<p><strong>ನವದೆಹಲಿ</strong>: ಖ್ಯಾತ ಯೋಗ ಗುರು, ರಾಜ್ಯದ ಬಿ.ಕೆ.ಎಸ್ ಅಯ್ಯಂಗಾರ್ (ಪದ್ಮವಿಭೂಷಣ), ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ (ಪದ್ಮಭೂಷಣ), ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ) ಸೇರಿದಂತೆ ರಾಜ್ಯದ ಒಟ್ಟು ಏಳು ಜನ ಸಾಧಕರನ್ನು ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.<br /> <br /> ಖ್ಯಾತ ವಿಜ್ಞಾನಿ ಮಹಾರಾಷ್ಟ್ರದ ಡಾ. ರಘುನಾಥ ಎ. ಮಶೇಲ್ಕರ್ ಅವರನ್ನು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಆಯ್ಕೆ ಮಾಡಲಾಗಿದೆ. 24 ಜನರನ್ನು ಪದ್ಮಭೂಷಣ ಹಾಗೂ 101 ಜನರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.<br /> <br /> <strong>ರಾಜ್ಯಕ್ಕೆ ಏಳು ಪದ್ಮ ಪ್ರಶಸ್ತಿ</strong><br /> ಪದ್ಮಭೂಷಣ ಪ್ರಶಸ್ತಿ ಪಡೆದವರಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕಿ ಪರ್ವಿನ್ ಸುಲ್ತಾನಾ, ಖ್ಯಾತ ನಟ ಕಮಲ್ ಹಾಸನ್, ಟೆನ್ನಿಸ್ ಆಟಗಾರ ಲಿಯಾಂಡರ್ ಪಯಸ್ ಪ್ರಮುಖರಾಗಿದ್ದರೆ ಪದ್ಮಶ್ರೀಗೆ ಆಯ್ಕೆಯಾದವರಲ್ಲಿ ನಟಿ ವಿದ್ಯಾ ಬಾಲನ್, ಕ್ರಿಕೆಟ್ ಆಟಗಾರ ಯುವರಾಜ ಸಿಂಗ್ ಮತ್ತಿತರರು ಸೇರಿದ್ದಾರೆ.<br /> <br /> <strong>ರಾಜ್ಯದ ಸಾಧಕರು</strong></p>.<p>*ಯೋಗ ಗುರು ಬಿಕೆಎಸ್ ಅಯ್ಯಂಗಾರ್ (ಪದ್ಮವಿಭೂಷಣ)<br /> *ಐಐಎಸ್ಸಿ ನಿರ್ದೇಶಕ ಪ್ರೊ.ಪದ್ಮನಾಭನ್ ಬಲರಾಂ<br /> (ಪದ್ಮಭೂಷಣ)<br /> * ಕೃಷಿ ವಿಜ್ಞಾನಿ ಡಾ.ಎಂ ಮಹಾದೇವಪ್ಪ (ಪದ್ಮಭೂಷಣ)<br /> * ಇಸ್ರೋ ಮಖ್ಯಸ್ಥ ಡಾ. ರಾಧಾಕೃಷ್ಣನ್ ಕೊಪ್ಪಿಲ್ಲಿ (ಪದ್ಮಭೂಷಣ)<br /> * ಪ್ರೊ.ಎಳುವತಿಂಗಳ್ ದೇವಾಸಿ ಜೇಮಿಸ್ (ವಿಜ್ಞಾನ,ಎಂಜಿನಿಯರಿಂಗ್: ಪದ್ಮಶ್ರೀ)<br /> * ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ)<br /> * ಅಂಗವಿಕಲ ಕ್ರೀಡಾಪಟು ಎಚ್. ಬೊನಿಫೇಸ್ ಪ್ರಭು (ಪದ್ಮಶ್ರೀ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಖ್ಯಾತ ಯೋಗ ಗುರು, ರಾಜ್ಯದ ಬಿ.ಕೆ.ಎಸ್ ಅಯ್ಯಂಗಾರ್ (ಪದ್ಮವಿಭೂಷಣ), ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ (ಪದ್ಮಭೂಷಣ), ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ) ಸೇರಿದಂತೆ ರಾಜ್ಯದ ಒಟ್ಟು ಏಳು ಜನ ಸಾಧಕರನ್ನು ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.<br /> <br /> ಖ್ಯಾತ ವಿಜ್ಞಾನಿ ಮಹಾರಾಷ್ಟ್ರದ ಡಾ. ರಘುನಾಥ ಎ. ಮಶೇಲ್ಕರ್ ಅವರನ್ನು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಆಯ್ಕೆ ಮಾಡಲಾಗಿದೆ. 24 ಜನರನ್ನು ಪದ್ಮಭೂಷಣ ಹಾಗೂ 101 ಜನರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.<br /> <br /> <strong>ರಾಜ್ಯಕ್ಕೆ ಏಳು ಪದ್ಮ ಪ್ರಶಸ್ತಿ</strong><br /> ಪದ್ಮಭೂಷಣ ಪ್ರಶಸ್ತಿ ಪಡೆದವರಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕಿ ಪರ್ವಿನ್ ಸುಲ್ತಾನಾ, ಖ್ಯಾತ ನಟ ಕಮಲ್ ಹಾಸನ್, ಟೆನ್ನಿಸ್ ಆಟಗಾರ ಲಿಯಾಂಡರ್ ಪಯಸ್ ಪ್ರಮುಖರಾಗಿದ್ದರೆ ಪದ್ಮಶ್ರೀಗೆ ಆಯ್ಕೆಯಾದವರಲ್ಲಿ ನಟಿ ವಿದ್ಯಾ ಬಾಲನ್, ಕ್ರಿಕೆಟ್ ಆಟಗಾರ ಯುವರಾಜ ಸಿಂಗ್ ಮತ್ತಿತರರು ಸೇರಿದ್ದಾರೆ.<br /> <br /> <strong>ರಾಜ್ಯದ ಸಾಧಕರು</strong></p>.<p>*ಯೋಗ ಗುರು ಬಿಕೆಎಸ್ ಅಯ್ಯಂಗಾರ್ (ಪದ್ಮವಿಭೂಷಣ)<br /> *ಐಐಎಸ್ಸಿ ನಿರ್ದೇಶಕ ಪ್ರೊ.ಪದ್ಮನಾಭನ್ ಬಲರಾಂ<br /> (ಪದ್ಮಭೂಷಣ)<br /> * ಕೃಷಿ ವಿಜ್ಞಾನಿ ಡಾ.ಎಂ ಮಹಾದೇವಪ್ಪ (ಪದ್ಮಭೂಷಣ)<br /> * ಇಸ್ರೋ ಮಖ್ಯಸ್ಥ ಡಾ. ರಾಧಾಕೃಷ್ಣನ್ ಕೊಪ್ಪಿಲ್ಲಿ (ಪದ್ಮಭೂಷಣ)<br /> * ಪ್ರೊ.ಎಳುವತಿಂಗಳ್ ದೇವಾಸಿ ಜೇಮಿಸ್ (ವಿಜ್ಞಾನ,ಎಂಜಿನಿಯರಿಂಗ್: ಪದ್ಮಶ್ರೀ)<br /> * ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ)<br /> * ಅಂಗವಿಕಲ ಕ್ರೀಡಾಪಟು ಎಚ್. ಬೊನಿಫೇಸ್ ಪ್ರಭು (ಪದ್ಮಶ್ರೀ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>