ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಪಶ್ಚಿಮ ಬುದ್ಧಿಯವರಲ್ಲ?

Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ಎಚ್.ಎಸ್.ಶಿವಪ್ರಕಾಶ್‌ ಅವರ ‘ಪ್ರತಿ­ಸ್ಪಂದನ’ ಅಂಕಣದಲ್ಲಿರುವ (ಪ್ರ.ವಾ., ಜೂ. 20.) ಎರಡು ಹೇಳಿಕೆಗಳ ಬಗ್ಗೆ ನಮಗೆ
ಆಕ್ಷೇಪ­ವಿದೆ:

1) ಪೆರಿಯಾರ್ ಬಗ್ಗೆ ಬರೆಯುತ್ತ ಅವರು ‘ಪಶ್ಚಿಮದ ಬುದ್ಧಿ’ ಎಂಬ ಪದ ಬಳಸಿದ್ದಾರೆ. ಇದು, ತಮಗಾಗದ ವಿಚಾರಗಳನ್ನು
ಹೊಂದಿದ­ವರ­ನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಲು ಬಳಸ­ಲಾಗುವ ‘ಮೆಕಾಲೆ, ಮಾರ್ಕ್ಸ್‌ ಸಂತಾನ’ ಎಂಬ ಪದಪ್ರಯೋಗದ ಹಾಗೆ ಇದೆ. ಹಾಗೆ ನೋಡಿ­ದರೆ ನಮ್ಮಲ್ಲಿ ಯಾರು ‘ಪಶ್ಚಿಮದ ಬುದ್ಧಿ’­ಯವರಲ್ಲ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂತ’ ಕವಿತೆಯಲ್ಲಿ ‘ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ/ ಇನ್ನಾದರೂ ಪೂರ್ವ­ಮೀಮಾಂಸೆ ಕರ್ಮಕಾಂಡಗಳನ್ನು ಬಗೆಯ­ಬೇಕು’ ಎನ್ನುತ್ತಾರೆ. ಅಡಿಗರ ಈ ಮಾತಿನ ಬಗ್ಗೆಯೂ ಭಿನ್ನಮತ ಸಾಧ್ಯವಿದೆ. ಆದರೆ ಅಡಿಗರು ಆ ಎರಡು ಸಾಲುಗಳ ಮಿತಿ­ಯಲ್ಲೇ ‘ಪಶ್ಚಿಮದ ಬುದ್ಧಿ’ ಎನ್ನುವುದಕ್ಕೆ ಸಂದರ್ಭ ಮತ್ತು ವಿವರಣೆಗಳನ್ನು ಒದಗಿಸು­ತ್ತಾರೆ. ಶಿವ­ಪ್ರಕಾಶ್‌ರ ಲೇಖನದಲ್ಲಿ ಆ ಜವಾಬ್ದಾರಿ ಇಲ್ಲ.

2) ತಮ್ಮ ಲೇಖನದ ಕೊನೆಯಲ್ಲಿ ‘ಇನ್ನಾ­ದರೂ ಮೂರ್ತಿಗಳ ಮೇಲೆ ಉಚ್ಚೆ ಹೊಯ್ದು ಹುಡುಗಾಟದ ಪರಾಕ್ರಮಗಳನ್ನು ವಿಜೃಂಭಿಸುವ ಬೇಜವಾ­ಬ್ದಾರಿ ತೀಟೆಗಳನ್ನು ನಮ್ಮ ಬುದ್ಧಿ­ಜೀವಿಗಳು ಕೈಬಿಡಲಿ...’ ಎಂದು ಶಿವಪ್ರಕಾಶ್ ಯಾರನ್ನು ಉದ್ದೇಶಿಸಿ ಬರೆದಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಆದರೆ ಮಾತಿನ ವಿವರ, ಸಂದರ್ಭ ನೋಡಿದರೆ ಅನಂತಮೂರ್ತಿಯವರ ‘ಬೆತ್ತಲೆಪೂಜೆ ಯಾಕೆ ಕೂಡದು?’ ಪ್ರಬಂಧ­ದಲ್ಲಿರುವ ಒಂದು ಹೇಳಿಕೆಯ ಬಗ್ಗೆ ಇತ್ತೀಚೆಗೆ, ಎಬ್ಬಿಸಲಾಗಿರುವ ವಿವಾದವನ್ನು ಮನಸ್ಸಿ­ನಲ್ಲಿಟ್ಟುಕೊಂಡು ಬರೆದಿರಬಹುದು ಎನಿಸುತ್ತದೆ.

ನಮ್ಮ ಊಹೆ ನಿಜವಾಗಿದ್ದಲ್ಲಿ, ಶಿವಪ್ರಕಾಶ್ ಅನಂತಮೂರ್ತಿಯವರನ್ನು ಹೆಸರಿಸಿ, ಅವರ ಹೇಳಿಕೆ­ಯನ್ನು ಹೊಂದಿರುವ ಪ್ಯಾರಾ ಯಥಾ­ವತ್ತಾಗಿ ಉದ್ಧರಿಸಿ, ನಂತರ ತಮ್ಮ ಅನಿಸಿಕೆ­ಯನ್ನು ಹೇಳಬೇಕಿತ್ತು. -ಇದು ವಾಗ್ವಾದದ ಸರಿಯಾದ ವಿಧಾನ. ಇದ್ಯಾವುದನ್ನೂ ಮಾಡದ ಶಿವಪ್ರಕಾಶ್ ಮರೆಯಲ್ಲಿ ನಿಂತು ಅನಂತ­ಮೂರ್ತಿ­ಯವರ ಮೇಲೆ ಕಲ್ಲು ತೂರಿದ್ದಾರೆ. ಇದು ‘ಬೇಜವಾಬ್ದಾರಿ’ಯದ್ದೂ ಹಾಗೂ ‘ಸ್ವವಿಮರ್ಶಾ ವಿಕಾಸಶೀಲ ಪರಂಪರೆ’ಗೆ ವ್ಯತಿರಿಕ್ತವಾದದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT