ಮೆಮನ್ನನ್ನು ಗಲ್ಲಿನಿಂದ ತಡೆಯುವ ನಿಟ್ಟಿನಲ್ಲಿ ಕೆಲವು ವಕೀಲರ ಗುಂಪೊಂದು ತ್ವರಿತ ಅರ್ಜಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ದೌಡಾಯಿಸಿತು. ಕ್ಷಮಾದಾನ ಅರ್ಜಿ ವಜಾಗೊಂಡ ಬಳಿಕ ಅಪರಾಧಿಗೆ 14 ದಿನಗಳ ಕಾಲಾವಕಾಶ ನೀಡಬೇಕು ಎಂಬ ಅಂಶದ ಮೇಲೆ ಗಲ್ಲಿಗೆ ತಡೆ ನೀಡುವಂತೆ ಕೋರಿದರು.
ಆದರೆ, ದತ್ತು ಅವರು ರಚಿಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಮರಣ ದಂಡನೆ ಎತ್ತಿಹಿಡಿದು, ಗಲ್ಲು ತಡೆ ಅರ್ಜಿ ವಜಾಗೊಳಿಸಿದ್ದರಿಂದ ಸಮಾಲೋಚನೆಯ ಅಗತ್ಯ ಕಾಣಿಸಿತು.