ನವದೆಹಲಿ (ಐಎಎನ್ಎಸ್): ನಿರೀಕ್ಷೆಯಂತೆ ರಕ್ಷಣಾ ಕ್ಷೇತ್ರಕ್ಕೆ ಬೃಹತ್ ಮೊತ್ತ (2.29 ಲಕ್ಷ ಕೋಟಿ ರೂಪಾಯಿ) ಮೀಸಲಿಟ್ಟಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕೃಷಿ, ಮೂಲ ಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
*ರಕ್ಷಣೆಗೆ 229000 ಕೋಟಿ ರೂಪಾಯಿ
*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 14389 ಕೋಟಿ ರೂಪಾಯಿ
*ಕುಡಿಯುವ ನೀರು ಯೋಜನೆಗಳಿಗೆ 3600 ಕೋಟಿ ರೂಪಾಯಿ
*ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ
*ರೈತರಿಗೆ ದೀರ್ಘಾವಧಿಯ ಸಾಲಕ್ಕಾಗಿ 5000 ಕೋಟಿ ರೂಪಾಯಿ ಸಂಚಯ ನಿಧಿ
*ಗ್ರಾಮೀಣ ಪ್ರದೇಶದ ನಿವಾಸಗಳ ಸುಧಾರಣೆಗೆ 8000 ಕೋಟಿ ರೂಪಾಯಿ
*ಸ್ವದೇಶಿ ಗೋವು ತಳಿ ಅಭಿವೃದ್ಧಿಗೆ 50 ಕೋಟಿ ರೂಪಾಯಿ
*ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ಗೆ 4000 ಕೋಟಿ ರೂಪಾಯಿ
*ಗಂಗಾ ಸಂರಕ್ಷಣಾ ಸಮಗ್ರ ಯೋಜನೆ ಅನುಷ್ಠಾನಕ್ಕೆ 2037 ಕೋಟಿ ರೂಪಾಯಿ
*ಗ್ರಾಮೀಣ ಪ್ರದೇಶದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಸುಧಾರಣೆಗೆ 500 ಕೋಟಿ ರೂಪಾಯಿ
*ಮಣ್ಣು ಪರೀಕ್ಷಾ ಸೌಲಭ್ಯ ಒದಗಿಸಲು 100 ಕೋಟಿ ರೂಪಾಯಿ
*ಉತ್ತಮ ಆಡಳಿತ ಉತ್ತೇಜನಕ್ಕೆ 100 ಕೋಟಿ ರೂಪಾಯಿ
*ತಲಾ ಐದು ಐಐಟಿ ಹಾಗೂ ಐಐಎಂ ಸ್ಥಾಪನೆಗೆ 500 ಕೋಟಿ ರೂಪಾಯಿ
*ದೊಡ್ಡ ನಗರಗಳಲ್ಲಿ ಮಹಿಳೆಯ ಸುರಕ್ಷೆಗೆ ಸುಧಾರಣೆಗೆ 150 ಕೋಟಿ ರೂಪಾಯಿ
*ಗ್ರಾಮೀಣ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಒದಗಿಸಲು 500 ಕೋಟಿ ರೂಪಾಯಿ
* ‘ಬೇಟಿ ಬಚಾವೋ ಬೇಟಿ ಪಡಾವೋ’ (ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರನ್ನು ಓದಿಸಿ) ಯೋಜನೆಗೆ 100 ಕೋಟಿ ರೂಪಾಯಿ
*ಹಸ್ತಕಲಾ ಅಕಾಡೆಮಿ ಸ್ಥಾಪನೆಗೆ ನಿರ್ಧಾರ ಅದಕ್ಕಾಗಿ 30 ಕೋಟಿ ರೂಪಾಯಿ ಅನುದಾನ
*ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ
* ಏಕ ಶ್ರೇಣಿ ಏಕ ನಿವೃತ್ತಿ ವೇತನ ಯೋಜನೆಗೆ 1000 ಕೋಟಿ ರೂಪಾಯಿ
*ನವದೆಹಲಿಯ ಪ್ರಿನ್ಸೆಸ್ ಪಾರ್ಕ್ನಲ್ಲಿ ಯುದ್ಧ ಸ್ಮಾರಕ ಹಾಗೂ ಯುದ್ಧ ಮ್ಯೂಸಿಯಂ ಸ್ಥಾಪನೆಗೆ ನಿರ್ಧಾರ – ಅದಕ್ಕಾಗಿ 1000 ಸಾವಿರ ಕೋಟಿ ರೂಪಾಯಿ
*ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ 50 ಕೋಟಿ ರೂಪಾಯಿ
*ರಾಷ್ಟ್ರೀಯ ಸ್ಪೋರ್ಟ್ಸ್ ಫೌಂಡೇಶನ್ ಸ್ಥಾಪನೆಗೆ (ಶೂಟಿಂಗ್, ಕುಸ್ತಿ ಹಾಗೂ ಬಾಕ್ಸಿಂಗ್) ಉದ್ದೇಶಿಸಲಾಗಿದೆ
*ಮಣಿಪುರದಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ 100 ಕೋಟಿ ರೂಪಾಯಿ
* ಜಮ್ಮು ಮತ್ತು ಕಾಶ್ಮೀರ್ದಲ್ಲಿ ಕ್ರೀಡಾ ಸೌಲಭ್ಯ ಸುಧಾರಿಕರಣಕ್ಕೆ 200 ಕೋಟಿ ರೂಪಾಯಿ
*100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 7060 ಕೋಟಿ ರೂಪಾಯಿ
*ಏಕತಾ ಪ್ರತಿಮೆ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಮೀಸಲು (ಗುಜರಾತ್ ಸರ್ಕಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಿಸುತ್ತಿದೆ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.