ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಕ್ರಿಯೆಯಿಂದ ಪರಿಣಾಮ

ಅಕ್ಷರ ಗಾತ್ರ

ಮಡೆ ಮಡೆ ಸ್ನಾನದ ಕುರಿತು ನ್ಯಾಯಾ­ಲಯ ನೀಡಿರುವ ತೀರ್ಪಿನಿಂದ ಕೆಲವರಿಗೆ ಸಮಾಧಾನವಾದರೂ ಬಹಳಷ್ಟು ಜನರಲ್ಲಿ ಅಸಮಾಧಾನವಿದೆ.

ಎಂಜಲು ಬಾಳೆಯ ಮೇಲೆ ಹೊರಳಾಡುವುದಕ್ಕೂ, ಚರ್ಮ ವ್ಯಾಧಿ ನಿವಾರಣೆಗೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂಬುದು ಅನೇಕರ ವಾದ. ಆದರೆ ಮಡೆ ಮಡೆ ಸ್ನಾನದಲ್ಲಿ ವೈಜ್ಞಾನಿಕತೆ ಇದೆ. ಧಾರ್ಮಿಕ ವಿಚಾರಗಳಲ್ಲಿ ಎಷ್ಟರಮಟ್ಟಿಗೆ ವೈಜ್ಞಾನಿಕತೆ ಇದೆ
ಎಂದು ಹುಡುಕ ಹೊರಟೆ. ಮನುಷ್ಯನ ಶರೀರದಲ್ಲಿ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಪ್ರತಿ ಭಾವನೆಯ ಹಿಂದೆ ಒಂದು ರೀತಿಯ ರಾಸಾಯನಿಕ ಕ್ರಿಯೆ ನಡೆದು ಅದು ಮನುಷ್ಯರ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಅದೇ ರೀತಿ ಬೇರೆಯವರ ಎಂಜಲು ಬಾಳೆಯ ಮೇಲೆ ಹೊರಳಾಡುವಾಗ ಆ ವ್ಯಕ್ತಿಗೆ ಅಸಹ್ಯ ಭಾವ ಉಂಟಾಗುತ್ತದೆ. ಈ ಸಂವೇದನೆಯಿಂದ ಮಿದುಳು ಒಂದು ರೀತಿ ಹಾರ್ಮೋನ್‌ ಉತ್ಪತ್ತಿ ಮಾಡಿ ಆ ರಾಸಾಯ­ನಿಕವೇ ಚರ್ಮವ್ಯಾಧಿ ಗುಣಪಡಿಸುತ್ತದೆ. ಇದು ಅವೈಜ್ಞಾನಿಕವಲ್ಲ.

ಕೆಲವೊಮ್ಮೆ ವೈದ್ಯರು ಗುಣಪಡಿಸಲಾಗದ ವ್ಯಾಧಿಗಳು ಧಾರ್ಮಿಕ ಕ್ಷೇತ್ರದಲ್ಲಿ ಪವಾಡದ ರೀತಿಯಲ್ಲಿ ಗುಣವಾಗುತ್ತವೆ. ಅದು ಶರೀರ­ದಲ್ಲಿ ಆಗುವ ರಾಸಾಯನಿಕ ಬದಲಾವ­ಣೆಯೇ ಹೊರತು ಬೇರೇನೂ ಅಲ್ಲ ಎಂದು ನನ್ನ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT