ಬಳ್ಳಾರಿ:ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ಇಲ್ಲಿನ ರಾಘವ ಮೆಮೋರಿಯಲ್ ಅಸೋಸಿಯೇಷನ್ ನೀಡುವ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಗೆ ಧಾರವಾಡದ ಕಲಾವಿದೆ ಪ್ರೇಮಾ ಬಾದಾಮಿ (ಕನ್ನಡ) ಮತ್ತು ಎಸ್.ಆರ್.ಪ್ರಸಾದ್ ನಂದ್ಯಾಲ (ತೆಲುಗು) ಅವರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಜನಾಬ್ ಅಬ್ದುಲ್ ರವೂಫ್, ಮಾಕುಂಟೆ ಶೇಖರಪ್ಪ, ಬಿ.ಎಂ.ಬಸವರಾಜ, ಟಿ.ನಾಗರಾಜ, ಶಿವೇಶ್ವರಗೌಡ ಕಲ್ಲುಕಂಬ ಹಾಗೂ ತೆಲುಗು ವಿಭಾಗದಲ್ಲಿ ಎಂ.ಶ್ರೀನಿವಾಸಲು, ಟಿ.ಪಿ.ವೆಂಕಟರಾಮಪ್ಪ, ಬಿ.ಹನುಮಂತಪ್ಪ, ಕೆ.ಸೋಮಿರೆಡ್ಡಿ, ಜಿ.ಪ್ರಭಾಕರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರಿಗೆ ₨15 ಸಾವಿರ, ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದವರಿಗೆ ₨5 ಸಾವಿರದ ಜೊತೆಗೆ ಬೆಳ್ಳಿ ಪದಕ ನೀಡಲಾಗುವುದು.