ಹೈದರಾಬಾದ್ ನಿಜಾಮರ ದುರಾಡಳಿತ, ಅಮಾಯಕ ಜನರ ಮೇಲಿನ ದೌರ್ಜನ್ಯ, ಅತ್ಯಾ ಚಾರ, ಶೋಷಣೆಯ ವಿರುದ್ಧ ಸಿಡಿದೆದ್ದು ಹೈದ ರಾಬಾದ್ ಪ್ರಾಂತ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ನಿಜಾಮರಿಂದ ತುಳಿತಕ್ಕೊಳಗಾದ ಜನರನ್ನು ಸಂಘಟಿಸಿದವರು ಮತ್ತು ೧೯೪೮ರ ಸೆಪ್ಟೆಂಬರ್ನಲ್ಲಿ ಜರುಗಿದ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದವರು ಸ್ವಾಮಿ ರಾಮಾನಂದ ತೀರ್ಥರು.
ಈ ಮಹನೀಯರ ಹೆಸರಿನಲ್ಲಿ ಸಿಂದಗಿಯಲ್ಲಿ ವೀರಸೌಧ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಲಾಗಿದೆ. ಆದರೆ ಪ್ರತಿವರ್ಷ ಸೆ. ೧೭ರಂದು ನಡೆಯುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಅವರ ಹುಟ್ಟುಹಬ್ಬದ ದಿನ ಅವರನ್ನು ನೆನೆಯುವ ಕಾರ್ಯಕ್ಕೆ ಸ್ಥಳೀಯ ಜನಪ್ರತಿನಿಧಿಗಳಾಗಲಿ, ತಾಲ್ಲೂಕು ಆಡಳಿತವಾಗಲಿ ಮುಂದಾಗದೇ ಇರುವುದು ನೋವಿನ ಸಂಗತಿ.
ರಾಮಾನಂದ ತೀರ್ಥರ ನಿಸ್ವಾರ್ಥ ಸೇವೆಗಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಜನ ಅವರನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಆದರೆ ಹುಟ್ಟೂರಿನಲ್ಲಿಯೇ ಅವರನ್ನು ನೆನೆಯದಿರುವುದು ವಿಪರ್ಯಾಸ.
–ಸಂತೋಷ ಬಿ. ಜಾಲವಾದಿ, ಸಿಂದಗಿ-