ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರ ಪಕ್ಷಗಳನ್ನು ದಡ ಮುಟ್ಟಿಸದ ಮೋದಿ ಅಲೆ!

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಶಿವಸೇನಾ ಮೈತ್ರಿ ಕಡಿದು ಕೊಂಡ ಬಳಿಕ ಬಿಜೆಪಿ ಮಹಾ­ರಾಷ್ಟ್ರ­ದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದು ನಿಜ. ಆದರೆ ‘ಮೋದಿ ಅಲೆ’ಯು ಸಣ್ಣಪುಟ್ಟ ಮಿತ್ರ ಪಕ್ಷಗಳನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದೆ.
ಬಿಜೆಪಿ ತನ್ನ ಮಿತ್ರ ಪಕ್ಷಗಳಾದ  ಆರ್‌ಪಿಐ (ಅಠಾವಳೆ), ಸ್ವಾಭಿಮಾನ್‌ ಶೇತ್ಕಾರ್‌ ಸಂಘಟನ್‌, ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಶಿವ ಸಂಗ್ರಾಮ ಪಕ್ಷಕ್ಕೆ  30 ಸ್ಥಾನ ಬಿಟ್ಟುಕೊಟ್ಟಿತ್ತು.

ಪುಣೆಯ ದೌಂಡ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ರಾಹುಲ್ ಸುಭಾಸ್‌ ರಾವ್ ಕುಲ್‌ ಮಾತ್ರ ಆಯ್ಕೆ­ಯಾಗಿ­ದ್ದಾರೆ. ಎನ್‌ಸಿಪಿ ಟಿಕೆಟ್‌ ನಿರಾಕರಿಸಿ­ದ್ದರಿಂದ ಕೊನೆ ಗಳಿಗೆ­ಯಲ್ಲಿ ರಾಹುಲ್ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

‌ಆರ್‌ಪಿಐಗೆ ದಲಿತರು, ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಗೋಪಾ­ಲಕ ಸಮುದಾಯ (ಗೌಳಿ) ಹಾಗೂ  ಸ್ವಾಭಿಮಾನ್‌ ಶೇತ್ಕಾರ್‌ ಸಂಘಟನೆಗೆ  ರೈತರ ಬೆಂಬಲವಿದ್ದು, ಈ ಸಮುದಾ­ಯಗಳ ಬೆಂಬಲ ಪಡೆಯಲು ಬಿಜೆಪಿ ಈ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸುವ ತಂತ್ರ ರೂಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT