಮ ದೇಶದ ಸಂವಿಧಾನದಲ್ಲಿವೆ’. ಭಾರತದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ’ ಎಂದರು.<br/>&#13; <br/>&#13; ‘ವಿದ್ಯಾರ್ಥಿಗಳಿಗೆ ದೇಶದೊಳಗೆ ಸ್ವಾತಂತ್ರ್ಯ ಬೇಕು. ಖಂಡಿತವಾಗಿಯೂ ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ. ಭಾರತದೊಳಗೆ ಸ್ವಾತಂತ್ರ್ಯ ಬೇಕು ಎಂದು ಕೇಳುತ್ತಿದ್ದೇನೆ’ ಎಂದರು.<br/>&#13; <br/>&#13; ಎಬಿವಿಪಿಯನ್ನು ಖಂಡಿತ ಶತ್ರುವಾಗಿ ನೋಡುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇನೆ. ಈ ವ್ಯವಸ್ಥೆಯಲ್ಲಿ ಅವರನ್ನು ವಿರೋಧ ಪಕ್ಷದ ರೀತಿಯಲ್ಲಿ ನೋಡಲು ಬಯಸುತ್ತೇನೆ ಎಂದರು.<br/>&#13; <br/>&#13; ದೆಹಲಿ ಹೈಕೋರ್ಟ್ ಗುರುವಾರ ಕನ್ಹಯ್ಯಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.</p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>