ನೂತನ ರಾಜ್ಯವಾಗಿ ಉದಯವಾದ ತೆಲಂಗಾಣ, ಜನಸಂಖ್ಯೆ ಮತ್ತು ವಿಸ್ತಾರದ ಎರಡೂ ದೃಷ್ಟಿಯಿಂದ ದೇಶದ 12ನೇ ದೊಡ್ಡ ರಾಜ್ಯ ಎನಿಸಿದೆ.
ರಾಜ್ಯದ ವಿಶೇಷತೆ: ಸ್ಥಳ: ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ತೆಲಂಗಾಣ ಹರಡಿಕೊಂಡಿದೆ. ನೆರೆ ರಾಜ್ಯಗಳು: ದಕ್ಷಿಣ ಮತ್ತು ಪೂರ್ವ ಭಾಗಕ್ಕೆ ಆಂಧ್ರಪ್ರದೇಶ, ಉತ್ತರ ಮತ್ತು ವಾಯವ್ಯ ಭಾಗಕ್ಕೆ ಮಹಾರಾಷ್ಟ್ರ, ಪಶ್ಚಿಮಕ್ಕೆ ಕರ್ನಾಟಕ ಹಾಗೂ ಈಶಾನ್ಯಕ್ಕೆ ಛತ್ತೀಸಗಡ ಮತ್ತು ಒಡಿಶಾ ರಾಜ್ಯಗಳು ತೆಲಂಗಾಣದ ಗಡಿಯನ್ನು ಹಂಚಿಕೊಂಡಿವೆ.
ಜನಸಂಖ್ಯೆ: ಸುಮಾರು 3.5 ಕೋಟಿ: ಪ್ರದೇಶ: ತೆಲಂಗಾಣ 1,14,840 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇದು ಇಂಗ್ಲೆಂಡ್ನ ವಿಸ್ತೀರ್ಣಕ್ಕೆ ಸಮವಾಗಿದೆ.
ಶಾಸಕಾಂಗ: ವಿಧಾನಸಭೆಯಲ್ಲಿ 119 ಮತ್ತು ವಿಧಾನ ಪರಿಷತ್ನಲ್ಲಿ 40 ಸ್ಥಾನಗಳನ್ನು ಹೊಂದಿದೆ.
ವಿಧಾನಸಭೆ ಪ್ರತಿನಿಧಿಸುತ್ತಿರುವವರು: ತೆಲಂಗಾಣ ರಾಷ್ಟ್ರ ಸಮಿತಿ 63, ಕಾಂಗ್ರೆಸ್ 21, ತೆಲುಗು ದೇಶಂ ಪಕ್ಷ 15, ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ 7, ಬಿಜೆಪಿ 5 ಮತ್ತು ಇತರರು 8 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. 17 ಲೋಕಸಭೆ ಸ್ಥಾನಗಳನ್ನು ಒಳಗೊಂಡಿದೆ.
ನೂತನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅಧಿಕಾರ ಗದ್ದುಗೆ ಏರಿದ್ದಾರೆ. ಪ್ರಥಮ ರಾಜ್ಯಪಾಲರಾಗಿ ಎಕ್ಕಡು ಶ್ರೀನಿವಾಸನ್ ಲಕ್ಷೀನರಸಿಂಹನ್ ಅವರನ್ನು ನೇಮಿಸಲಾಗಿದೆ.
ರಾಜಧಾನಿ: ಹೈದರಾಬಾದ್. 10 ವರ್ಷಗಳ ಕಾಲ ಆಂಧ್ರಪ್ರದೇಶಕ್ಕೂ ಹೈದರಾಬಾದ್ ರಾಜಧಾನಿಯಾಗಿರಲಿದೆ. ವರಂಗಲ್, ನಿಜಾಮಾಬಾದ್ ಮತ್ತು ಕರೀಮ್ನಗರ ಈ ರಾಜ್ಯದ ಇತರ ಪ್ರಮುಖ ನಗರಗಳು.
ಭಾಷೆ: ಇಲ್ಲಿನ ಶೇ 76 ರಷ್ಟು ಜನ ತೆಲುಗು ಮಾತನಾಡುತ್ತಾರೆ. ಶೇ 12 ರಷ್ಟು ಜನ ಉರ್ದು ಭಾಷಿಕರಿದ್ದಾರೆ. ಅಲ್ಲದೆ ಶೇ 12 ರಷ್ಟು ಇತರ ಭಾಷೆಗಳನ್ನು ಮಾತನಾಡುವವರಿದ್ದಾರೆ.
ಸಾಕ್ಷರತೆ: ಪುರುಷರ ಸಾಕ್ಷರತೆ ಶೇ 75.6, ಮಹಿಳಾ ಸಾಕ್ಷರತೆ ಶೇ 58.77. ಒಟ್ಟಾರೆ ಸಾಕ್ಷರತೆ ಶೇ 67.2.