<p><strong>ಶಿವಮೊಗ್ಗ:</strong> ಕನ್ನಡ ರಂಗಭೂಮಿ ಇನ್ನಷ್ಟು ಶಕ್ತಿಶಾಲಿ ಮತ್ತು ಸೃಜನಶೀಲವಾಗಲು ದೆಹಲಿಯಲ್ಲಿರುವಂತೆ ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಸ್ಥಾಪಿಸುವ ಅಗತ್ಯವಿದೆ ಎಂದು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಪ್ರತಿಪಾದಿಸಿದರು.<br /> <br /> ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸೋಮವಾರದಿಂದ ಆರಂಭವಾದ ನಾಲ್ಕು ದಿವಸಗಳ ಮೈಸೂರು ರಂಗಾಯಣ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಗತ್ಯವನ್ನು ಬಹಳಷ್ಟು ಹಿರಿಯ ರಂಗಕರ್ಮಿಗಳು ಈ ಹಿಂದೆ ಪ್ರತಿಪಾದಿಸಿದ್ದರು; ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ನಡೆದವು. ಅದು ಈಗಾಲಾದರೂ ಆರಂಭವಾಗಬೇಕು ಎಂದು ಒತ್ತಾಯಿಸಿದರು.<br /> <br /> ರಂಗನಿರ್ದೇಶಕರು ಸಮಾಜ ಬದಲಾವಣೆ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಸಮಾಜಕ್ಕೆ ಮುಖಾಮುಖಿಯಾಗಬೇಕು. ಈ ಪ್ರಯತ್ನಗಳು ಈಗ ನಡೆಯುತ್ತಿದ್ದರೂ, ಅವು ಇನ್ನಷ್ಟು ಪರಿಣಾಮಕಾರಿಯಾಗಬೇಕು. ಬಹಳಷ್ಟು ಲೇಖಕರ ಪದ್ಯ, ಕಾದಂಬರಿ, ಕಥೆಗಳು ರಂಗಕೃತಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಈಗ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.<br /> <br /> ರಂಗಕೃತಿ ಶ್ರೇಷ್ಠವೋ, ನಿರ್ದೇಶಕ ಶ್ರೇಷ್ಠವೋ ಎಂಬ ಚರ್ಚೆ ಇದೆ. ಆದರೆ, ರಂಗಕೃತಿಯನ್ನು ರಂಗದಲ್ಲಿ ತಂದು ಅದನ್ನು ಜೀವಂತಗೊಳಿಸುವ ನಿರ್ದೇಶಕನೇ ಮೇಲು ಎಂದು ಅವರು ಅಭಿಪ್ರಾಯಪಟ್ಟರು.<br /> <br /> ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಜನಾರ್ದನ್ (ಜನ್ನಿ) ಮಾತನಾಡಿ, ರಂಗಾಯಣ ತನ್ನ ವಿಭಿನ್ನ ಪ್ರಯೋಗಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣೀಭೂತವಾಗಿದೆ ಎಂದು ಹೇಳಿದರು.<br /> <br /> ‘ರಂಗಾಯಣಕ್ಕೆ ದೊಡ್ಡ ಪರಂಪರೆ ಇದೆ. 25ವರ್ಷವೂ ಪೂರ್ಣಾವಧಿಯಾಗಿ ಕನ್ನಡದ ಸೇವೆ ಮಾಡಿ, ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಾ ಬಂದಿದೆ. ಇಂತಹ ರಂಗಸಂಸ್ಥೆಯನ್ನು ಅಭಿಮಾನದಿಂದ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.<br /> <br /> ನಾಟಕ ಇರುವುದೇ ಸಾಮಾಜಿಕ ಬದಲಾವಣೆಗೆ; ಮನುಷ್ಯನ ಬುದ್ಧಿಯ ವಿಕಾಸ, ಬೆಳವಣಿಗೆಗೆ ನಾಟಕ ಪೂರಕವಾಗಿ ಕೆಲಸ ಮಾಡುತ್ತದೆ ಎಂದ ಅವರು, ಇಂದಿನ ಯುವಕರು ಬೇರೆ–ಬೇರೆ ಕಾರಣಗಳಿಂದ ಆತಂಕದ ಸ್ಥಿತಿಯಲ್ಲಿದ್ದಾರೆ. ಅಂತಹವರನ್ನು ರಂಗಭೂಮಿಗೆ ತರುವ ಕೆಲಸ ಆಗಬೇಕಾಗಿದೆ. ಹೊಸ ಚೈತನ್ಯ ಪುಟಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.<br /> <br /> ಮೈಸೂರು ರಂಗಾಯಣ ಉಪನಿರ್ದೇಶಕ ಎಸ್.ಐ.ಭಾವಿಕಟ್ಟೆ ಸ್ವಾಗತಿಸಿದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು. ಕಲಾವಿದ ಮಂಜುನಾಥ ಬೆಳಕೆರೆ ಕಾರ್ಯಕ್ರಮ ನಿರೂಪಿಸಿದರು.<br /> <br /> ತದನಂತರ ಮೈಸೂರು ರಂಗಾಯಣ ಕಲಾವಿದರು ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ (ಸಂಗೀತ/ ನಿರ್ದೇಶನ; ವೈ.ಎಂ.