ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾ ಧೀನಸುಗ್ರೀವಾಜ್ಞೆ: ಪೇಜಾವರ ಶ್ರೀ ವಿರೋಧ

Last Updated 20 ಜನವರಿ 2015, 19:30 IST
ಅಕ್ಷರ ಗಾತ್ರ

ರಾಯಚೂರು: ‘ರೈತರ ಒಪ್ಪಿಗೆ ಇಲ್ಲದೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಸುಗ್ರಿವಾಜ್ಞೆ ಹೆಸರಲ್ಲಿ ಮುಂದಾದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ’ ಎಂದು ಉಡುಪಿ ಪೇಜಾವರಮಠದ ವಿಶ್ವೇಶ­ತೀರ್ಥ ಸ್ವಾಮೀಜಿ  ಮಂಗಳವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಭಿವೃದ್ಧಿ ಹೆಸರಲ್ಲಿ ರೈತರ ಜಮೀನು ಪಡೆಯುವಾಗ ಅನ್ಯಾಯ ಆಗಬಾರದು’ ಎಂದರು. ‘ಯಾರೇ ಹಿಂದೂ ಸಂಘಟನೆ ಕಟ್ಟಲು ಮುಂದಾದರೆ ಸ್ವಾಗತ ಮಾಡು­­ತ್ತೇನೆ. ಭಯೋತ್ಪಾದನಾ ಕೃತ್ಯ­ಗಳಲ್ಲಿ ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚಾಗಿರುತ್ತಾರೆ. ಹಾಗಂತ ನಾನು ಮುಸ್ಲಿಂ ಸಮು­ದಾಯವನ್ನು ವಿರೋಧಿಸುವವ­ನಲ್ಲ. ಎಲ್ಲ ಧರ್ಮೀಯರು ಕೂಡಿ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ತಡೆಯಲು ಹೋರಾ­ಟಕ್ಕೆ ಮುಂದಾಗ­ಬೇಕಾದುದು ಅವಶ್ಯ­ವಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ತಾರತಮ್ಯ ಧೋರಣೆ ಅನುಸರಿಸ­ಬಾರದು. ಸರ್ವರಿಗೂ ಸಮನಾದ ಸೌಕರ್ಯ ಕಲ್ಪಿಸಬೇಕು. ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಯಾವುದೇ ಅಸಮಾಧಾನವಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT