ಮಡೆ ಮಡೆ ಸ್ನಾನದ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿನಿಂದ ಕೆಲವರಿಗೆ ಸಮಾಧಾನವಾದರೂ ಬಹಳಷ್ಟು ಜನರಲ್ಲಿ ಅಸಮಾಧಾನವಿದೆ.
ಎಂಜಲು ಬಾಳೆಯ ಮೇಲೆ ಹೊರಳಾಡುವುದಕ್ಕೂ, ಚರ್ಮ ವ್ಯಾಧಿ ನಿವಾರಣೆಗೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂಬುದು ಅನೇಕರ ವಾದ. ಆದರೆ ಮಡೆ ಮಡೆ ಸ್ನಾನದಲ್ಲಿ ವೈಜ್ಞಾನಿಕತೆ ಇದೆ. ಧಾರ್ಮಿಕ ವಿಚಾರಗಳಲ್ಲಿ ಎಷ್ಟರಮಟ್ಟಿಗೆ ವೈಜ್ಞಾನಿಕತೆ ಇದೆ
ಎಂದು ಹುಡುಕ ಹೊರಟೆ. ಮನುಷ್ಯನ ಶರೀರದಲ್ಲಿ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಪ್ರತಿ ಭಾವನೆಯ ಹಿಂದೆ ಒಂದು ರೀತಿಯ ರಾಸಾಯನಿಕ ಕ್ರಿಯೆ ನಡೆದು ಅದು ಮನುಷ್ಯರ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಅದೇ ರೀತಿ ಬೇರೆಯವರ ಎಂಜಲು ಬಾಳೆಯ ಮೇಲೆ ಹೊರಳಾಡುವಾಗ ಆ ವ್ಯಕ್ತಿಗೆ ಅಸಹ್ಯ ಭಾವ ಉಂಟಾಗುತ್ತದೆ. ಈ ಸಂವೇದನೆಯಿಂದ ಮಿದುಳು ಒಂದು ರೀತಿ ಹಾರ್ಮೋನ್ ಉತ್ಪತ್ತಿ ಮಾಡಿ ಆ ರಾಸಾಯನಿಕವೇ ಚರ್ಮವ್ಯಾಧಿ ಗುಣಪಡಿಸುತ್ತದೆ. ಇದು ಅವೈಜ್ಞಾನಿಕವಲ್ಲ.
ಕೆಲವೊಮ್ಮೆ ವೈದ್ಯರು ಗುಣಪಡಿಸಲಾಗದ ವ್ಯಾಧಿಗಳು ಧಾರ್ಮಿಕ ಕ್ಷೇತ್ರದಲ್ಲಿ ಪವಾಡದ ರೀತಿಯಲ್ಲಿ ಗುಣವಾಗುತ್ತವೆ. ಅದು ಶರೀರದಲ್ಲಿ ಆಗುವ ರಾಸಾಯನಿಕ ಬದಲಾವಣೆಯೇ ಹೊರತು ಬೇರೇನೂ ಅಲ್ಲ ಎಂದು ನನ್ನ ಅನಿಸಿಕೆ.