ಪುಟ್ಟಣ್ಣಯ್ಯ) ‘ಸದಾರಮಾ ನಾಟಕಂ’ ಪ್ರದರ್ಶಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಕನ್ನಡ ರಂಗಭೂಮಿ ಇನ್ನಷ್ಟು ಶಕ್ತಿಶಾಲಿ ಮತ್ತು ಸೃಜನಶೀಲವಾಗಲು ದೆಹಲಿಯಲ್ಲಿರುವಂತೆ ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಸ್ಥಾಪಿಸುವ ಅಗತ್ಯವಿದೆ ಎಂದು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಪ್ರತಿಪಾದಿಸಿದರು.<br /> <br /> ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸೋಮವಾರದಿಂದ ಆರಂಭವಾದ ನಾಲ್ಕು ದಿವಸಗಳ ಮೈಸೂರು ರಂಗಾಯಣ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಗತ್ಯವನ್ನು ಬಹಳಷ್ಟು ಹಿರಿಯ ರಂಗಕರ್ಮಿಗಳು ಈ ಹಿಂದೆ ಪ್ರತಿಪಾದಿಸಿದ್ದರು; ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ನಡೆದವು. ಅದು ಈಗಾಲಾದರೂ ಆರಂಭವಾಗಬೇಕು ಎಂದು ಒತ್ತಾಯಿಸಿದರು.<br /> <br /> ರಂಗನಿರ್ದೇಶಕರು ಸಮಾಜ ಬದಲಾವಣೆ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಸಮಾಜಕ್ಕೆ ಮುಖಾಮುಖಿಯಾಗಬೇಕು. ಈ ಪ್ರಯತ್ನಗಳು ಈಗ ನಡೆಯುತ್ತಿದ್ದರೂ, ಅವು ಇನ್ನಷ್ಟು ಪರಿಣಾಮಕಾರಿಯಾಗಬೇಕು. ಬಹಳಷ್ಟು ಲೇಖಕರ ಪದ್ಯ, ಕಾದಂಬರಿ, ಕಥೆಗಳು ರಂಗಕೃತಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಈಗ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.<br /> <br /> ರಂಗಕೃತಿ ಶ್ರೇಷ್ಠವೋ, ನಿರ್ದೇಶಕ ಶ್ರೇಷ್ಠವೋ ಎಂಬ ಚರ್ಚೆ ಇದೆ. ಆದರೆ, ರಂಗಕೃತಿಯನ್ನು ರಂಗದಲ್ಲಿ ತಂದು ಅದನ್ನು ಜೀವಂತಗೊಳಿಸುವ ನಿರ್ದೇಶಕನೇ ಮೇಲು ಎಂದು ಅವರು ಅಭಿಪ್ರಾಯಪಟ್ಟರು.<br /> <br /> ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಜನಾರ್ದನ್ (ಜನ್ನಿ) ಮಾತನಾಡಿ, ರಂಗಾಯಣ ತನ್ನ ವಿಭಿನ್ನ ಪ್ರಯೋಗಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣೀಭೂತವಾಗಿದೆ ಎಂದು ಹೇಳಿದರು.<br /> <br /> ‘ರಂಗಾಯಣಕ್ಕೆ ದೊಡ್ಡ ಪರಂಪರೆ ಇದೆ. 25ವರ್ಷವೂ ಪೂರ್ಣಾವಧಿಯಾಗಿ ಕನ್ನಡದ ಸೇವೆ ಮಾಡಿ, ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಾ ಬಂದಿದೆ. ಇಂತಹ ರಂಗಸಂಸ್ಥೆಯನ್ನು ಅಭಿಮಾನದಿಂದ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.<br /> <br /> ನಾಟಕ ಇರುವುದೇ ಸಾಮಾಜಿಕ ಬದಲಾವಣೆಗೆ; ಮನುಷ್ಯನ ಬುದ್ಧಿಯ ವಿಕಾಸ, ಬೆಳವಣಿಗೆಗೆ ನಾಟಕ ಪೂರಕವಾಗಿ ಕೆಲಸ ಮಾಡುತ್ತದೆ ಎಂದ ಅವರು, ಇಂದಿನ ಯುವಕರು ಬೇರೆ–ಬೇರೆ ಕಾರಣಗಳಿಂದ ಆತಂಕದ ಸ್ಥಿತಿಯಲ್ಲಿದ್ದಾರೆ. ಅಂತಹವರನ್ನು ರಂಗಭೂಮಿಗೆ ತರುವ ಕೆಲಸ ಆಗಬೇಕಾಗಿದೆ. ಹೊಸ ಚೈತನ್ಯ ಪುಟಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.<br /> <br /> ಮೈಸೂರು ರಂಗಾಯಣ ಉಪನಿರ್ದೇಶಕ ಎಸ್.ಐ.ಭಾವಿಕಟ್ಟೆ ಸ್ವಾಗತಿಸಿದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು. ಕಲಾವಿದ ಮಂಜುನಾಥ ಬೆಳಕೆರೆ ಕಾರ್ಯಕ್ರಮ ನಿರೂಪಿಸಿದರು.<br /> <br /> ತದನಂತರ ಮೈಸೂರು ರಂಗಾಯಣ ಕಲಾವಿದರು ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ (ಸಂಗೀತ/ ನಿರ್ದೇಶನ; ವೈ.ಎಂ.ಪುಟ್ಟಣ್ಣಯ್ಯ) ‘ಸದಾರಮಾ ನಾಟಕಂ’ ಪ್ರದರ್ಶಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>