ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಶಂಕಾಸ್ಪದ ಸಾವು: ಕೊಲೆ ಶಂಕೆ

Last Updated 27 ಫೆಬ್ರುವರಿ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಸ್‌ಆರ್‌ ಲೇ­ಔಟ್‌ ಸಮೀಪದ ದೊಡ್ಡಕನ್ನ­ಹಳ್ಳಿ­ಯಲ್ಲಿ ಶುಕ್ರವಾರ ವಂದನಾ (20) ಎಂಬ ಯುವತಿ ಅನುಮಾನಾಸ್ಪದ ವಾಗಿ ಮೃತಪಟ್ಟಿದ್ದು, ದುಷ್ಕರ್ಮಿ­ಗಳು ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮಾಲ್‌ ಒಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ವಂದನಾ ಅವರು ಕುಟುಂಬ ಸದಸ್ಯರೊಂದಿಗೆ ದೊಡ್ಡ­ಕನ್ನ­ಹಳ್ಳಿಯ ಶೆಡ್‌­ನಲ್ಲಿ ವಾಸವಾಗಿ­ದ್ದರು. ಅವರ ತಂದೆ ವೆಂಕಟಪ್ಪ ಮತ್ತು ತಾಯಿ ಭವಾನಿ ಅವರು ಕೂಲಿ ಕಾರ್ಮಿಕರಾಗಿದ್ದಾರೆ.

ಕುಟುಂಬ ಸದಸ್ಯರೆಲ್ಲಾ ಗುರು­ವಾರ ಸಂಜೆ ಕೋಲಾರದಲ್ಲಿ ನಡೆದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದರು. ವಂದನಾ­ ಅನಾ­ರೋ­ಗ್ಯದ ಕಾರಣದಿಂದಾಗಿ ಮದುವೆಗೆ ಹೋಗದೆ ಒಬ್ಬರೇ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ನಸುಕಿನಲ್ಲಿ ಶೆಡ್‌ನ ಹಿಂಭಾಗದ ಶೌಚಾಲಯ­ದಲ್ಲಿ ವಂದನಾ ರಕ್ಷಣೆಗಾಗಿ ಕೂಗಿ­ಕೊಂಡಿ­ದ್ದಾರೆ. ಅಕ್ಕ­ಪಕ್ಕದ ಶೆಡ್‌ಗಳ ನಿವಾಸಿ­ಗಳು ಅವರ ಚೀರಾಟ ಕೇಳಿ ಶೌಚಾಲ­ಯದ ಬಳಿ ಹೋದಾಗ ಅವರಿಗೆ ಬೆಂಕಿ ಹೊತ್ತಿಕೊಂಡಿ­ರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಬೆಂಕಿ ನಂದಿಸಿ ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯ­ಗಳಿಂ­ದಾಗಿ ವಂದನಾ ಸ್ಥಳದಲ್ಲೇ ಮೃತ­ಪಟ್ಟಿ­ದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಇದು ಆತ್ಮಹತ್ಯೆಯೇ ಅಥವಾ ಬೆಂಕಿ ಹಚ್ಚಿ ಕೊಲೆ ಮಾಡಲಾಗಿ­ದೆಯೇ ಎಂಬುದು ಗೊತ್ತಾಗಿಲ್ಲ. ಘಟನೆ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT